ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಕ್ಕೆ ಇನ್ನು ಹತ್ತು ದಿನಗಳು ಬಾಕಿ ಇರುವಂತೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೊಡ್ಡ ಉಡುಗೊರೆಯೊಂದನ್ನು ದೇಶಕ್ಕೆ ಕೊಟ್ಟಿದೆ.
ಜಮ್ಮು ಕಾಶ್ಮೀರ ಇನ್ನು ಮುಂದೆ ರಾಜ್ಯವಾಗಿ ಪರಿಗಣಿತವಾಗುವುದಿಲ್ಲ. ಬದಲಾಗಿ ಅದು ಕೇಂದ್ರಡಾಳಿತ ಪ್ರದೇಶವಾಗಿ ಘೋಷಣೆಯಾಗುವ ಸಾಧ್ಯತೆಗಳಿದೆ. ಈ ಕುರಿತಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಹತ್ವದ ಮಸೂದೆಯನ್ನು ರಾಜ್ಯ ಸಭೆಯಲ್ಲಿ ಮಂಡಿಸಿದ್ದು, ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಲಾಗುವುದು ಎಂದು ಘೋಷಣೆ ಮಾಡಿದ್ದಾರೆ.ಜೊತೆಗೆ ವಿಶೇಷ ಅಧಿಕಾರವೂ ರದ್ದುಗೊಳ್ಳಲಿದೆ.

ಮಸೂದೆಯ ಪ್ರಕಾರ ಸಂವಿಧಾನದ ಪರಿಚ್ಛೇಧ 370 ಮತ್ತು 35(ಎ) ರದ್ದುಗೊಳ್ಳಲಿದ್ದು, ಆಡಳಿತಾತ್ಮಕ ದೃಷ್ಟಿಯಿಂದ ಜಮ್ಮು ಕಾಶ್ಮೀರ ಮತ್ತು ಲಡಾಕ್ ಎಂದು ಎರಡು ವಿಭಾಗಗಳಾಗಿ ವಿಂಗಡನೆಯಾಗಲಿದೆ. ಈ ಎರಡು ಪ್ರದೇಶಗಳು ಕೇಂದ್ರಡಾಳಿತ ಪ್ರದೇಶವಾಗಲಿದೆ.

ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಈ ಮಸೂದೆಗಳ ಚರ್ಚೆ ನಡೆಯಲಿದೆ.
ಒಟ್ಟಿನಲ್ಲಿ ನರೇಂದ್ರ ಮೋದಿಯವರು ದೇಶಕ್ಕೆ ಸ್ವಾತಂತ್ರ್ಯ ದಿನಾಚರಣೆಯ ಉಡುಗೊರೆ ಕೊಟ್ಟಿದ್ದಾರೆ.ಇಷ್ಟು ದಿನಗಳ ಜಮ್ಮು ಕಾಶ್ಮೀರ ಭಾರತದ ಭಾಗವಾಗಿದ್ದರೂ ಅಲ್ಲಿ ಇತರರು ಭೂಮಿ ಖರೀದಿಸುವ ಹಾಗಿಲ್ಲ ಹೀಗೆ ಅನೇಕ ಕಟ್ಟಳೆಗಳಿತ್ತು.

ಈ ಐತಿಹಾಸಿಕ ಮಸೂದೆ ಅಂಗೀಕರವಾದರೆ ದೇಶದ ವಿವಿಧ ರಾಜ್ಯಗಳಂತೆ, ಕೇಂದ್ರಡಾಳಿತ ಪ್ರದೇಶದಂತೆ ಜಮ್ಮು ಕಾಶ್ಮೀರವೂ ಗುರುತಿಸಕೊಳ್ಳಲಿದೆ. ಅಲ್ಲಿದೆ ಸಮಾನತೆ ನೆಲೆಯಾಗುತ್ತದೆ.

Discussion about this post