ಹಿಂದೊಮ್ಮೆ ಒಂದಂಕಿ ಲಾಟರಿ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅಮಾನತುಗೊಂಡಿದ್ದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ದಂಧೆಕೋರ ಪಾರಿ ರಾಜನ್ ಜೊತೆ ನಿಕಟ ಸಂಬಂಧ ಹೊಂದಿದ್ದರು ಅನ್ನುವ ಕಾರಣಕ್ಕೆ ಅವರನ್ನು ಅಮಾನತು ಮಾಡಲಾಗಿತ್ತು. ಆದಾದ ಕೆಲವು ತಿಂಗಳ ನಂತರ ಅಮಾನತು ಆದೇಶವನ್ನು ರಾಜ್ಯ ಸರ್ಕಾರ ಹಿಂದಕ್ಕೆ ಪಡೆದಿತ್ತು.
ಮೈತ್ರಿ ಸರ್ಕಾರ ಬರುತ್ತಿದ್ದಂತೆ ಆಯಾಕಟ್ಟಿನ ಜಾಗದಲ್ಲಿ ಬಂದು ಕೂತಿದ್ದ ಅಲೋಕ್ ಕುಮಾರ್, ಯಡಿಯೂರಪ್ಪ ಸರ್ಕಾರ ಕೆಂಗಣ್ಣಿಗೂ ಗುರಿಯಾಗಿರುವುದು ಹಳೆಯ ವಿಷಯ.
ಇದೀಗ ಅಲೋಕ್ ಕುಮಾರ್ ಹೆಸರು ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಕೇಳಿ ಬಂದಿದ್ದು, ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐಗೆ ಒಪ್ಪಿಸಿದೆ.
ಇದರ ಬೆನ್ನಲ್ಲೇ ಅಲೋಕ್ ಕುಮಾರ್ ಅವರನ್ನು ಅಮಾನತುಗೊಳಿಸಿ ಅನ್ನುವ ಒತ್ತಡ ಹೆಚ್ಚಾಗಿದೆ. ಬಿಜೆಪಿಯ ಕೆಲ ನಾಯಕರು ಸಿಎಂಗೆ ಈ ಸಂಬಂಧ ಮನವಿ ಸಲ್ಲಿಸಿದ್ದು, ಸಿಬಿಐ ತನಿಖೆ ಸಂದರ್ಭದಲ್ಲಿ ಅವರು ಅಧಿಕಾರದಲ್ಲಿದ್ದರೆ ತನಿಖೆ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿದೆ. ಹೀಗಾಗಿ ಅವರನ್ನು ಅಮಾನತುಗೊಳಿಸಿ ಎಂದು ಒತ್ತಾಯಿಸಿದ್ದಾರೆ.
ಒಂದು ವೇಳೆ ಅವರು ಅಮಾನತುಗೊಂಡರೆ ಎರಡನೇ ಬಾರಿಗೆ ಅಮಾನತುಗೊಂಡ ಹಾಗಾಗುತ್ತದೆ.
ಖಡಕ್ಕ್ ಅಧಿಕಾರಿ ಎಂದು ಹೆಸರು ಮಾಡಿರುವ ಅಲೋಕ್ ಹೀಗೆ ಅಮಾನತುಗೊಳ್ತಾರೆ ಅಂದರೆ ಅವರ ಸೇವೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅನುಮಾನಗಳು ಮೂಡುವುದು ಸಹಜ.
ಐಪಿಎಸ್ ಅಧಿಕಾರಿಗಳೇ ಹೀಗಾದರೆ ಇನ್ನು ಕೆಳ ಹಂತದ ಅಧಿಕಾರಿಗಳು ಹೇಗಿರಬೇಡ. ಪರಿಸ್ಥಿತಿ ನೋಡಿದರೆ ಹೌದು ಪ್ರಜಾಪ್ರಭುತ್ವ ಅಪಾಯದಲ್ಲಿದೆ.
Discussion about this post