ಬೀಳಿಸುವ ನೀಚ ರಾಜಕಾರಣ ಮಾಡುವವನು ನಾನಲ್ಲ. ಅದೇನಿದ್ರು ದೇವೇಗೌಡ ಮತ್ತು ಅವರ ಮಕ್ಕಳ ಹುಟ್ಟುಗುಣ. ದೇವೇಗೌಡರು ಬೇರೆ ಸರಕಾರ ಉರುಳಿಸೋದರಲ್ಲಿ ನಿಪುಣರು ಮತ್ತು ಅವರ ಹುಟ್ಟು ಗುಣ. ಧರ್ಮಸಿಂಗ್ ಅವರಿಗೆ ಬೆಂಬಲ ಕೊಟ್ಟಿದ್ದರು. ವಿತ್ಡ್ರಾ ಮಾಡಿದ್ರು. ಧರ್ಮಸಿಂಗ್ ಸರಕಾರ, ಬೊಮ್ಮಾಯಿ ಸರಕಾರದಲ್ಲಿ ಮಂತ್ರಿಯಾಗಿದ್ದುಕೊಂಡು ಬೀಳಿಸಿದ್ದು ಯಾರು? ಇವತ್ತೇನಾದ್ರು ಬಿಜೆಪಿ ಅಧಿಕಾರಕ್ಕೆ ಬಂದಿದ್ದರೆ ನೇರವಾಗಿ ದೇವೇಗೌಡ, ಕುಮಾರಸ್ವಾಮಿ ಕಾರಣ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಧರ್ಮಸಿಂಗ್ ಸರಕಾರ ಬೀಳಿಸಿ ರಾತ್ರೋರಾತ್ರಿ ಬಿಜೆಪಿ ಕ್ಯಾಂಪ್ಗೆ ಹೋಗಿ ಸೇರಿದ್ದು ಯಾರು? ಬಿಜೆಪಿ ಜತೆ ಸರಕಾರ ಮಾಡಿದ್ರೆ ನನ್ನ ಹೆಣದ ಮೇಲೆ ಮಾಡ್ಬೇಕು ಎಂದು ದೇವೇಗೌಡರು ಹೇಳಿದ್ರು. ದೇವೇಗೌಡರ ಒಪ್ಪಿಗೆ ಇಲ್ಲದೆ ಕುಮಾರಸ್ವಾಮಿ ಬಿಜೆಪಿ ಜತೆ ಸರಕಾರ ರಚಿಸಲು ಸಾಧ್ಯವೇ ಇರಲಿಲ್ಲ. ಎಲ್ಲವೂ ನಾಟಕ. 20-20 ಸರಕಾರದಲ್ಲಿ ಯಡಿಯೂರಪ್ಪಗೆ ಅಧಿಕಾರ ಬಿಟ್ಟುಕೊಡದೆ ವಚನಭ್ರಷ್ಟರಾಗಿದ್ದು ಯಾರು? ಇದೇ ದೇವೇಗೌಡ, ಕುಮಾರಸ್ವಾಮಿ. ಅವರ ಮಾತಿನಂತೆ ನಡೆದುಕೊಂಡಿದ್ದರೆ, ಮತ್ತೆ ಬಿಜೆಪಿ 108 ಸ್ಥಾನಗಳನ್ನು ಗೆಲ್ಲಲು ದೇವೇಗೌಡರು, ಕುಮಾರಸ್ವಾಮಿ ಕಾರಣ. ಬಿಜೆಪಿ ಕರ್ನಾಟಕದಲ್ಲಿ ಬೆಳೆಯೋದಕ್ಕೆ ಅಪ್ಪ ಮಕ್ಕಳು ಕಾರಣ ಎಂದು ನೇರವಾಗಿ ಆರೋಪ ಮಾಡಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಫ್ರೆಂಡ್ಲಿ ಫೈಟ್ ಮಾಡೋಣ. ಅಲೈನ್ಸ್ ಬೇಡ ಎಂದು ನಾನು ಹೇಳಿದ್ದು ನಿಜ. ಪಾರ್ಲಿಮೆಂಟ್ ಚುನಾವಣೆಯಲ್ಲಿ ಹಳೆಯದನ್ನೆಲ್ಲ ಮರೆತು ರಾಜಕೀಯ ಮಾಡೋಣ ಎಂದು ಹೇಳಿದ್ದೆ. ಜಂಟಿಯಾಗಿ ರಾಜ್ಯಾದ್ಯಂತ ಎಂಪಿ ಚುನಾವಣೆಗೆ ಪ್ರಚಾರ ಮಾಡಿದ್ದೇವೆ. ಆದರೆ ಕಾಂಗ್ರೆಸ್ನ ಹೆಚ್ಚಿನ ಅಭ್ಯರ್ಥಿಗಳು ಅನಿರೀಕ್ಷಿತವಾಗಿ ಸೋಲಲು ಯಾರು ಕಾರಣ? ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲಿಗೆ ಸಿದ್ದರಾಮಯ್ಯ ಕಾರಣ ಎಂದು ದೇವೇಗೌಡರು ಆರೋಪಿಸಿದ್ದಾರೆ. ಚಾಮರಾಜನಗರ, ಚಿಕ್ಕಬಳ್ಳಾಪುರ, ಬೆಂಗಳೂರು ಉತ್ತರ ಮತ್ತಿತರ ಜಿಲ್ಲೆಗಳಲ್ಲಿ ನಮ್ಮ ಅಭ್ಯರ್ಥಿಗಳು ಸೋಲಲು ಯಾರು ಕಾರಣ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಮೊದಲಿಂದಲೂ ಸಿದ್ದರಾಮಯ್ಯ ಲಿಂಗಾಯಿತರ ವಿರೋಧಿ, ಒಕ್ಕಲಿಗರ ವಿರೋಧಿ ಎಂದೆಲ್ಲಾ ಆರೋಪಿಸುತ್ತಾರೆ. ನಾನು ಮನುಷ್ಯ ಜಾತಿಯನು. ಜಾತ್ಯಾತೀತತೆ ಮೈಗೂಡಿಸಿಕೊಂಡಿದ್ದೇನೆ. ಕಾಂಗ್ರೆಸ್ ಸ್ಥಾನಗಳು 80ಕ್ಕೆ ಇಳಿದ ವಿಚಾರವಾಗಿ ದೇವೇಗೌಡರು ಲೇವಡಿ ಮಾಡುತ್ತಾರೆ. ಕುಮಾರಸ್ವಾಮಿ ಬಿಜೆಪಿ ಜತೆ ಸೇರಿ ಬಹಳ ಒಳ್ಳೆ ಸಿಎಂ ಆಗಿದ್ದರಲ್ಲಾ? ಆದರೂ 59 ಸ್ಥಾನದಿಂದ 27 ಸ್ಥಾನಕ್ಕೆ ಇಳಿದ್ರಲ್ಲಾ? ದೇವೇಗೌಡರು ಯಾರನ್ನು ಬೆಳೆಸುವುದಿಲ್ಲ ಎಂದು ಸಿದ್ದರಾಮಯ್ಯ ವಿಷಾಧ ವ್ಯಕ್ತ ಪಡಿಸಿದರು.
Discussion about this post