ಡಿಕೆಶಿ ಕೊರಳಿಗೆ ಸುತ್ತಿಕೊಂಡಿರುವ ಅಕ್ರಮ ಅವ್ಯವಹಾರದ ತನಿಖೆ ಇದೀಗ ನಿಧಾನವಾಗಿ ವಿಸ್ತಾರವಾಗತೊಡಗಿದೆ. ಈಗಾಗಲೇ ಶರ್ಮಾ ಟ್ರಾವೆಲ್ಸ್ ಮಾಲೀಕ, ಉದ್ಯಮಿ ಸಚಿನ್ ನಾರಾಯಣ ಸೇರಿದಂತೆ ಹಲವು ಆಪ್ತರಿಗೆ ಬಲೆ ಬೀಸಿರುವ ಇಡಿ ಮುಂದುವರಿದ ಭಾಗವಾಗಿ ಕಾಂಗ್ರೆಸ್ ಶಾಸಕಿಯೊಬ್ಬರಿಗೆ ಸಮನ್ಸ್ ನೀಡಿದೆ.
ಕಟಕಟೆಯಲ್ಲಿ ಡಿಕೆಶಿ : ಕೋರ್ಟ್ ಹಾಲ್ ನಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್….
ಡಿಕೆಶಿ ಆಪ್ತೆ ಎಂದೇ ಗುರುತಿಸಿಕೊಂಡಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಸಮನ್ಸ್ ಕೊಟ್ಟಿರುವ ಇಡಿ ಇದೇ ತಿಂಗಳ 19 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಸೆಪ್ಟಂಬರ್ 14 ರಂದು ವಿಚಾರಣೆಗೆ ಹಾಜರಾಗುವಂತೆ ಈ ಹಿಂದೆ ಇಡಿ ಸೂಚಿಸಿತ್ತು. ಆದರೆ ಅಂದು ಬರಲಾಗುವುದಿಲ್ಲ ಮತ್ತೊಂದು ದಿನ ನಿಗದಿ ಮಾಡಿ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಮನವಿ ಮಾಡಿದ ಹಿನ್ನಲೆಯಲ್ಲಿ ಸಪ್ಟಂಬರ್ 19ರಂದು ವಿಚಾರಣೆಗೆ ಹಾಜರಾಗುವಂತೆ ಮತ್ತೊಂದು ನೊಟೀಸ್ ಅನ್ನು ಇಡಿ ನೀಡಿತ್ತು.

ಇಡಿ ಸಮನ್ಸ್ ಕೊಟ್ಟಿರುವುದನ್ನು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟಪಡಿಸಿದ್ದು, ವಿವಿಧ ವಾಹಿನಿಗಳಿಗೆ ಕೊಟ್ಟ ಹೇಳಿಕೆಯಲ್ಲಿ ವಿಚಾರಣೆಗೆ ಹಾಜರಾಗುವುದಾಗಿ ಹೇಳಿದ್ದಾರೆ.
ಮಾಹಿತಿಗಳ ಪ್ರಕಾರ ಡಿಕೆಶಿ ಅಕ್ರಮ ಅಸ್ತಿ ಅವ್ಯವಹಾರ ಪ್ರಕರಣದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಸಾಕ್ಷಿಯಾಗಿ ಪರಿಗಣಿಸುವ ಸಾಧ್ಯತೆಗಳಿದೆ ಎನ್ನಲಾಗಿದೆ.

ಈ ಹಿಂದೆ ಡಿಕೆಶಿಯವರನ್ನು ಇಡಿ ಬಂಧಿಸಿದ್ದ ವೇಳೆ ದೆಹಲಿಗೆ ತೆರಳಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ನ್ಯಾಯಾಲಯದಲ್ಲಿ ಡಿಕೆಶಿಯವರನ್ನು ಭೇಟಿಯಾಗಿದ್ದರು. ಜೊತೆಗೆ ಡಿಕೆಶಿ ಕಾನೂನು ಸಂಕಷ್ಟದಿಂದ ಹೊರ ಬರಲಿ ಎಂದು ವಿಶೇಷ ಪೂಜೆ, ಹೋಮ ಹವನ ಪ್ರಾರ್ಥನೆಗಳನ್ನು ಕೂಡಾ ನಡೆಸಿ ಸುದ್ದಿಯಾಗಿದ್ದರು.
Discussion about this post