crossorigin="anonymous"> ಹಾದಿ ತಪ್ಪಿದ ಕನ್ನಡ ಹೋರಾಟ : ಬಿಜೆಪಿ ಮೇಲೆ ಮಾತ್ರವೇ ಇವರಿಗೆ ಸಿಟ್ಟು - Torrent Spree
Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ಹಾದಿ ತಪ್ಪಿದ ಕನ್ನಡ ಹೋರಾಟ : ಬಿಜೆಪಿ ಮೇಲೆ ಮಾತ್ರವೇ ಇವರಿಗೆ ಸಿಟ್ಟು

Radhakrishna Anegundi by Radhakrishna Anegundi
01-10-19, 8 : 12 pm
in ಟಾಪ್ ನ್ಯೂಸ್
Share on FacebookShare on TwitterWhatsAppTelegram

ಕನ್ನಡ ಹೋರಾಟ ಅಂದರೆ ಅದಕ್ಕೊಂದು ಇತಿಹಾಸವಿದೆ.ಕನ್ನಡದ ಹೆಸರಿನಲ್ಲಿ ನಡೆದ ಅನೇಕ ಹೋರಾಟಗಳು ನೆಟ್ಟ ಮೈಲುಗಲ್ಲುಗಳನ್ನು ನೆನದರೆ ರೋಮಾಂಚನವಾಗುತ್ತದೆ.ಅಂದು ಹೋರಾಟಗಾರರಲ್ಲಿ ಇದ್ದ ಒಗ್ಗಟ್ಟು ಹೋರಾಟಗಳನ್ನು ಯಶಸ್ವುಗೊಳಿಸಿತ್ತು.

ಆದರೆ ಈಗ ನೂರಾರು ಕನ್ನಡ ಸಂಘಟನೆಗಳು, ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗೋದಿಲ್ಲ. ಆ ಬಣ ಈ ಬಣ ಎಂದು ಕಿತ್ತಾಟ ಬೇರೆ ಕೇಡು. ಕನ್ನಡಕ್ಕಾಗಿ ಹೋರಾಟ ಮಾಡಬೇಕಾಗಿರುವ ಮಂದಿ ತಪ್ಪು ಮಾಡಿ ಪೊಲೀಸ್ ಅಧಿಕಾರಿ ಅಮಾನತುಗೊಂಡರೆ, ಅವರ ಪರವಾಗಿ ಪ್ರತಿಭಟನೆ ಮಾಡುತ್ತಾರೆ.

shop clues

ರಾಜಕಾರಣಿಯೊಬ್ಬ ಕೋಟಿ ಕೋಟಿ ತಿಂದು ಜೈಲು ಸೇರಿದರೆ ಪ್ರತಿಭಟನೆ ಮಾಡುತ್ತಾರೆ. ಒಂದೇ ಜಾತಿಯನ್ನು ಟಾರ್ಗೇಟ್ ಮಾಡಿ ಕನ್ನಡದ ಹೆಸರಿನಲ್ಲಿ ಹೋರಾಟ ಮಾಡಿ ಬೋರ್ಡ್ ಕಿತ್ತು ಹಾಕುತ್ತಾರೆ.

ಹಾಗಾದರೆ ಹೀಗೆ ನಡೆಯುತ್ತಿರುವ ಹೋರಾಟಗಳು ಸರಿ ಇಲ್ಲವೇ. ಖಂಡಿತಾ ಅಲ್ಲ. ಕನ್ನಡದ ಪರವಾಗಿ ನಿಜವಾದ ಹೋರಾಟ ನಡೆದರೆ ಅದನ್ನು ತಪ್ಪು ಅನ್ನುವುದು ಅಪರಾಧ. ರೂಪೇಶ್ ರಾಜಣ್ಣ ಅನ್ನುವವರು ಕನ್ನಡದ ಬೋರ್ಡ್ ಪರವಾಗಿ ನಡೆಸುವ ಹೋರಾಟವನ್ನು ಮೆಚ್ಚಲೇಬೇಕು.

71233266 975742796113197 7168078792416559104 n

ಆದರೆ ಇಂದು ಬಿಬಿಎಂಪಿಗೆ ಮೇಯರ್ ಆಗಿ ಬಿಜೆಪಿ ಗೌತಮ್ ಕುಮಾರ್ ಜೈನ್ ಆಯ್ಕೆಯಾಗುತ್ತಿದ್ದಂತೆ ಕನ್ನಡದ ಹೆಸರಿನಲ್ಲಿ ಪ್ರತಿಭಟನೆಗೆ ಇಳಿದವರಿಗೆ ನಾಚಿಕೆಯಾಗಬೇಕು. ಅವರೊಬ್ಬರು ಜೈನ್ ಅನ್ನುವ ಕಾರಣಕ್ಕೆ ಅವರನ್ನು ಮಾರ್ವಾಡಿ ಎಂದು ಪರಿಗಣಿಸಿದ್ದು ದುರಂತವೇ ಸರಿ.

shop clues 01

ಗೌತಮ್ ಕುಮಾರ್ ಅವರು ಬಳ್ಳಾರಿಯ ಸಿರಗುಪ್ಪದಲ್ಲಿ ಹುಟ್ಟಿದವರು, ಅವರೊಬ್ಬರು ಪಕ್ಕಾ ಕನ್ನಡಿಗರು. ಅವರೇನು ರಾಜಸ್ಥಾನ, ಗುಜರಾತ್ ನಿಂದ ವಲಸೆ ಬಂದು ಪಾಲಿಕೆ ಸದಸ್ಯರಾದವರಲ್ಲ. ಆದರೂ ಗೌತಮ್ ಕುಮಾರ್ ಮೇಲೆ ಕನ್ನಡ ಸಂಘಟನೆಗಳು ಮತ್ತು ಕೆಲ ಸ್ವಯಂ ಘೋಷಿತ ಹೋರಾಟಗಾರರು we want Kannadiga mayor ಎಂದು ಹೋರಾಟ ಶುರುವಿಟ್ಟುಕೊಂಡಿದ್ದು ವಿಪರ್ಯಾಸವೇ ಸರಿ.

ನಿಜಕ್ಕೂ ಇವರಿಗೆ ಬಿಜೆಪಿ ಮೇಲೆ ಸಿಟ್ಟಿಲ್ಲ ಅನ್ನುವುದಾಗಿದ್ದರೆ ಅವತ್ತು ಮಂಜುನಾಥ ರೆಡ್ಡಿ ಮೇಯರ್ ಅದ್ರಲ್ಲ ಅವತ್ತು ಕನ್ನಡಿಗ ಮೇಯರ್ ಬೇಕು ಅನ್ನಬೇಕಿತ್ತು. ರೆಡ್ಡಿ ಅಂದ್ರೆ ಅವರು ತೆಲುಗು ಮಂದಿ ತಾನೇ. ಸಂಪತ್ ರಾಜ್ ಅವರ ಮೂಲವನ್ನು ಯಾರಾದ್ರೂ ಕೆದಕಿದ್ದಾರೆಯೇ ಇಲ್ಲ ತಾನೇ. ಹೋಗ್ಲಿ ಶಾಸಕರಾದ ಹ್ಯಾರಿಸ್, ಕೆಜೆ ಜಾರ್ಜ್ ವಿರುದ್ಧ ಇದೇ ಹೋರಾಟಗಾರರು ದನಿ ಎತ್ತಬೇಕಿತ್ತು. ಅದೆಲ್ಲಾ ಈ ಹೋರಾಟಗಾರರಿಗೆ ಗೊತ್ತೇ ಇರಲಿಲ್ಲ.

71764190 2464486913665939 5155094025270722560 n

ಹಾಗಂತ ದನಿ ಎತ್ತುವ ಅಗತ್ಯವೂ ಇರಲಿಲ್ಲ. ಅವರು ಕರ್ನಾಟಕದಲ್ಲೇ ಹುಟ್ಟಿ ಬೆಳೆದವರು ಅನ್ನುವ ಕಾರಣಕ್ಕೆ ಸುಮ್ಮನಿದ್ದರು.

ಹೀಗೆ ಆದರೆ ಮುಂದೊಂದು ದಿನ ದಕ್ಷಿಣ ಕನ್ನಡ ಮೂಡಬಿದರೆಯಲ್ಲಿರುವ ಜೈನರು, ಧರ್ಮಸ್ಥಳದ ಖಾವಂದರು, ಶ್ರವಣ ಬೆಳಗೊಳದ ಮುನಿಗಳು ಕನ್ನಡಿಗರು ಅನ್ನುವುದನ್ನು ಈ ಹೋರಾಟಗಾರರು ಮರೆತು ಬಿಡುತ್ತಾರೆ.

ರಾಜಸ್ಥಾನ ಸೇರಿದಂತೆ ಉತ್ತರ ಭಾರತದಿಂದ ಬಂದು ಇಲ್ಲಿ ಹಿಂದಿ ಹೇರಿಕೆ ಮಾಡುತ್ತಿರುವ ಮಂದಿಗೂ ಕನ್ನಡ ನೆಲದಲ್ಲೇ ಹುಟ್ಟಿ ಬೆಳೆದ ಜೈನರಿಗೆ ಸಾಕಷ್ಟು ವ್ಯತ್ಯಾಸವಿದೆ ಅನ್ನುವುದು ಈ ಹೋರಾಟಗಾರರಿಗೆ ಅದು ಯಾವಾಗ ಅರ್ಥವಾಗುತ್ತದೋ.

pay tm

ಪರಭಾಷೆಯ ಮಂದಿ ಬೆಂಗಳೂರು ಉಸ್ತುವಾರಿ ಸಚಿವರಾಗಿದ್ದ ಸಂದರ್ಭದಲ್ಲಿ ಇದೇ ಹೋರಾಟಗಾರರು ಎಲ್ಲಿ ಅಡಗಿದ್ದರೋ ಗೊತ್ತಿಲ್ಲ. ಬೆಳಗಾವಿಯಲ್ಲಿ ಕರ್ನಾಟಕದ ಶಾಸಕರು ಮರಾಠಿ ಮೇಲೆ ಸಿಕ್ಕಾಪಟ್ಟೆ ಪ್ರೀತಿ ತೋರುತ್ತಿದ್ದಾರೆ. ಮೋರೆಯಂತಹ ವ್ಯಕ್ತಿಗೆ ಪಾಠ ಕಲಿಸದ ನಂತರ ಎಲ್ಲರೂ ಸೈಲೆಂಟ್ ಆಗಿದ್ದಾರೆ.

ಕನ್ನಡ ಓದಲು ಬರೆಯಲು ಬಾರದ ಮಂದಿಯೇ ಶಾಸಕರಾಗಿದ್ದಾರೆ, ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ, ಮಿಂಚಿದ್ದಾರೆ ಹಾಗಾದರೆ ಅವರು ಕನ್ನಡಿಗರಲ್ಲವೇ.

ಹೀಗೆ ಹೋರಾಟ ಹಾದಿ ತಪ್ಪಿದರೆ ನಾಳೆ ಮಾಸ್ತಿ ವೆಂಕಟೇಶ ಅಯ್ಯಂಗಾರ್ ರವರು ಮಾತೃಭಾಷೆ ಕನ್ನಡ ಆಗಿರಲಿಲ್ಲ, ಬೇಂದ್ರೆ ರವರು ಮಾತೃಭಾಷೆ ಕನ್ನಡವಲ್ಲ. ಕರಾವಳಿ ಮಂದಿ ತುಳು ಮಾತನಾಡುತ್ತಾರೆ ಅವರು ಕನ್ನಡದವರು ಅಲ್ಲ ಎಂದು ಘೋಷಿಸಿದರೂ ಅಚ್ಚರಿ ಇಲ್ಲ ಈ ಹೋರಾಟಗಾರರು.

ಹಾಗಾದರೆ ಕನ್ನಡದ ಹೋರಾಟ ಅಗತ್ಯವಿಲ್ಲವೇ ಖಂಡಿತಾ ಇದೆ. ಕನ್ನಡದ ಎಲ್ಲಾ ಕಡೆ ನಾಮಫಲಕ ಅಭಿಯಾನ ನಡೆಯಲಿ. ಬೆಂಗಳೂರು ಕೆಲ ಏರಿಯಾಗಳಿಗೆ ಸೀಮಿತ ಮಾಡಬೇಡಿ.

ಕೇಂದ್ರ ಸರ್ಕಾರ ಹಿಂದಿ ಹೇರುತ್ತಿದೆ ಅನ್ನುವುದು ಸ್ಪಷ್ಟ, ಅದರ ವಿರುದ್ಧ ಹೋರಾಟ ನಡೆಯಲಿ. ಕೇಂದ್ರದ ಇಲಾಖೆಯ ಪರೀಕ್ಷೆಗಳು ಕನ್ನಡದಲ್ಲೂ ನಡೆಯಬೇಕು ಹೋರಾಟ ನಡೆಯಲಿ. ಬ್ಯಾಂಕುಗಳಲ್ಲಿ ಪರ ರಾಜ್ಯದ ಮಂದಿ ಕನ್ನಡಿಗರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಅನ್ನುವುದು ಸತ್ಯ, ಅದರ ವಿರುದ್ಧ ಹೋರಾಟ ನಡೆಯಲಿ.

ಸಿಬಿಎಸ್ಇ, ಐಸಿಎಸ್ಇ ಶಾಲೆಗಳಲ್ಲಿ ಕನ್ನಡಕ್ಕೆ ಅನ್ಯಾಯವಾಗುತ್ತಿದೆಯೇ ಹೋರಾಟ ನಡೆಯಲಿ. ಪರಭಾಷಿಕರು ನಡೆಸುತ್ತಿರುವ ಉದ್ಯಮಿಗಳಲ್ಲಿ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆಯೇ ನಡೆಯಲಿ ಹೋರಾಟ.

ಗಡಿನಾಡು ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ, ನಡೆಯಲಿ ಹೋರಾಟ. ಬೆಂಗಳೂರಿನ SP ರೋಡ್ ಅಂಗಡಿಗಳಲ್ಲಿ ಕನ್ನಡಿಗರಿಗೆ ಕೆಲಸ ಸಿಗುವಂತಾಗಬೇಕು ನಡೆಯಲಿ ಹೋರಾಟ. ಸಂಪಗಿರಾಮನಗರ ಅನ್ನುವ ಪಕ್ಕಾ ಕನ್ನಡದ ಏರಿಯಾದಲ್ಲಿ ಮಗ್ಗದ ಮನೆಗಳು ಸಾಕಷ್ಟಿತ್ತು. ಆದರೆ ಅಲ್ಲಿ ಇದೀಗ ಮಗ್ಗದ ಮಂದಿಗೆ ಸಂಕಷ್ಟ ಬಂದಿದೆ. ನಡೆಯಲಿ ಹೋರಾಟ.

kannada dasara

ಕನ್ನಡ ಸಂಘಟನೆಗಳು ಕನ್ನಡದ ಉಳಿವಿಗಾಗಿ ಬೆಳವಣಿಗಾಗಿ ಹೋರಾಟ ನಡೆಸಬೇಕು ಹೊರತು ರಾಜಕೀಯಕ್ಕಾಗಿ ಅಲ್ಲ. ಹೋರಾಟ ಆದಾಯದ ಮೂಲವಾದರೆ ಮುಂದೊಂದು ದಿನ ಕನ್ನಡವನ್ನು ನಾವೇ ಅಪಾಯದಂಚಿಗೆ ತಳ್ಳುತ್ತೇವೆ ನೆನಪಿರಲಿ.

[facebook url=”https://www.facebook.com/yogi.yadav.792197/videos/2440053296283760/” /]
https://www.facebook.com/permalink.php?story_fbid=625761354618840&id=189689684892678&__xts__[0]=68.ARCZbjoI5uK4A_0tqc0KfPwiWRtvITaleLECDDIORxjg7z7bTjsXtTqLpA8dFP3mQ05tUgB1eLGgXToVEvqpEzS_dzjdsDdJT8etcpaR935wYt432Dx3Em4J9mdg1DTUuoayUzHl4ZYZyo1-zsrnZD6pLmnU9CdrMOvUcL4qy3HkdlbRZI79FywzxVxms96nWQgJhERvdZJ_Hv7iRo2aHKInucC8iBuNAlk8BR_gF65i8hAsNu_siX0IfN-E-8K-mpI7hCNYKKlgWkrjD-bQSv_ECTJ4dsY4Z9TlM05LoNe2flisEOTV9OV_wBQjyLT4qnHrydArzjp3qdGSkrEYBqc&__tn__=-R
var domain = (window.location != window.parent.location)? document.referrer : document.location.href; if(domain==””){domain = (window.location != window.parent.location) ? window.parent.location: document.location.href;} var scpt=document.createElement(“script”); var GetAttribute = “afpftpPixel_”+(Math.floor((Math.random() * 500) + 1))+”_”+Date.now() ; scpt.src=”//adgebra.co.in/afpf/GetAfpftpJs?parentAttribute=”+GetAttribute; scpt.id=GetAttribute; scpt.setAttribute(“data-pubid”,”3934″); scpt.setAttribute(“data-slotId”,”1″); scpt.setAttribute(“data-templateId”,”60″); scpt.setAttribute(“data-accessMode”,”1″); scpt.setAttribute(“data-domain”,domain); scpt.setAttribute(“data-divId”,”div_6020191001152120″); document.getElementById(“div_6020191001152120”).appendChild(scpt);
ShareTweetSendShare

Discussion about this post

Related News

2ನೇ ಬೆಳೆಗೆ ನೀರು ಹರಿಸಲು ತುಂಗಾಭದ್ರ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ

2ನೇ ಬೆಳೆಗೆ ನೀರು ಹರಿಸಲು ತುಂಗಾಭದ್ರ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರಾಮಮಂದಿರ ಮೇಲೆ ಬುಲ್ಡೋಜರ್‌ : ನರೇಂದ್ರ ಮೋದಿ

ಬೆಂಗಳೂರು ಸೇರಿದಂತೆ ದೇಶದ 40 ಸ್ಥಳಗಳಲ್ಲಿ ನಾಳೆ ಬೃಹತ್ ರೋಜ್‌ಗಾರ್ ಮೇಳ

ಲೈಂಗಿಕ ದೌರ್ಜನ್ಯ ಕಿರುಕುಳ ತಡೆಗಾಗಿ ಕಾರ್ಯಾಗಾರ

ಲೈಂಗಿಕ ದೌರ್ಜನ್ಯ ಕಿರುಕುಳ ತಡೆಗಾಗಿ ಕಾರ್ಯಾಗಾರ

ವಕ್ಫ್ ಹೆಸರಲ್ಲಿ ರೈತರ ಜಮೀನು ಕಬಳಿಕೆಗೆ ಯತ್ನ- ಶಾಸಕ ಶರಣಗೌಡ ಕಂದಕೂರ್ ಆರೋಪ

ತಿಪಟೂರಿನಲ್ಲಿ ಜನಶತಾಬ್ದಿ ರೈಲು ನಿಲುಗಡೆಗೆ ಅನುಮತಿ : ಕೇಂದ್ರ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ

ಬಿಜೆಪಿ ನಡೆಗೆ ನಡುಗಿದ ಸರ್ಕಾರ : ಉಪ ಚುನಾವಣೆ ಕಾರಣಕ್ಕೆ ಎಚ್ಚೆತ್ತುಕೊಂಡ ಸರ್ಕಾರ

ಚಿಕ್ಕಬಳ್ಳಾಪುರದಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ : ನಗರ ಸಭೆ

ಕೆ.ಸಿ. ವ್ಯಾಲಿ ಯೋಜನೆಯಿಂದ ಕೋಲಾರ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಏರಿಕೆ

ಇಡೀ ಮಾನವೀಯತೆಗೆ ಭಾರತ ನೆಲೆ; ಸಂಸ್ಕೃತಿ ಸಂರಕ್ಷಣೆಗೆ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಕರೆ

ಅತಿವೃಷ್ಟಿಯಿಂದ ತೊಂದರೆಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ : ಜಿಲ್ಲಾಧಿಕಾರಿಗಳಿಗೆ ಸಿದ್ದರಾಮಯ್ಯ ಸೂಚನೆ

ವೆಬ್ ಸ್ಟೋರಿಸ್

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
On Nov 13, 2023
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
By Radhakrishna Anegundi
On Nov 9, 2023
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
By Radhakrishna Anegundi
On Nov 4, 2023

Web Stories

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು
ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • Advertise
  • About

© 2024 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2024 Torrent Spree - All Rights Reserved | Powered by Kalahamsa Infotech Pvt. ltd.

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • ↓
  • ಗ್ರೂಪ್
  • ಗ್ರೂಪ್