ನಾಡ ದೇವತೆ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಸರ್ಕಾರಿ ದುಡ್ಡಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಾಡುಗಾರ ಚಂದನ್ ಶೆಟ್ಟಿ ತನ್ನ ನಿಶ್ಚಿತಾರ್ಥ ಮುಗಿಸಿಕೊಂಡಿದ್ದಾನೆ.
ನಿವೇದಿತಾ ಗೌಡಳಿಗೆ ಉಂಗುರು ತೊಡಿಸುವ ಮೂಲಕ ಕರ್ನಾಟಕದ ಜನರ ತೆರಿಗೆ ದುಡ್ಡಿನಲ್ಲಿ ಖಾಸಗಿ ಕಾರ್ಯಕ್ರಮ ಮುಗಿಸುವಲ್ಲಿ ಚಂದನ್ ಶೆಟ್ಟಿ ಯಶಸ್ವಿಯಾಗಿದ್ದಾನೆ. ಮಾತ್ರವಲ್ಲದೆ ಚಂದನ್ ಶೆಟ್ಟಿಯ ಉಂಗುರ ಬದಲಾಯಿಸುವ ಕಾರ್ಯಕ್ರಮಕ್ಕೆ ಸರ್ಕಾರವೇ ಚಂದನ್ ಶೆಟ್ಟಿ ಸಂಭಾವನೆ ಬೇರೆ ಕೊಡಲಿದೆ. ಹೌದು ಚಂದನ್ ಶೆಟ್ಟಿ ಮೈಸೂರಿನಲ್ಲಿ ಬಿಟ್ಟಿಯಾಗಿ ಸಂಗೀತ ಕಾರ್ಯಕ್ರಮ ಕೊಟ್ಟಿಲ್ಲ. ಗೌರವ ಧನದ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಫೀಸು ಸಂದಾಯವಾಗಿರುತ್ತದೆ.
ಇನ್ನು ಸರ್ಕಾರಿ ದುಡ್ಡಲ್ಲಿ ಚಂದನ್ ಶೆಟ್ಟಿಯ ಜಾತ್ರೆ ವಿಷಯ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಇದೊಂದು ಹೇಯ ಕೃತ್ಯ. ಅಕ್ಷಮ್ಯ ಅಪರಾಧ. ಈ ಅಪರಾಧಕ್ಕೆ ತಾಯಿ ಚಾಮುಂಡೇಶ್ವರಿ 6 ತಿಂಗಳಲ್ಲಿ ಶಿಕ್ಷೆ ವಿಧಿಸುತ್ತಾಳೆ ಅಂದಿದ್ದಾರೆ.
ಜೊತೆಗೆ ಈ ಸಂಬಂಧ ನೋಟಿಸ್ ಜಾರಿ ಮಾಡುವುದಾಗಿ ಹೇಳಿರುವ ವಿ ,ಸೋಮಣ್ಣ ಅವರಿಂದ ಉತ್ತರ ಬಂದ ಮೇಲೆ ಮುಂದಿನ ಕ್ರಮ ಅಂದಿದ್ದಾರೆ.
ಆದರೂ ಸರ್ಕಾರಿ ಕಾರ್ಯಕ್ರಮದಲ್ಲಿ ಖಾಸಗಿ ಹೈಡ್ರಾಮ ಬಗ್ಗೆ ಅದ್ಯಾಕೆ ಕನ್ನಡ ಸಂಘಟನೆಗಳು ಸೈಲೆಂಟ್ ಆಗಿವೆಯೋ ಗೊತ್ತಿಲ್ಲ.
Discussion about this post