ಅಕುಲ್ ಬಾಲಾಜಿ, ಸೃಜನ್ ಲೋಕೇಶ್, ಅನುಪಮ ಭಟ್, ಅನುಶ್ರೀ, ರೆಹಮಾನ್, ಶೀತಲ್ ಶೆಟ್ಟಿ, ಕಾವ್ಯ ಶಾಸ್ತ್ರಿ ಬಿಗ್ ಬಾಸ್ ಗೆ ಹೋಗಿ ಬಂದ ಪ್ರಮುಖ ನಿರೂಪಕ ಹಾಗೂ ನಿರೂಪಕಿಯರಾಗಿದ್ದಾರೆ.
ಇದೀಗ ಚೈತ್ರ ವಾಸುದೇವನ್ ಅನ್ನುವ ಕ್ಯೂಟ್ ನಿರೂಪಕಿ ಮನೆಯೊಳಗೆ ಪ್ರವೇಶಿಸಿದ್ದಾರೆ. ಈಗಾಗಲೇ ಅನೇಕ ವಾಹಿನಿಗಳ ಮನರಂಜನೆ ಕಾರ್ಯಕ್ರಮಗಳಲ್ಲಿ ಕೆಲಸ ಮಾಡಿರುವ ಇವರು ಸಾಕಷ್ಟು ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದಾರೆ. ಸದ್ಯ, ‘ಕಲರ್ಸ್ ಕನ್ನಡ ಸಿನಿಮಾ’ ವಾಹಿನಿಯ ‘ಒಂದು ಸಿನಿಮಾ ಕತೆ’ ಕಾರ್ಯಕ್ರಮವನ್ನು ಚೈತ್ರ ವಾಸುದೇವನ್ ನಿರೂಪಣೆ ಮಾಡುತ್ತಿದ್ದಾರೆ.
ಜೀ ಕನ್ನಡ, ಕಲರ್ಸ್ ವಾಹಿನಿ, ಉದಯ ಟಿವಿ ವಾಹಿನಿಗಳಲ್ಲಿ ಚೈತ್ರ ವಾಸುದೇವನ್ ಕೆಲಸ ಮಾಡಿದ್ದಾರೆ. ಕೆಪಿಎಲ್ ಹಾಗೂ ಕೆಸಿಸಿ ಕ್ರಿಕೆಟ್ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಇದೀಗ ಈ ನಿರೂಪಕಿಗೆ ಬಿಗ್ ಬಾಸ್ ನಲ್ಲಿ ಅವಕಾಶ ಸಿಕ್ಕಿದೆ.
ಮಾತಿನ ಶೈಲಿ ನೋಡಿದರೆ ನನಗೆಲ್ಲವೂ ಗೊತ್ತಿದೆ ಅನ್ನುವಂತಿದೆ. ಆದರೆ ಬಿಗ್ ಬಾಸ್ ಮನೆ ಅನ್ನುವುದು ಎಲ್ಲವೂ ಗೊತ್ತಿದೆ ಅನ್ನುವವರನ್ನು ಸಿಕ್ಕಾಪಟ್ಟೆ ಆಟ ಆಡಿಸಿದೆ.
ನಾನು ನಾನಾಗಿರುತ್ತೇನೆ, ನಾನು ನಾನಾಗಿರಬೇಕು ಎಂದು ಹೋದವರೆಲ್ಲಾ ಕ್ಯಾರೆಕ್ಟರ್ ಪೈರೆಸಿ ಮಾಡಿ ಎಡವಟ್ಟು ಮಾಡಿಕೊಂಡಿದ್ದಾರೆ. ಹೀಗಾಗಿ ಅದೊಂದು ಎಡವಟ್ಟನ್ನು ಜೈತ್ರಾ ತಪ್ಪಿಸಿಕೊಂಡರೆ ಒಂದಿಷ್ಟು ವಾರ ವೀಕ್ಷಕರ ಓಟಿಗೆ ಬರವಿರಲಾರದು.
ಫಿಟ್ನೆಸ್, ಫ್ಯಾಷನ್ ಪ್ರಿಯೆ ಚೈತ್ರಾ. ಈಕೆಗೆ ಶೂ ಮತ್ತು ಬಟ್ಟೆಗಳೆಂದರೆ ಬಲು ಇಷ್ಟ. ಹೊಸ ಹೊಸ ವಿಷಯಗಳ ಬಗ್ಗೆ ವಿಡಿಯೋ ಮಾಡಿ ಅದನ್ನು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಾರೆ ಚೈತ್ರಾ. ಬಗೆಬಗೆಯ ಫೋಟೋ ಶೂಟ್ಗಳನ್ನು ಮಾಡಿಸಿಕೊಳ್ಳುವ ಚೈತ್ರಾಳಿಗೆ ಕಾರ್, ಬೈಕ್ ಎಂದರೆ ಎಲ್ಲಿಲ್ಲದ ಇಷ್ಟ. ಪ್ರತಿವಾರ ‘ಸಿನಿಮಾ ಕಥೆ’ ಕಾರ್ಯಕ್ರಮ ನಿರೂಪಿಸುತ್ತಿದ್ದರು. ಆಗಾಗ ಬ್ಯೂಟಿ ಟಿಪ್ಸ್, ಅಡುಗೆ ಬಗ್ಗೆಯೂ ಚೈತ್ರಾ ವಿಡಿಯೋ ಮಾಡಿ ಜನರೊಂದಿಗೆ ಹಂಚಿಕೊಳ್ಳುತ್ತಾರೆ. ಹಲವಾರು ಪ್ರತಿಷ್ಠಿತ ಶೋಗಳನ್ನು ನಿರೂಪಿಸಿದ ಖ್ಯಾತಿ ಚೈತ್ರಾ ವಾಸುದೇವನ್ರದ್ದು. ‘ಇವೆಂಟ್ ಫ್ಯಾಕ್ಟರಿ’ ಮೂಲಕ ಇವೆಂಟ್ಗಳನ್ನೂ ಕೂಡ ಇವರು ನಡೆಸಿಕೊಡುತ್ತಿದ್ದಾರೆ.










Discussion about this post