crossorigin="anonymous"> ರವಿಬೆಳಗೆರೆಯವರೇ ಅವರು ಅಪ್ರಸ್ತುತ ಅನ್ನುವುದಾದರೆ... ಈ ಕಾಲಕ್ಕೆ ನಿಜಕ್ಕೂ ನೀವು ಪ್ರಸ್ತುತರೇ..... - Torrent Spree
Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ರವಿಬೆಳಗೆರೆಯವರೇ ಅವರು ಅಪ್ರಸ್ತುತ ಅನ್ನುವುದಾದರೆ… ಈ ಕಾಲಕ್ಕೆ ನಿಜಕ್ಕೂ ನೀವು ಪ್ರಸ್ತುತರೇ…..

Radhakrishna Anegundi by Radhakrishna Anegundi
14-10-19, 10 : 45 pm
in ಮನೋರಂಜನೆ
Share on FacebookShare on TwitterWhatsAppTelegram

ಬಿಗ್ ಬಾಸ್ ಸೀಸನ್ 7 ನಿಧಾನವಾಗಿ ಬಿಸಿಯೇರಲಾರಂಭಿಸಿದೆ. ಒಂದೇ ಮನೆಯ ಸದಸ್ಯರಂತೆ ನಾವಿರಬೇಕು ಎಂದು ಪ್ರತಿಜ್ಞೆ ಮಾಡಿದ ಮಂದಿ ಗೆಲ್ಲುವ ಲೆಕ್ಕಚಾರದಲ್ಲಿ ತೊಡಗಿದ್ದಾರೆ. ತಮ್ಮ ಗೆಲುವಿನ ನಾಗಲೋಟಕ್ಕೆ ಅಡ್ಡಿಯಾದವರನ್ನು ಹೊಡೆದುರಿಳಿಸುವುದಕ್ಕೆ ಮಾಸ್ಟರ್ ಪ್ಲಾನ್ ಗಳನ್ನು ತಮಗೆ ಗೊತ್ತಿಲ್ಲದಂತೆ ಹೆಣೆಯಲಾರಂಭಿಸಿದ್ದಾರೆ.

ಅದಕ್ಕೆ ಸಾಕ್ಷಿಯಾಗಿದ್ದು ಸೋಮವಾರ ಅಂದ್ರೆ ಸೀಸನ್ 7 ರ ಎರಡನೇ ದಿನ.ನಾಮಿನೇಷನ್ ಪ್ರಕ್ರಿಯೆ ಪ್ರಾರಂಭವಾಗುತ್ತಿದ್ದಂತೆ, ಒಂದೇ ದಿನದಲ್ಲಿ ವ್ಯಕ್ತಿಗಳನ್ನು ವ್ಯಕ್ತಿತ್ವವನ್ನು ಅಳೆದ ಸ್ಪರ್ಧಿಗಳು ನಾಮಿನೇಷನ್ ಮಾಡಿದ್ದಾರೆ.

ಈ ಪೈಕಿ ರವಿಬೆಳಗೆರೆ ನಾಮಿನೇಷನ್ ಗೆ ಕೊಟ್ಟ ಕಾರಣಗಳು ಅವರ ವೈಯುಕ್ತಿಕ ಅಭಿಪ್ರಾಯ ಇರಬಹುದು ಆದರೆ ಅದು ಒಳ್ಳೆಯ ಜೋಕ್ ಅನ್ನಿಸಿದ್ದು ಸುಳ್ಳಲ್ಲ.

ರಾಜು ತಾಳಿಕೋಟೆಯವರನ್ನು ನಾಮಿನೇಷನ್ ಮಾಡಿರುವ ಬೆಳಗೆರೆ ಅವರೊಬ್ಬರು ನಶಿಸಿ ಹೋಗಿರುವ ಕಲಾವಿದ. ಈ ಸಮಾಜಕ್ಕೆ ಅಪ್ರಸ್ತುತ ಅನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನು ಗುರುಲಿಂಗ ಸ್ವಾಮೀಜಿ ಕೂಡಾ ಅಪ್ರಸ್ತುತ ಅಂದಿದ್ದು ಮಾತ್ರವಲ್ಲದೆ, ಅವರೊಬ್ಬರು ಸೆಲೆಬ್ರೆಟಿಯೇ ಅಲ್ಲ, ಅವರ ಹೆಸರನ್ನು ನಾನು ಕೇಳಿಯೇ ಇಲ್ಲ ಎಂದು ಟೀಕಿಸಿದ್ದಾರೆ.

ಗುರುಲಿಂಗ ಸ್ವಾಮೀಜಿ ಹೆಸರು ಕೇಳಿಲ್ಲ ಅಂದ್ರೆ ಅದು ಬೆಳಗೆರೆಯವರ ಲೋಕಜ್ಞಾನದ ಕೊರತೆ ಅನ್ನುವುದರಲ್ಲಿ ಸಂಶಯವಿಲ್ಲ. ಅಕ್ಕಿ ಮಠದ ಗುರುಲಿಂಗ ಸ್ವಾಮೀಜಿ ಮಾಡಿರುವ ಕೆಲಸಗಳು ನೂರಾರು. ಮಠದಲ್ಲಿನ ಅನ್ನ ದಾಸೋಹ. ಪರಿಸರ ಕಾಳಜಿ ಮೂಲಕ ಲಿಮ್ಕಾ ರೆಕಾರ್ಡ್ ಹೀಗೆ ಸಮಾಜ ಮುಖಿ ಕಾರ್ಯಗಳು ಒಂದಲ್ಲ, ಎರಡಲ್ಲ.

ಇನ್ನು ಕೃಷ್ಣಾ ನದಿ ನೀರು ಹೋರಾಟ ವಿಚಾರದಲ್ಲೂ ಸ್ವಾಮೀಜಿಯವರು ಸಾಕಷ್ಟು ದುಡಿದಿದ್ದಾರೆ.

  • Akkimath Gurulinga Swamiji5
  • Akkimath Gurulinga Swamiji4
  • Akkimath Gurulinga Swamiji3
  • Akkimath Gurulinga Swamiji1
  • Akkimath Gurulinga Swamiji

ರಾಜು ತಾಳಿಕೋಟೆ ಬಗ್ಗೆ ಅಪ್ರಸ್ತುತ ಅನ್ನುವುದೇ ಅಪ್ರಸ್ತುತ. ಒಂದು ಕಾಲದಲ್ಲಿ ಒಳ್ಳೆಯ ಸಿನಿಮಾಗಳನ್ನು ಕೊಟ್ಟವರು ಅವರು, ಜನರನ್ನು ನಗಿಸಿದವರು. ರಂಗಭೂಮಿಗೆ ತಮ್ಮದೇ ಆದ ಸೇವೆ ಸಲ್ಲಿಸಿದವರು ಹಾಗಿರುವಾಗ ಅವರು ನಶಿಸಿ ಹೋದ ಕಲಾವಿದ ಎಂದು ಪರಿಗಣಿಸುವುದು ಹೇಗೆ.

ಸರಿ ಅವರು ನಶಿಸಿ ಹೋದ ಕಲಾವಿದ. ಹಾಗಾದ್ರೆ ರವಿಬೆಳಗೆರೆ ಕೂಡಾ ನಶಿಸಿ ಹೋದ ಬರಹಗಾರನೇ ಸರಿ. ಒಂದು ಕಾಲದಲ್ಲಿ ಅದ್ಭುತ ಪುಸ್ತಕಗಳನ್ನು ಬರೆದ ಬೆಳಗೆರೆ ಇತ್ತೀಚೆಗೆ ಬರೆದ ಪುಸ್ತಕಗಳನ್ನು ಓದಿ ಓದುಗರೇ ಉಗಿಯುತ್ತಿದ್ದಾರೆ. ಲೀಲಾವತಿಯವರ ಬಗ್ಗೆ ಬರೆದ ಪುಸ್ತಕದಿಂದ ಪ್ರಾರಂಭಿಸಿ ಇತ್ತೀಚೆಗೆ ಕಾಫಿ ಡೇ ಮಾಲೀಕ ಸಿದ್ದಾರ್ಥ್ ಬರೆದ ಪುಸ್ತಕ ಹಾಗೂ ಅದಕ್ಕಿಂತ ಹಿಂದೆ ಬರೆದ ಪುಸ್ತಕಗಳನ್ನು ಎರಡು ತಕ್ಕಡಿಯಲ್ಲಿ ಹಾಕಿ ತೂಗಿ ನೋಡಿ.

ಬೆಳಗೆರೆಯವರ ಬರೆಯುವ ತಾಕತ್ತು ಕಡಿಮೆಯಾಗಿದೆ. ಅಕ್ಷರಗಳ ಜೊತೆಗೆ ಆಟವಾಡುವ ಹಿಡಿತ ತಪ್ಪಿ ಹೋಗಿದೆ. ಓದುಗರನ್ನು ಹಿಡಿದಿಟ್ಟುಕೊಳ್ಳುವ ಕಲೆ ಅವರಲ್ಲಿ ಉಳಿದಿಲ್ಲ. ಅಂದ ಮೇಲೆ ರವಿ ಬೆಳಗೆರೆ ನಿಜಕ್ಕೂ ಅಪ್ರಸ್ತುತರಲ್ಲವೇ.

ಬೆಳಗೆರೆಯವರು ನಾಮೀನೇಟ್ ಮಾಡಿದ ಇಬ್ಬರು ಈ ಸಮಾಜಕ್ಕೆ ಅಪ್ರಸ್ತುತರು ಅನ್ನುವುದಾದರೆ ಬೆಳಗೆರೆ ಕೂಡಾ ಅಪ್ರಸ್ತುತರು ಅನ್ನುವುದರಲ್ಲಿ ಸಂಶಯವಿಲ್ಲ.

ShareTweetSendShare

Discussion about this post

Related News

ಕಾಂತಾರ ಚಿತ್ರದ ನಟನೆಗೆ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ : ಎರಡು ಪುರಸ್ಕಾರಗಳಿಗೆ  ಭಾಜನವಾದ ಕೆಜಿಎಫ್-೨

ಕಾಂತಾರ ಚಿತ್ರದ ನಟನೆಗೆ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ : ಎರಡು ಪುರಸ್ಕಾರಗಳಿಗೆ  ಭಾಜನವಾದ ಕೆಜಿಎಫ್-೨

ishani rapper bigg boss contestant ask sorry to drone prathap

ಕ್ಷಮಿಸು ಬಿಡು ಪ್ರತಾಪ್ : ಡ್ರೋನ್ ಕ್ಷಮೆಯಾಚಿಸಿದ ಈಶಾನಿ

pavithra lokesh

ಮತ್ತೆ ಕನ್ನಡ ಕಿರುತೆರೆಗೆ ಪವಿತ್ರಾ ಲೋಕೇಶ್ Pavithra lokesh ಎಂಟ್ರಿ

ಬಹು ಬೇಡಿಕೆಯ ನಟಿಯಾಗುವತ್ತ ಆಪಲ್ ಕೇಕ್ ಖ್ಯಾತಿಯ ಶುಭ ರಕ್ಷಾ Shubha Raksha

ಬೃಂದಾವನ ಧಾರಾವಾಹಿ ಹಳೆಯ ಹೀರೋ ಬೇಕು ಅಂತಿದ್ದಾರೆ ವೀಕ್ಷಕರು

ನಾನ್ಯಾಕೆ ರಾಜ್ ಶೆಟ್ಟಿಗೆ ಕೈ ಕೊಟ್ಟೆ : ಅದ್ಭುತ ಅವಕಾಶವನ್ನ ಕಳೆದುಕೊಂಡ್ರ ರಮ್ಯಾ

ತನಿಷಾ ಕುಪ್ಪಂಡ (Tanisha Kuppanda) ಮೇಲೆ FIR : Bigg Boss ಮನೆಗೆ ನುಗ್ತಾರ ಪೊಲೀಸರು ?

ಸಂಗೀತಾ ಶೃಂಗೇರಿ ( sangeetha sringeri) ಸಾಧನೆಯ ಪಟ್ಟಿ ಇಲ್ಲಿದೆ ನೀನೇನು ಕಡಿದು ಗುಡ್ಡೆ ಹಾಕಿದ್ದೀಯಾ ಮಿಸ್ಟರ್ ಸ್ನೇಹಿತ್

Deep fake video : ಕೊನೆಗೂ ಮೌನ ಮುರಿದ ರಶ್ಮಿಕಾ ಮಂದಣ್ಣ

ಶ್ರೀಲೀಲಾ ರಶ್ಮಿಕಾಗೆ ಹಿನ್ನಡೆ  : ದೇವರಕೊಂಡ ಪ್ರಾಜೆಕ್ಟ್ ಗೆ ಸಾಕ್ಷಿ ವೈದ್ಯ  ಎಂಟ್ರಿ

ವೆಬ್ ಸ್ಟೋರಿಸ್

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
On Nov 13, 2023
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
By Radhakrishna Anegundi
On Nov 9, 2023
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
By Radhakrishna Anegundi
On Nov 4, 2023

Web Stories

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು
ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • Advertise
  • About

© 2024 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2024 Torrent Spree - All Rights Reserved | Powered by Kalahamsa Infotech Pvt. ltd.

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • ↓
  • ಗ್ರೂಪ್
  • ಗ್ರೂಪ್