ಸುದೀಪ್ ನಡೆಸಿಕೊಡುತ್ತಿರುವ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 7 ರಿಂದ ಈಗಾಗಲೇ ಮೊದಲ ವಾರ ಗುರುಲಿಂಗ ಸ್ವಾಮಿ ಹೊರ ಬಂದಿದ್ದಾರೆ. ಎರಡನೇ ವಾರ ಜಂಭದ ಕೋಳಿ, ಎಡವಟ್ಟ್ ರಾಣಿ ಚೈತ್ರಾ ವಾಸುದೇವನ್ ಹೊರ ಬಂದಿದ್ದರು.ಮೂರನೇ ವಾರದಲ್ಲಿ ದುನಿಯಾ ರಶ್ಮಿ ಮನೆಯಿಂದ ಹೊರ ಬಿದ್ದಿದ್ದರು.
ಇದೀಗ ನಾಲ್ಕನೇ ವಾರದಲ್ಲಿ ಚೈತ್ರಾ ಕೊಟ್ಟೂರು ಮನೆಯಿಂದ ಹೊರ ಬಿದ್ದಿದ್ದಾರೆ. ಮೈ ಮೇಲೆ ಎಳೆದುಕೊಂಡ ವಿವಾದವೊಂದು ಅವರನ್ನು ಮನೆಯಿಂದ ಹೊರ ಬರುವಂತೆ ಮಾಡಿದ್ದು ಸ್ಪಷ್ಟವಾಗಿದೆ. ದಲಿತ ಸಂಘಟನೆಗಳ ಆಕ್ರೋಶಕ್ಕೆ ತುತ್ತಾಗಿರುವ ಚೈತ್ರಾ ಕ್ಷಮೆ ಕೇಳಿದ ನಂತರವೂ ಪ್ರತಿಭಟನೆ ಮುಂದುವರಿದಿದೆ.
ಮಾತ್ರವಲ್ಲದೆ ಚೈತ್ರಾ ಅವರು ಬಿಗ್ ಬಾಸ್ ಮನೆಯಲ್ಲಿ ರಂಜಿಸುವಲ್ಲಿ ವಿಫಲರಾಗಿದ್ದಾರೆ. ಒಂದಿಷ್ಟು ದಿನ ಶೈನ್ ಜೊತೆ ಲವ್ವಿ ಡವ್ವಿ ಶುರುವಿಟ್ಟುಕೊಂಡರೂ ಅದು ತುಂಬಾ ದಿನ ನಡೆಯಲಿಲ್ಲ. ಹೀಗಾಗಿ ಜನ ಮನರಂಜನೆ ಇರದ ಕ್ಯಾರೆಕ್ಟರ್ ಅಲ್ಯಾಕೆ ಎಂದು ಹುಟ್ಟು ಹಬ್ಬದ ಮರು ದಿನವೇ ಶಾಕಿಂಗ್ ಗಿಫ್ಟ್ ಕೊಟ್ಟಿದ್ದಾರೆ.
ಇನ್ನು ಳಿದಂತೆ ಪ್ರಿಯಾಂಕ, ಶೈನ್ ಶೆಟ್ಟಿ, ಭೂಮಿ ಶೆಟ್ಟಿ, ಚಂದನ್ ಆಚಾರ್, ರಾಜು ತಾಳಿಕೋಟೆ ಸೇಫ್ ಆಗಿದ್ದಾರೆ.
ಹಾಗೇ ನೋಡಿದರೆ ರಾಜು ತಾಳಿಕೋಟೆ ಕೂಡಾ ಬಿಗ್ ಬಾಸ್ ಮನೆಯಲ್ಲಿರುವುದು ವ್ಯರ್ಥವೇ ಸರಿ. ಇನ್ನು ಸುಜಾತ ಕೂಡಾ ಯಾವುದೇ ಟಾಸ್ಕ್ ಗಳನ್ನು ಮಾಡದ ಸ್ಥಿತಿಯಲ್ಲಿದ್ದಾರೆ. ಕುಂಟುತ್ತಾ ಸಾಗುವುದನ್ನು ನೋಡಲು ನಾವು ಕೇಬಲ್ ಬಿಲ್ ಕಟ್ಟಿದಂತಾಗಿದೆ. ಹೀಗಾಗಿ ಮುಂದಿನ ವಾರ ಈ ಬಗ್ಗೆ ವೀಕ್ಷಕರು ಸೂಕ್ತ ನಿರ್ಧಾರ ಕೈಗೊಳ್ಳುವುದು ಖಚಿತ.
Discussion about this post