ಈ ವಾರ ಬಿಗ್ ಬಾಸ್ ಮನೆಯಿಂದ ಹೊರಹೋಗಲು ಕಿಶನ್ ಜೊತೆಗೆ ಶೈನ್ ಶೆಟ್ಟಿ, ವಾಸುಕಿ ವೈಭವ್, ರಾಜು ತಾಳಿಕೋಟೆ, ಭೂಮಿ ಶೆಟ್ಟಿ, ಚಂದನ್ ಅಚಾರ್, ಚೈತ್ರಾ ನಾಮಿನೇಟ್ ಆಗಿದ್ದಾರೆ.
ಈ ಪೈಕಿ ಕಿಶನ್ ನೇರ ನಾಮಿನೇಟ್ ಆಗುವ ಮೂಲಕ ಕಿಸ್ ಕಾರಣದಿಂದ ಆಪತ್ತು ತಂದುಕೊಂಡಿದ್ದಾರೆ. ಮುತ್ತಿನ ರಾಜನಿಗೆ ಮುತ್ತೇ ಆಪತ್ತು ತಂದಿದೆ.
ಸೋಮವಾರ ಡೈನಿಂಗ್ ಏರಿಯಾದಲ್ಲಿ ವಾಸುಕಿ, ದೀಪಿಕಾ, ಚೈತ್ರಾ ಕೊಟ್ಟೂರು ಹಾಗೂ ಶೈನ್ ಶೆಟ್ಟಿ ಕೂತಿದ್ದ ವೇಳೆ ಚಂದನಾ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕಿಶನ್ ಹಾಗೂ ಚೈತ್ರಾರ ರೊಮ್ಯಾಂಟಿಕ್ ದೃಶ್ಯ ಮಾಡಿಸುತ್ತಿದ್ದರು.
ಈ ವೇಳೆ ಚಂದನ ಜೊತೆಗೆ ರೊಮ್ಯಾಂಟಿಕ್ ದೃಶ್ಯವನ್ನು ಮಾನಿಟರ್ ಸಲುವಾಗಿ ಮಾಡಬೇಕು ಎಂದು ವಾಸುಕಿ ಮತ್ತು ಶೈನ್ ಶೆಟ್ಟಿ ಹೇಳುತ್ತಾರೆ. ಟೇಕ್ ಗೆ ಹೋಗುವ ಮುನ್ನ ಅಸಿಸ್ಟೆಂಟ್ ಡೈರೆಕ್ಟರ್ ಜೊತೆಗೆ ಕಿಶನ್ ಮಾನಿಟರ್ ಮಾಡಬೇಕು ಅನ್ನುತ್ತಾರೆ. ಜೊತೆಗೆ ಚಂದನಾರಿಗೆ ಮುತ್ತು ನೀಡುವಂತೆ ವಾಸುಕಿ ಹೇಳುತ್ತಾರೆ.
ಬೆರಳು ಸಿಕ್ರೆ ಕೈ ನುಂಗುವ ಚಾಣಾಕ್ಷ್ಯ ಕಿಶನ್ ಬಿಡುವುದುಂಟೇ, ವಾಸುಕಿ ಮಾತನ್ನು ಕೇಳಿ ಕಿಶನ್, ಚಂದನಾ ಜೊತೆ ಮಾನಿಟರ್ ಮಾಡಿ ಮುತ್ತು ಕೊಡುತ್ತಾನೆ.
ವಾಸುಕಿ ಮುತ್ತು ನೀಡಲು ಹೇಳಿದರೂ ಹಾಗಾಗಿ ನೀಡಿದೆ ಎಂದು ಕಿಶನ್ ಸಮಜಾಯಿಶಿ ಬೇರೆ ಕೊಡ್ತಾರೆ. ಆದರೆ ಈ ಘಟನೆಯಿಂದ ಚಂದನಾ ಕೋಪಗೊಂಡಿದ್ದರು.
ಇದಾದ ನಂತರ ನಾಮಿನೇಶನ್ ಪ್ರಕ್ರಿಯೆ ಪ್ರಾರಂಭಗೊಳ್ಳುತ್ತದೆ. ಎಲ್ಲಾ ಪ್ರಕ್ರಿಯೆ ಮುಕ್ತಾಯ ನಂತ್ರ ಮನೆಯ ಕ್ಯಾಪ್ಟನ್ ಆಗಿದ್ದ ಚಂದನಾ ಅವರಿಗೆ ಡೈರೆಕ್ಟ್ ನಾಮಿನೇಟ್ ಮಾಡೋ ಅವಕಾಶವನ್ನು ಬಿಗ್ ಬಾಸ್ ಕೊಡುತ್ತಾರೆ.
ಆಗ ಚಂದನಾ, ಕಿಶನ್ರನ್ನು ಡೈರೆಕ್ಟ್ ನಾಮಿನೇಟ್ ಮಾಡಿದ್ದಾರೆ. ಚಂದನಾ ಡೈರೆಕ್ಟ್ ನಾಮಿನೇಟ್ ಮಾಡಿದಕ್ಕೆ ಕಿಶನ್ ಬೇಸರಗೊಂಡಿರುವುದು ಪ್ರಸಾರವಾಗಿದೆ.

Discussion about this post