ಶಿವನಂದಿ..ಹೆಸರು ಅದೆಷ್ಟು ಮುದವಾಗಿದೆ ಅಲ್ವಾ. ಹೌದು ಶಿವನಂದಿ ಅನ್ನುವುದು ಹೊಸ ಪದವಲ್ಲ. ಆದರೆ ದರ್ಶನ್ ಯಜಮಾನ ಚಿತ್ರ ಮಾಡಿದ ನಂತ್ರ ಶಿವನಂದಿ ಅನ್ನುವ ಪದ ಗೂಗಲ್ ಲೋಕದಲ್ಲಿ ಸಿಕ್ಕಾಪಟ್ಟೆ ಓಡಾಡಿದೆ.
ಯಜಮಾನ’ ಸಿನಿಮಾದ ಟೈಟಲ್ ಸಾಂಗ್ ಶಿವನಂದಿ. ಈ ಸಿನಿಮಾದಲ್ಲಿ ನಾಯಕ ನಟ ದರ್ಶನ್ ತಯಾರು ಮಾಡುವ ಎಣ್ಣೆಯ ಬ್ಯಾಂಡ್ ಹೆಸರು ಸಹ ಶಿವನಂದಿ. ಈ ಕಾರಣಗಳಿಂದ ‘ಯಜಮಾನ’ ಸಿನಿಮಾದಲ್ಲಿ ‘ಶಿವನಂದಿ’ ಎನ್ನುವ ಹೆಸರು ಬಹಳ ಪ್ರಾಮುಖ್ಯತೆ ಹೊಂದಿತ್ತು.
ಇದೀಗ ಈ ಹೆಸರು ಸಿನಿಮಾದ ಟೈಟಲ್ ಆಗಲಿದೆಯಂತೆ. ಪೂರಕ ಅನ್ನುವಂತೆ ನಿರ್ದೇಶಕ ದಿನಕರ್ ತೂಗುದೀಪ್ ಈ ಟೈಟಲ್ ಮೇಲೆ ಆಸಕ್ತಿ ತೋರಿ ಅದನ್ನು ಫಿಲಂ ಚೇಂಬರ್ನಲ್ಲಿ ರಿಜಿಸ್ಟರ್ ಕೂಡಾ ಮಾಡಿಸಿದ್ದಾರೆ.
ಹಾಗಾದರೆ ದಿನಕರ್ ಶಿವನಂದಿ ಟೈಟಲ್ ನಲ್ಲಿ ಸಿನಿಮಾ ಮಾಡ್ತಾರ. ಟೈಟಲ್ ನೋಂದಣಿಯಾಗಿದೆ ಅಂದ ಮೇಲೆ ಸಿನಿಮಾ ಮಾಡಲೇಬೇಕು. ಹಾಗಾದರೆ ನಾಯಕ ಯಾರು. ಶಿವನಂದಿಗೆ ದರ್ಶನ್ ಬಿಟ್ಟರೆ ಮತ್ಯಾವ ನಾಯಕರು ಶೂಟ್ ಆಗೋದಿಲ್ಲ ಅನ್ನುವುದು ಮೊದಲ ದಿನ ಮೊದಲ ಶೋ ನೋಡೋ ಪ್ರೇಕ್ಷಕರ ಅಭಿಪ್ರಾಯ.
ಹೀಗಾಗಿ ಟೈಟಲ್ ರಿಜಿಸ್ಟರ್ ಮಾಡಿಸಿದ ಮೇಲೆ ದಿನಕರ್ ಅವರೇ ಸ್ವತಃ ಈ ಹೆಸರಿನ ಸಿನಿಮಾ ಮಾಡಬಹುದು ಅನ್ನುವ ಕುತೂಹಲ ಹೆಚ್ಚಾಗಿದೆ.
ಯಜಮಾನ ನಂತ್ರ ದರ್ಶನ್ ಅವರಿಗಾಗಿ ದಿನಕರ್ ಸಿನಿಮಾ ಮಾಡಲಿದ್ದಾರೆ. ಜೋಡೆತ್ತು ಸಹೋದರರ ಸಿನಿಮಾ ‘ಸರ್ವಾಂತರ್ಯಾಮಿ’ ಅನ್ನುವ ಸುದ್ದಿ ಹಬ್ಬಿತ್ತು. ಇದೀಗ ದಿನಕರ್ ಹೊಸ ಟೈಟಲ್ ಒಂದನ್ನು ರಿಜಿಸ್ಟರ್ ಮಾಡಿಸಿ ಇನ್ನೂ ಕುತೂಹಲ ಮೂಡಿಸಿದ್ದಾರೆ.
ಜೊತೆಗೆ ‘ಸರ್ವಾಂತರ್ಯಾಮಿ’ ಕಥೆಯೇ ಶಿವನಂದಿ ಟೈಟಲ್ ನಲ್ಲಿ ಬರಲಿದೆ ಅನ್ನುವ ಸುದ್ದಿಯೂ ಇದೆ.
Discussion about this post