ಚಂದನವನದ ರೆಬೆಲ್ ಸ್ಟಾರ್ ಅಂಬರೀಶ್ ಬಣ್ಣ ಹಚ್ಚುವುದನ್ನು ನಿಲ್ಲಿಸಲು ಒಲವು ತೋರಿದ್ದಾರೆ. ಈ ಬಗ್ಗೆ ಅವರು ಮುನ್ಸೂಚನೆ ಕೊಟ್ಟಿದ್ದು, ಅವರ ಮಾತುಗಳನ್ನು ಕೇಳಿದರೆ ಅಂಬಿ ನಿಂಗ್ ವಯಸ್ಸಾಯ್ತೋ ಕೊನೆಯ ಚಿತ್ರವಾಗುವ ಸಾಧ್ಯತೆಗಳಿದೆ.
‘ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರದ ಸುದ್ದಿಗೋಷ್ಟಿಯಲ್ಲಿ ಸ್ಯಾಂಡಲ್ ವುಡ್ ರೆಬೆಲ್ ಸ್ಟಾರ್ ಅಂಬರೀಶ್ ಚಿತ್ರರಂಗ ತೊರೆಯುವ ಮುನ್ಸೂಚನೆ ಕೊಟ್ಟಿದ್ದು, ಇದೇ ನನ್ನ ಕೊನೆಯ ಸಿನಿಮಾ.ಮುಂದೆ ಯಾವುದೇ ಸಿನಿಮಾ ಮಾಡಲ್ಲ ಅಂದಿದ್ದಾರೆ.
ಬಳಿಕ ಈ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಅವರು ಒಳ್ಳೆ ಕಥೆ, ಪಾತ್ರ ಸಿಕ್ಕರೆ ನೋಡೋಣ.ಆದರೆ ‘ಅಂಬಿ ನಿಂಗ್ ವಯಸ್ಸಾಯ್ತೋ ರೀತಿಯ ಪಾತ್ರ ಕಥೆ ಮುಂದೆ ಬರುವುದು ಕಷ್ಟ ಅಂದಿದ್ದಾರೆ. ಅಲ್ಲಿಗೆ ಚಿತ್ರರಂಗದಿಂದ ನಿವೃತಿ ಪಡೆಯಲು ಅಮರ್ ನಾಥ್ ಮಾನಸಿಕವಾಗಿ ಸಿದ್ದತೆ ಮಾಡಿಕೊಂಡಂತೆ ಕಾಣಿಸುತ್ತಿದೆ.
ಮಗನನ್ನು ಚಂದನವನದಲ್ಲಿ ಬೆಳೆಸಲು ಅವರು ನಿರ್ಧರಿಸಿದ್ದು, ಈ ಕಾರಣದಿಂದ ಆ ಕೆಲಸ ಕಾರ್ಯಗಳಿಗೆ ಅವರು ಒತ್ತು ನೀಡುವ ಸಾಧ್ಯತೆಗಳಿದೆ.
ಈಗಾಗಲೇ ಸಕ್ರಿಯ ರಾಜಕಾರಣದಿಂದ ಅಂಬರೀಶ್ ದೂರ ಬಂದಿದ್ದಾರೆ.
Discussion about this post