ಬೆಂಗಳೂರು : ರಾಜ್ಯ ಕ್ರಿಕೆಟ್ ಸಂಸ್ಥೆಗಳು ಆಯೋಜಿಸುವ ಟಿ20 ಲೀಗ್ ಗಳನ್ನು ರದ್ದುಗೊಳಿಸಲು ಬಿಸಿಸಿಐ ಚಿಂತನೆ ನಡೆಸಿದೆಯಂತೆ.
ಮಿನಿ ಐಪಿಎಲ್ ಗಳೆಂದು ಕರೆಸಿಕೊಂಡಿರುವ ಟೂರ್ನಿಗಳಲ್ಲಿ ನ್ಯಾಪಕ ಭ್ರಷ್ಟಚಾರ ನಡೆಯುತ್ತಿದೆ ಅನ್ನುವ ಆರೋಪ ಮತ್ತು ಅದಕ್ಕೆ ಪೂರಕ ಸಾಕ್ಷಿಗಳು ಸಿಕ್ಕ ಹಿನ್ನಲೆಯಲ್ಲಿ ಈ ಚಿಂತನೆ ಪ್ರಾರಂಭಗೊಂಡಿದೆ.
ಮಿನಿ ಐಪಿಎಲ್ ತಂಡ ಖರೀದಿಸುವ ಮಾಲೀಕರು ಹಾಗೂ ಅವರ ವ್ಯವಹಾರಗಳ ಬಗ್ಗೆ ಯಾವುದೇ ಮಾಹಿತಿ ರಾಜ್ಯ ಕ್ರಿಕೆಟ್ ಸಂಸ್ಥೆಗಳ ಬಳಿ ಇರೋದಿಲ್ಲ. ಹೀಗಾಗಿ ಬಂಡವಾಳ ಹೂಡಿ ಆದಾಯ ಗಳಿಸುವ ಸಲುವಾಗಿ ಮಾಲೀಕರು ಅಡ್ಡ ದಾರಿ ಹಿಡಿಯೋ ಸಾಧ್ಯತೆಗಳಿದೆ.

ಇದಕ್ಕೆ ಸಾಕ್ಷಿ ಅನ್ನುವಂತೆ ಬಹುತೇಕ ಲೀಗ್ ಗಳಲ್ಲಿ ಅವ್ಯವಹಾರ ನಡೆದಿರುವುದು ಸಾಬೀತಾಗಿದೆ.
ಕಳೆದ ವರ್ಷ ಕೆಪಿಎಲ್ ನಲ್ಲೂ ಬೆಟ್ಟಿಂಗ್, ಮ್ಯಾಚ್ ಫಿಕ್ಸಿಂಗ್ ನಡೆದಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಮಾತ್ರವಲ್ಲದೆ ತಂಡದ ಮುಖ್ಯಸ್ಥರು ಆಟಗಾರರ ಬಂಧನ ಕೂಡಾ ನಡೆದಿತ್ತು.
ಹೀಗಾಗಿ ಇಂತಹ ಲೀಗ್ ಗಳಿಗೆ ಕಡಿವಾಣ ಹಾಕುವಂತೆ ಬಿಸಿಸಿಐನ ಭ್ರಷ್ಟಚಾರ ನಿಗ್ರಹ ದಳದ ಮುಖ್ಯಸ್ಥ ಅಜಿತ್ ಸಿಂಗ್ ಅಧ್ಯಕ್ಷ ಸೌರವ್ ಗಂಗೂಲಿಯವರಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಹಾಗಂತ ರಾಜ್ಯ ಟಿ20 ಪಂದ್ಯಗಳೇ ರದ್ದುಗೊಳ್ಳುವುದಿಲ್ಲ, ಬದಲಾಗಿ ಫ್ರಾಂಟೈಸಿ ಮಾದರಿ ಕೈ ಬಿಟ್ಟು ರಾಜ್ಯ ಕ್ರಿಕೆಟ್ ಸಂಸ್ಥೆಗಳೇ ಟಿ 20 ಟೂರ್ನಿಗಳನ್ನು ನಡೆಸಲು ಶಿಫಾರಸು ಮಾಡಲಾಗಿದೆ.
Discussion about this post