ರಿಯಲ್ ಸ್ಟಾರ್ ಗಳ ರಿಯಾಲಿಟಿ ಶೋ ರಾಜರಾಣಿ ನಾಳೆಯಿಂದ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಈ ಶೋದ ನಿರೂಪಕಿಯಾಗಿ ಅನುಪಮಾ ಗೌಡ ಕಾಣಿಸಿಕೊಳ್ಳಲಿದ್ದಾರೆ. ಕನ್ನಡ ಕೋಗಿಲೆ ಹಾಗೂ ಮಜಾ ಭಾರತ ಶೋಗಳನ್ನು ನಿರೂಪಿಸಿದ ಅನುಪಮಾ ಯಶಸ್ವಿ ನಿರೂಪಕಿ ಎಂದು ಹೆಸರು ಗಳಿಸಲೇ ಇಲ್ಲ.
ನ್ಯೂಸ್ ಚಾನೆಲ್ ಗಳ ರೀತಿ ಕಿರುಚಿದ್ರೆ ಹೊರತು, ನಿರೂಪಕಿಯಾಗಿ ವೀಕ್ಷಕರ ಮನಸ್ಸು ಗೆದ್ದಿರಲಿಲ್ಲ. ಇದೀಗ ಕಲರ್ಸ್ ಕನ್ನಡ ವಾಹಿನಿ ಅನಿವಾರ್ಯವಾಗಿ ಅನುಪಮಾ ಅವರಿಗೆ ರಾಜರಾಣಿ ಶೋ ನಿರೂಪಣೆ ಜವಾಬ್ದಾರಿಯನ್ನು ವಹಿಸಿದೆ. ಒಂದು ವೇಳೆ ಈ ಶೋ ಟಿ.ಆರ್.ಪಿ ಪಟ್ಟಿಯಲ್ಲಿ ಮೇಲಕ್ಕೆ ಎಳದಿದ್ರೆ, ಅದರ ಸೋಲಿನ ಹೊಣೆಯನ್ನು ಅನುಪಮಾ ಅವರೇ ಹೊರ ಬೇಕಾಗುತ್ತದೆ. ಹೀಗಾಗಿಯೇ ಒಂದೂವರೆ ವರ್ಷದ ನಂತರ ನಿರೂಪಣೆ ಹೊಣೆ ಹೊತ್ತಿರುವ ಅನುಪಮಾ ಮೇಲೆ ದೊಡ್ಡ ಜವಾಬ್ದಾರಿ ಇದೆ.
ಕನ್ನಡ ಕೋಗಿಲೆ ಸಂಗೀತ ಶೋ ಆಗಿತ್ತು. ಮಜಾ ಭಾರತ ಕಾಮಿಡಿ ಶೋ ಆಗಿತ್ತು. ಎರಡು ಕಾರ್ಯಕ್ರಮಗಳಲ್ಲೂ ತೀರ್ಪುಗಾರರಿದ್ದರು. ಹೀಗಾಗಿ ದೊಡ್ಡ ತಲೆನೋವು ಇರಲಿಲ್ಲ. ರಾಜರಾಣಿ ಶೋ ಹಾಗಲ್ಲ. ಗೇಮ್ ಶೋ ಆಗಿರುವುದರಿಂದ ಆನ್ ಸ್ಪಾಟ್ ಜೋಕ್ ಗಳನ್ನು ಸಿಡಿಸಬೇಕಾಗುತ್ತದೆ. ಆನ್ ಸ್ಪಾಟ್ ನಲ್ಲೇ ಪದಗಳನ್ನು ಜೋಡಿಸಬೇಕಾಗುತ್ತದೆ. ಜೊತೆಗೆ ಸ್ಪರ್ಧಿಗಳ ಬಗ್ಗೆ ಸಾಕಷ್ಟು ಹೋಮ್ ವರ್ಕ್ ಕೂಡಾ ಬೇಕಾಗುತ್ತೆ.
ಹಾಗೆ ನೋಡಿದರೆ ಇತ್ತೀಚೆಗೆ ಬಂದಿರುವ ನಿರೂಪಕರ ಪೈಕಿ ಅನುಪಮಾ ಅವರು ವಾಸಿ ಅಂದ್ರೆ ತಪ್ಪಿಲ್ಲ. ರಾಜರಾಣಿಯ ಪ್ರೋಮೋ ನೋಡಿದರೆ ಅನುಪಮಾ ಶೋ ಗೆಲ್ಲಿಸುತ್ತಾರೆ ಅನ್ನುವ ವಿಶ್ವಾಸ ಮೂಡಿದೆ.
Discussion about this post