crossorigin="anonymous"> 22 ವರ್ಷದ ಬಳಿಕ ಒಂದಾದ ತಾಯಿ ಮಗಳು : ಚಿಕ್ಕಮಗಳೂರಿನಲ್ಲೊಂದು ಕರುಳು ಹಿಂಡೋ ಕಥೆ - Torrent Spree
Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

22 ವರ್ಷದ ಬಳಿಕ ಒಂದಾದ ತಾಯಿ ಮಗಳು : ಚಿಕ್ಕಮಗಳೂರಿನಲ್ಲೊಂದು ಕರುಳು ಹಿಂಡೋ ಕಥೆ

Radhakrishna Anegundi by Radhakrishna Anegundi
05-01-22, 3 : 42 pm
in ಟ್ರೆಂಡಿಂಗ್
aughter-who-met-mother-after-22-years-in-chikmagaluru-mudigere
Share on FacebookShare on TwitterWhatsAppTelegram

ಮಡಿಕೇರಿ : ತನ್ನ 9ನೇ ವಯಸ್ಸಿನಲ್ಲಿ ಮನೆ ಬಿಟ್ಟು ಹೋಗಿದ್ದ ಬಾಲಕಿ ಇದೀಗ ಗಂಡ ಹಾಗೂ ಮಕ್ಕಳೊಂದಿಗೆ ತಾಯಿ ಮುಂದೆ ಪ್ರತ್ಯಕ್ಷವಾಗಿದ್ದ ಘಟನೆ ಚಿಕ್ಕಮಗಳೂರು ಮೂಡಿಗೆರೆ ತಾಲೂಕಿನ ಮುದ್ರೆಮನೆ ಗ್ರಾಮದಲ್ಲಿ  ನಡೆದಿದೆ.

ಮುದ್ರೆಮನೆಯ ಪೂರ್ಣೇಶ್ ಅವರ ಕಾಫಿ ಎಸ್ಟೇಟ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಚೈತ್ರಾ ಮತ್ತು ಕಾಳಿ ಮುತ್ತು ದಂಪತಿಯ 5ನೇ ಪುತ್ರಿ ಅಂಜಲಿ ತನ್ನ 9ನೇ ವಯಸ್ಸಿನಲ್ಲಿ ನಾಪತ್ತೆಯಾಗಿದ್ದಳು. ಮನೆ ಸಮೀಪ ಟಿಂಬರ್ ಕೆಲಸಕ್ಕಾಗಿ ಬಂದಿದ್ದ ಆನೆ ಮಾವುತನ ಪರಿಚಯವಾಗಿ ಆತನೊಂದಿಗೆ ಕೇರಳಕ್ಕೆ ಹೋಗಿದ್ದಳು.

ಮಗಳು ಕಾಣೆಯಾಗುತ್ತಿದ್ದಂತೆ ತಂದೆ ತಾಯಿ ಸೇರಿ ಊರವರು ಹುಡುಕಾಟ ನಡೆಸಿದ್ದರು. ಆದರೆ ಮಗಳ ಪತ್ತೆ ಇಲ್ಲ. ಹೀಗಾಗಿ ಮಗಳ ನೆನಪಿನಲ್ಲೇ ಚೈತ್ರಾ ಕೊರಗುತ್ತಿದ್ದರು.

mudigere

ಈ ನಡುವೆ ಅಂಜಲಿಯನ್ನು ಕೇರಳಕ್ಕೆ ಕರೆದುಕೊಂಡ ಹೋದಾತ ಮನೆಯಲ್ಲೇ ಇರಿಸಿಕೊಂಡಿದ್ದ. ಅಲ್ಲೇ ಮನೆ ಕೆಲಸ ಮಾಡಿಕೊಂಡು ಅಲ್ಲಿಯೇ ಜೀವನ ಸಾಗಿಸುತ್ತಿದ್ದಳು. ಇದಾದ ಬಳಿಕ ಕೇರಳದ ನೆಲ್ಲಮಣಿಯ ಸಾಜಿ ಎಂಬುವರೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ಸಾಜಿ ಮತ್ತು ಅಂಜಲಿಗೆ ಇದೀಗ ಮೂರು ಮಕ್ಕಳಿದ್ದಾರೆ.

ಕೆಲ ತಿಂಗಳ ಹಿಂದೆ ಮಂಗಳೂರು ಮುಸ್ತಫಾ ಅನ್ನುವವರು ಕೇರಳಕ್ಕೆ ತೆರಳಿದ್ದ ಸಂದರ್ಭದಲ್ಲಿ ಅಂಜಲಿ ಮತ್ತು ಸಾಜಿ ದಂಪತಿಯ ಪರಿಚಯವಾಗಿದೆ. ಮುಸ್ತಫಾ ಕನ್ನಡಿಗರು ಎಂದು ತಿಳಿದ ದಂಪತಿ ಮೂಡಿಗೆಯಲ್ಲಿ ತನ್ನ ತಾಯಿ ಇರುವುದಾಗಿಯೂ ಅವರನ್ನು ಹುಡುಕುತ್ತಿರುವುದಾಗಿಯೂ ಹೇಳಿದ್ದಾರೆ.

ಈ ವಿಷಯ ಮುಸ್ತಫಾ ಅವರಿಂದ ಫಿಶ್ ಮೋನು ಅನ್ನುವವರಿಗೆ ತಿಳಿಯಿತು. ಅವರ ತಮ್ಮ ಸ್ನೇಹಿತರೊಂದಿಗೆ ಹುಡುಕಾಟ ನಡಸಿದಾಗ ಮೂಡಿಗೆರೆಯ ಲೋಕವಳ್ಳಿ ಗ್ರಾಮದ ಎಸ್ಟೇಟ್ ಒಂದರಲ್ಲಿ ಚೈತ್ರಾ ಕೆಲಸ ಮಾಡುತ್ತಿರುವುದು ಗೊತ್ತಾಗಿದೆ. ಬಳಿಕ ಅವಳು ಇವರ ಮಗಳು, ಇವರೇ ಅವಳ ತಾಯಿ ಅನ್ನುವುದನ್ನು ದೃಢಪಡಿಸಿದ್ದಾರೆ.

ಇದಾದ ಬಳಿಕ ಸೋಮವಾರ ಮಂಗಳೂರಿಗೆ ಆಗಮಿಸಿದ ಸಾಜಿ ದಂಪತಿ, ಮಂಗಳವಾರ  ಹೆತ್ತ ತಾಯಿಯನ್ನು ಭೇಟಿಯಾಗಿದ್ದಾರೆ. ಈ ವೇಳೆ ಅವರಿಬ್ಬರು ಅಪ್ಪಿಕೊಂಡು ಕಣ್ಣೀರು ಹಾಕಿಸಿದ ದೃಶ್ಯ ಕಲ್ಲು ಹೃದಯವನ್ನು ಕರಗಿಸುವಂತಿತ್ತು.

ಮೂಲತಃ ತಮಿಳುನಾಡು ಮೂಲದವರಾದ ಚೈತ್ರಾ ಕುಟುಂಬ ಕಳೆದ 40 ವರ್ಷದ ಹಿಂದೆ ಮೂಡಿಗೆರೆಗೆ ಬಂದಿದ್ದರು. ಮೂಡಿಗೆರೆ ತಾಲೂಕಿನ ಮುತ್ತಿಗೆಪುರದಲ್ಲಿ ವಾಸವಾಗಿದ್ದು, ನಂತರ ಹೊಟ್ಟೆಪಾಡಿಗಾಗಿ ಕುಟುಂಬ ಎಸ್ಟೇಟ್ ನಿಂದ ಎಸ್ಟೇಟ್ ಗೆ ವಲಸೆ ಹೋಗುತ್ತಿತ್ತು. ಚೈತ್ರಾ ಅವರಿಗೆ ಒಟ್ಟು 11 ಮಕ್ಕಳಿದ್ದು, ಎಲ್ಲರೂ ತಮ್ಮ ಬದುಕು ಕಟ್ಟಿಕೊಂಡಿದ್ದು, ಚೈತ್ರಾ ಒಂಟಿಯಾಗಿ ಜೀವನ ನಡೆಸುತ್ತಿದ್ದಾರೆ.

Tags: chikkamagaluruMAIN
Share1TweetSendShare

Discussion about this post

Related News

ದೇವಾಲಯಗಳಲ್ಲಿ ನಂದಿನ ತುಪ್ಪ ಬಳಸಲು ನಿರ್ಧಾರ : ನಂದಿನಿ ತುಪ್ಪಕ್ಕೆ ಭಾರಿ ಬೇಡಿಕೆ –  ಶಾಸಕ  ಕೆ.ವೈ. ನಂಜೇಗೌಡ

ದೇವಾಲಯಗಳಲ್ಲಿ ನಂದಿನ ತುಪ್ಪ ಬಳಸಲು ನಿರ್ಧಾರ : ನಂದಿನಿ ತುಪ್ಪಕ್ಕೆ ಭಾರಿ ಬೇಡಿಕೆ –  ಶಾಸಕ  ಕೆ.ವೈ. ನಂಜೇಗೌಡ

ಮಾರುಕಟ್ಟೆಗೆ ಬಂದಿದೆ ಸಿಮೆಂಟ್ ಬೆಳ್ಳುಳ್ಳಿ : ಮಾರುಕಟ್ಟೆಯಲ್ಲಿ ಹೊಸ ದಂಧೆ – cement garlic

ಮಾರುಕಟ್ಟೆಗೆ ಬಂದಿದೆ ಸಿಮೆಂಟ್ ಬೆಳ್ಳುಳ್ಳಿ : ಮಾರುಕಟ್ಟೆಯಲ್ಲಿ ಹೊಸ ದಂಧೆ – cement garlic

ವಯನಾಡಿನಲ್ಲಿ ಸೇನಾ ಕಾರ್ಯಾಚರಣೆ ಅಂತ್ಯ : ಭಾವನಾತ್ಮಕವಾಗಿ ಯೋಧರನ್ನು ಬೀಳ್ಕೊಟ್ಟ ಕೇರಳಿಗರು

ವಯನಾಡಿನಲ್ಲಿ ಸೇನಾ ಕಾರ್ಯಾಚರಣೆ ಅಂತ್ಯ : ಭಾವನಾತ್ಮಕವಾಗಿ ಯೋಧರನ್ನು ಬೀಳ್ಕೊಟ್ಟ ಕೇರಳಿಗರು

ಮಗಳ ಒಂಟಿ ಕೈಗೇ ತಂದೆಯಿಂದ ಅಂತ್ಯಸಂಸ್ಕಾರ : ವಯನಾಡಿನ ಕಣ್ಣೀರ ಕಥೆ

ಅಯೋಧ್ಯೆ ಮಂದಿರ ಉದ್ಘಾಟನೆಯಂದೆ ಹೆರಿಗೆ ಮಾಡಿಸಿ : ವೈದ್ಯರಿಗೆ ದುಂಬಾಲು

ಅನಂತಪದ್ಮನಾಭ ದೇಗುಲದ ಕೆರೆಯಲ್ಲಿ ಕಾಣಿಸಿಕೊಂಡ ಜ್ಯೂನಿಯರ್ ಬಬಿಯಾ ( Babiya)

ಸಚಿವರ ಮನೆ ಕಚೇರಿ ನವೀಕರಣಕ್ಕೆ ಕೋಟಿ ಕೋಟಿ ರೂಪಾಯಿ ಖರ್ಚು : ಏನಿದು ಸಿದ್ದರಾಮಯ್ಯನವರೇ

Lunar Eclipse : ಚಂದ್ರ ಗ್ರಹಣ 2023 ಶುಭ ಫಲ ಪಡೆಯಲಿರೋ ರಾಶಿಗಳು ಯಾವುದು ಗೊತ್ತಾ

ದೇವರಿಗೆ ಚೆಕ್ ಕೊಟ್ಟು ಯಾಮಾರಿಸಿದ ಭೂಪ : 100 ಕೋಟಿ ಚೆಕ್ ಕೊಟ್ಟವನ ಖಾತೆಯಲ್ಲಿತ್ತು 17 ರೂಪಾಯಿ

Tirumala hundi : ಎಂಟು ತಿಂಗಳಲ್ಲಿ ಸಾವಿರ ಕೋಟಿ : ತುಂಬಿ ತುಳುಕಿದ ತಿಮ್ಮಪ್ಪನ ಹುಂಡಿ

ವೆಬ್ ಸ್ಟೋರಿಸ್

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
On Nov 13, 2023
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
By Radhakrishna Anegundi
On Nov 9, 2023
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
By Radhakrishna Anegundi
On Nov 4, 2023

Web Stories

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು
ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • Advertise
  • About

© 2024 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2024 Torrent Spree - All Rights Reserved | Powered by Kalahamsa Infotech Pvt. ltd.

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • ↓
  • ಗ್ರೂಪ್
  • ಗ್ರೂಪ್