crossorigin="anonymous"> ಹಣೆಯಲ್ಲಿ ಏನು ಬರೆದಿದೆಯೋ ಅದೇ ಆಗೋದು :ಆಟೋ ಚಾಲಕನಿಗೆ ಸಿಕ್ತು ಪುಸ್ತಕ ಬಿಡುಗಡೆ ಭಾಗ್ಯ - Torrent Spree
Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ಹಣೆಯಲ್ಲಿ ಏನು ಬರೆದಿದೆಯೋ ಅದೇ ಆಗೋದು :ಆಟೋ ಚಾಲಕನಿಗೆ ಸಿಕ್ತು ಪುಸ್ತಕ ಬಿಡುಗಡೆ ಭಾಗ್ಯ

Radhakrishna Anegundi by Radhakrishna Anegundi
23-04-19, 11 : 05 am
in ಟ್ರೆಂಡಿಂಗ್
auto driver book
Share on FacebookShare on TwitterWhatsAppTelegram

ಅದು ಭಾನುವಾರ ಅಂದ್ ಏಪ್ರಿಲ್ ತಿಂಗಳ 21. ಬೆಂಗಳೂರು ಗಿರಿನಗರ ನಿವಾಸಿ ರಮೇಶ್ ಭಾನುವಾರವಾದ ಕಾರಣ ಮಾಲ್, ಸಿನಿಮಾ ಸುತ್ತಾಡುವ ಮಂದಿ ಸಾಕಷ್ಟಿರುತ್ತಾರೆ. ಆದಷ್ಟು ದುಡಿಯೋಣ ಎಂದು ಬೆಳಗ್ಗೆ ತಮ್ಮ ಆಟೋವನ್ನು ರಸ್ತೆಗಿಳಿಸಿದ್ದರು.

ಮಧ್ಯಾಹ್ನ ದೊಡ್ಡ ಬಾಕ್ಸ್ ಹತ್ತಿದ ವ್ಯಕ್ತಿಯೊಬ್ಬರು ಚಾಮರಾಜಪೇಟೆಯ ಸಾಹಿತ್ಯ ಪರಿಷತ್ ಇಳಿದು ಕಾಸು ಕೊಟ್ಟು ಹೊರಟು ಹೋಗಿದ್ದರು. ಆದರೆ ಬಾಕ್ಸ್ ಬಿಟ್ಟಿರೋದು ಪ್ರಯಾಣಿಕರಿಗೂ ಗೊತ್ತಿಲ್ಲ, ರಮೇಶ್ ಅವರಿಗೂ ಗೊತ್ತಾಗಲಿಲ್ಲ.

ಸಾಕಷ್ಟು ಸಮಯದ ನಂತ್ರ ಅರೇ ಆಟೋದಲ್ಲಿ ಬಾಕ್ಸ್ ಹಾಗೇ ಇದೆಯಲ್ಲ ಅನ್ನುವುದು ರಮೇಶ್ ಗಮನಕ್ಕೆ ಬಂದಿದೆ.

ಸರಿ ಆ ವ್ಯಕ್ತಿ ಯಾರು, ಎಲ್ಲಿಯವರು ಬಾಕ್ಸ್ ತಲುಪಿಸೋದು ಹೇಗೆ ಎಂದು ತಲೆಕೆಡಿಸಿಕೊಂಡ ರಮೇಶ್ ಬಾಕ್ಸ್ ತೆರೆದು ನೋಡಿದ್ರೆ ಒಂದಿಷ್ಟು ಪುಸ್ತಕಗಳು ಜೊತೆಗೊಂದಿಷ್ಟು ಆಮಂತ್ರಣ ಪತ್ರಿಕೆ ಇತ್ತು. ಸರಿಯಾಗಿ ನೋಡಿದ್ರೆ ಇನ್ನೇನು ಕೆಲವೇ ನಿಮಿಷಗಳಲ್ಲಿ ಬಿಡುಗಡೆಯಾಗಬೇಕಾದ ಪುಸ್ತಕ ತನ್ನ ಆಟೋದಲ್ಲಿದೆ ಅನ್ನುವುದು ಗೊತ್ತಾಗಿದೆ.

ಏನೇ ಆಗ್ಲಿ ಎಂದು ರಮೇಶ್ ಸಾಹಿತ್ಯ ಪರಿಷತ್ ಕಡೆ ತನ್ನ ರಥದ ಚಕ್ರ ತಿರುಗಿಸಿದ್ದಾರೆ.

ಇತ್ತ ಸಾಹಿತ್ಯ ಪರಿಷತ್ ನಲ್ಲಿ ಬನಶಂಕರಿ ಬಳಿಯ ಕಾವೇರಿ ನಗರದ ವಿಶ್ವ ಮಾನವ ಸಾಂಸ್ಕೃತಿಕ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಹಾಸ್ಯ ಲೇಖಕ ನಾಗರಾಜ ಕೋಟೆ ಅವರ “ಕೋಟೆ ನಾಗನ ಕಾಮಿಡಿ ಕಗ’ ಪುಸ್ತಕ ಲೋಕಾರ್ಪಣೆ ಮತ್ತು “ನಾಗರಾಜ-54ರ ಅಭಿನಂದನೆ’ ಸಮಾರಂಭದ ಸಿದ್ಧತೆ ಭರ್ಜರಿಯಾಗಿ ಸಾಗಿತ್ತು.

ಇನ್ನೇನು ಕಾರ್ಯಕ್ರಮ ಶುರುವಾಗುವ ಹೊತ್ತು, ಅತಿಥಿಗಳು ಬಂದಾಗಿದೆ. ಕೆಲವೇ ಹೊತ್ತಿನಲ್ಲಿ ವೇದಿಕೆ ಹತ್ತುತ್ತಾರೆ. ಪುಸ್ತಕ ಬಿಡುಗಡೆ ಮಾಡಿಸಬೇಕು ಅನ್ನುವಷ್ಟರಲ್ಲಿ, ಪ್ರತಿಷ್ಠಾನದ ಅಧ್ಯಕ್ಷ ಪುಟ್ಟರಾಜು ಅವರಿಗೆ ಗೊತ್ತಾಗಿದೆ, ಪುಸ್ತಕದ ಬಾಕ್ಸ್ ಆಟೋದಲ್ಲಿ ಕಳೆದುಕೊಂಡಿದ್ದೇನೆ ಎಂದು.

ಗಡಿಬಿಡಿಯಲ್ಲಿ ಪುಸ್ತಕಗಳನ್ನು ವಾಹನದಲ್ಲೇ ಮರೆತಾಗಿದೆ. ಇನ್ನೇನು ಮಾಡುವುದು ಎಂದು ಲೇಖಕರ ಕಡೆಯಿಂದ ಬೈಸಿಕೊಂಡು, ಬಂದ ಅತಿಥಿಗಳ ಕೈಗೆ ಪುಸ್ತಕದ ಕವರ್ ಪೇಜ್ ಕೊಟ್ಟು ಪುಸ್ತಕ ಬಿಡುಗಡೆ ಕಾರ್ಯಕ್ರಮ ಮುಗಿಸೋದು ಎಂದು ನಿರ್ಧರಿಸಿದ್ದಾರೆ. ಅದು ಇರೋದು ಒಂದೇ ಕವರ್ ಪೇಜ್ ಹೇಗೆಪ್ಪ ಅನ್ನುವ ತಲೆ ನೋವು ಸಂಘಟಕರದ್ದು. ಪುಸ್ತಕ ಬಿಡುಗಡೆಯನ್ನು ಮಾತಿನಲ್ಲೇ ಮುಗಿಸಲು ನಿರ್ಧರಿಸಿದ್ದಾರೆ.

ಕಾರ್ಯಕ್ರಮ ಉದ್ಘಾಟನೆಯಾಯ್ತು, ಮುಖ್ಯ ಅತಿಥಿಯ ಭಾಷಣ ಮುಗಿಯಿತು, ಆದರೆ ಪುಸ್ತಕ ಬಿಡುಗಡೆ ಲಕ್ಷಣ ಕಾಣಿಸಲಿಲ್ಲ. ಸಭಿಕರೇ ಈ ಬಗ್ಗೆ ಪ್ರಶ್ನಿಸಿದಾಗ, ಆಯೋಜಕರು ಗಡಿಬಿಡಿಯಲ್ಲಿ ಪುಸ್ತಕಗಳನ್ನು ಆಟೋದಲ್ಲಿ ಬಿಟ್ಟು ಬಂದಿರುವ ವಿಚಾರ ಬಹಿರಂಗವಾಗಿದೆ.

ಅಷ್ಟು ಹೊತ್ತಿಗೆ ಬಾಕ್ಸ್ ಹಿಡಿದ ಆಟೋ ಚಾಲಕ ರಮೇಶ್ ಸಭಾಂಗಣಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಆಟೋ ಹತ್ತಿದ ವ್ಯಕ್ತಿಗಾಗಿ ಕಣ್ಣಾಡಿಸಿದ್ದಾರೆ.

ಅಷ್ಟು ಹೊತ್ತಿಗೆ ಕಳೆದು ಹೋದ ಪುಸ್ತಕ ಸಿಕ್ಕಿದೆ ಅನ್ನುವ ಸುದ್ದಿ ಸಂಘಟಕರಿಗೆ ಗೊತ್ತಾಗಿದೆ. ಕೊನೆಗೆ ಅತಿಥಿಗಳು ಆಟೋ ಚಾಲಕನಿಂದಲೇ ಕೃತಿ ಲೋಕಾರ್ಪಣೆ ಮಾಡಿಸಿ ಗೌರವಿಸಿದರು.

ಸಮಯ ಪ್ರಜ್ಞೆಯಿಂದ ಸಕಾಲಕ್ಕೆ ಕೃತಿಗಳನ್ನು ಹೊತ್ತು ತಂದ ಆಟೋ ಚಾಲಕ ರಮೇಶ್‌ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು, ಮಾತ್ರವಲ್ಲದೇ ಕೃತಿ ಬಿಡುಗಡೆಗೊಳಿಸಿದ ಹಿರಿಮೆಗೂ ಪಾತ್ರರಾದರು.

ಈ ಘಟನೆ ಕುರಿತಂತೆ ಹರ್ಷ ವ್ಯಕ್ತಪಡಿಸಿರುವ ಪುಸ್ತಕ ಬಿಡುಗಡೆ ಮಾಡಬೇಕಾಗಿದ್ದ ಲೇಖಕ ಮಲ್ಲೇಪುರಂ ಜಿ. ವೆಂಕಟೇಶ್‌, ರಮೇಶ್ ಅವರ ಸಮಯ ಪ್ರಜ್ಞೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನು ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ರಮೇಶ್ “ನನ್ನ ಆಟೋದಲ್ಲಿ ಬಿಟ್ಟು ಹೋಗಿದ್ದ ಪುಸ್ತಕಗಳನ್ನು ಸಂಬಂಧಪಟ್ಟವರಿಗೆ ತಲುಪಿಸಬೇಕೆಂಬ ಉದ್ದೇಶದಿಂದ ಇಲ್ಲಿಗೆ ಬಂದೆ. ನನ್ನ ಪ್ರಾಮಾಣಿಕತೆಗೆ ಪುಸ್ತಕ ಬಿಡುಗಡೆ ಸುಯೋಗ ಸಿಕ್ಕಿತು. ಜತೆಗೆ ಸನ್ಮಾನ ಭಾಗ್ಯವೂ ದೊರೆಯಿತು,’ ಎಂದು ಸಂತಸ ವ್ಯಕ್ತಪಡಿಸಿದರು.

ShareTweetSendShare

Discussion about this post

Related News

ದೇವಾಲಯಗಳಲ್ಲಿ ನಂದಿನ ತುಪ್ಪ ಬಳಸಲು ನಿರ್ಧಾರ : ನಂದಿನಿ ತುಪ್ಪಕ್ಕೆ ಭಾರಿ ಬೇಡಿಕೆ –  ಶಾಸಕ  ಕೆ.ವೈ. ನಂಜೇಗೌಡ

ದೇವಾಲಯಗಳಲ್ಲಿ ನಂದಿನ ತುಪ್ಪ ಬಳಸಲು ನಿರ್ಧಾರ : ನಂದಿನಿ ತುಪ್ಪಕ್ಕೆ ಭಾರಿ ಬೇಡಿಕೆ –  ಶಾಸಕ  ಕೆ.ವೈ. ನಂಜೇಗೌಡ

ಮಾರುಕಟ್ಟೆಗೆ ಬಂದಿದೆ ಸಿಮೆಂಟ್ ಬೆಳ್ಳುಳ್ಳಿ : ಮಾರುಕಟ್ಟೆಯಲ್ಲಿ ಹೊಸ ದಂಧೆ – cement garlic

ಮಾರುಕಟ್ಟೆಗೆ ಬಂದಿದೆ ಸಿಮೆಂಟ್ ಬೆಳ್ಳುಳ್ಳಿ : ಮಾರುಕಟ್ಟೆಯಲ್ಲಿ ಹೊಸ ದಂಧೆ – cement garlic

ವಯನಾಡಿನಲ್ಲಿ ಸೇನಾ ಕಾರ್ಯಾಚರಣೆ ಅಂತ್ಯ : ಭಾವನಾತ್ಮಕವಾಗಿ ಯೋಧರನ್ನು ಬೀಳ್ಕೊಟ್ಟ ಕೇರಳಿಗರು

ವಯನಾಡಿನಲ್ಲಿ ಸೇನಾ ಕಾರ್ಯಾಚರಣೆ ಅಂತ್ಯ : ಭಾವನಾತ್ಮಕವಾಗಿ ಯೋಧರನ್ನು ಬೀಳ್ಕೊಟ್ಟ ಕೇರಳಿಗರು

ಮಗಳ ಒಂಟಿ ಕೈಗೇ ತಂದೆಯಿಂದ ಅಂತ್ಯಸಂಸ್ಕಾರ : ವಯನಾಡಿನ ಕಣ್ಣೀರ ಕಥೆ

ಅಯೋಧ್ಯೆ ಮಂದಿರ ಉದ್ಘಾಟನೆಯಂದೆ ಹೆರಿಗೆ ಮಾಡಿಸಿ : ವೈದ್ಯರಿಗೆ ದುಂಬಾಲು

ಅನಂತಪದ್ಮನಾಭ ದೇಗುಲದ ಕೆರೆಯಲ್ಲಿ ಕಾಣಿಸಿಕೊಂಡ ಜ್ಯೂನಿಯರ್ ಬಬಿಯಾ ( Babiya)

ಸಚಿವರ ಮನೆ ಕಚೇರಿ ನವೀಕರಣಕ್ಕೆ ಕೋಟಿ ಕೋಟಿ ರೂಪಾಯಿ ಖರ್ಚು : ಏನಿದು ಸಿದ್ದರಾಮಯ್ಯನವರೇ

Lunar Eclipse : ಚಂದ್ರ ಗ್ರಹಣ 2023 ಶುಭ ಫಲ ಪಡೆಯಲಿರೋ ರಾಶಿಗಳು ಯಾವುದು ಗೊತ್ತಾ

ದೇವರಿಗೆ ಚೆಕ್ ಕೊಟ್ಟು ಯಾಮಾರಿಸಿದ ಭೂಪ : 100 ಕೋಟಿ ಚೆಕ್ ಕೊಟ್ಟವನ ಖಾತೆಯಲ್ಲಿತ್ತು 17 ರೂಪಾಯಿ

Tirumala hundi : ಎಂಟು ತಿಂಗಳಲ್ಲಿ ಸಾವಿರ ಕೋಟಿ : ತುಂಬಿ ತುಳುಕಿದ ತಿಮ್ಮಪ್ಪನ ಹುಂಡಿ

ವೆಬ್ ಸ್ಟೋರಿಸ್

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
On Nov 13, 2023
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
By Radhakrishna Anegundi
On Nov 9, 2023
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
By Radhakrishna Anegundi
On Nov 4, 2023

Web Stories

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು
ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • Advertise
  • About

© 2024 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2024 Torrent Spree - All Rights Reserved | Powered by Kalahamsa Infotech Pvt. ltd.

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • ↓
  • ಗ್ರೂಪ್
  • ಗ್ರೂಪ್