ಬೆಂಗಳೂರು : ಜನಾರ್ಧನ್ ಟ್ರಸ್ಟ್ ಫೈನಾನ್ಸ್ ಸರ್ವೀಸ್ ಅಂಡ್ ಇನ್ವೆಸ್ಟ್ಮೆಂಟ್ ಕಂಪನಿಯಲ್ಲಿ ಫೈನಾನ್ಸಿಯಲ್ ಅನಾಲಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಸಂತೋಷ್ ಕುಮಾರ್, ಶೀಘ್ರದಲ್ಲೇ ಶ್ರೀಮಂತನಾಗಲು ಬಯಸಿದ್ದ.
ಈ ಕಾರಣದಿಂದ ತಾನು ದುಡಿದ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದ. ಆದರೆ ಈ ವ್ಯವಹಾರದಲ್ಲಿ ಸಂತೋಷ್ ನಷ್ಟ ಅನುಭವಿಸಿದ್ದ.
ಹೀಗಾಗಿ ಮನೆಯನ್ನು ನಡೆಸಬೇಕಾಗಿದ್ದ ಹೊಣೆ ಹೊತ್ತುಕೊಂಡಿದ್ದ ಸಂತೋಷ್ ಗೆ ಕಂಪನಿಯಿಂದ ಬರುತ್ತಿದ್ದ ಸಂಬಳ ಸಾಕಾಗುತ್ತಿರಲಿಲ್ಲ.
ಹೀಗಾಗಿ ಸಂತೋಷ್ ಗೆ ಕಾಣಿಸಿದ್ದು ಕಳ್ಳತನದ ದಾರಿ. ಆದರೆ ನಿಯತ್ತಿನಿಂದ ದುಡಿದವನಿಗೆ ಕಳ್ಳತನ ಮಾಡೋದು ಹೇಗೆ ಅನ್ನುವುದು ಗೊತ್ತಿರಲಿಲ್ಲ. ಹೀಗಾಗಿ ಯೂ ಟ್ಯೂಬ್ ಗಳಲ್ಲಿ ಸಂಶೋಧನ ಪ್ರಾರಂಭಿಸಿದ್ದ.
ಈ ವೇಳೆ ಸಿಕ್ಕಿದ್ದು, ಚಿನ್ನಾಭರಣ ಮಳಿಗೆಗಳಲ್ಲಿ ಸಿಬ್ಬಂದಿಯ ಗಮನ ಮತ್ತೊಂದು ಕಡೆ ಸೆಳೆದು ಚಿನ್ನ ಕದಿಯುವ ವಿಡಿಯೋಗಳು ಸಿಕ್ಕಿದೆ. ಇದೇ ಮಾದರಿಯಲ್ಲಿ ತಾನೂ ಕೃತ್ಯ ಎಸಗಲು ನಿರ್ಧರಿಸಿದ್ದ ಸಂತೋಷ್ ಸಂಚು ರೂಪಿಸಿದ್ದಾನೆ.
ಅದರಂತೆ ಫೆ 21 ರಂದು ಸಂಜೆ 7 ಗಂಟೆಗೆ ಮಲ್ಲೇಶ್ವರದ ಜೋಯಾಲುಕ್ಕಾಸ್ ಮಳಿಗೆಗೆ ತೆರಳಿ, ಬ್ರಾಸ್ ಲೇಟ್ ತೋರಿಸುವಂತೆ ಸಿಬ್ಬಂದಿಗೆ ಸೂಚಿಸಿದ್ದಾನೆ.
ಈ ವೇಳೆ ಬ್ರಾಸ್ ಲೇಟ್ ತೋರಿಸಿದ್ದ ಸೈಯ್ಯದ್ ಸೈಫ್ ವುದ್ದೀನ್ ಬೇರೆ ಗ್ರಾಹಕರ ಕಡೆಗೆ ಹೋಗಿದ್ದರು.
ಮತ್ತೆ ಸಂತೋಷ್ ಇದ್ದ ಜಾಗಕ್ಕೆ ಬಂದ್ರೆ 42.99 ಗ್ರಾಮ್ ಬ್ರಾಸ್ ಲೇಟ್ ಜೊತೆಗೆ ಸಂತೋಷ್ ಪರಾರಿಯಾಗಿದ್ದ.
ಇದಾದ ಬಳಿಕ ಮಾರ್ಚ್ 11 ರಂದು ಮಾರ್ಗೋಸಾ ರಸ್ತೆಯ ಕಲ್ಯಾಣ್ ಜ್ಯುವೆಲ್ಲರ್ ಶಾಪ್ ಗ್ ತೆರಳಿದ್ದ ಸಂತೋಷ್ ಇದೇ ಮಾದರಿಯಲ್ಲಿ ಕೃತ್ಯ ಎಸಗಲು ಮುಂದಾಗಿದ್ದ.
ಈ ವೇಳೆ ಅನುಮಾನಗೊಂಡ ಸಿಬ್ಬಂದಿ ಸಂತೋಷ್ ನನ್ನು ವಶಕ್ಕೆ ಪೆಡದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಇದೀಗ ಮಾಗಡಿ ರಸ್ತೆಯ ನಿವಾಸಿ ಸಂತೋಷ್ ಕಡೆಯಿಂದ 4.76 ಲಕ್ಷ ರೂಪಾಯಿ ಮೊತ್ತದ 92 ಗ್ರಾಮ್ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಲಾಗಿದ್ದ ಬೈಕ್ ವಶಪಡಿಸಿಕೊಳ್ಳಲಾಗಿದೆ.
Discussion about this post