ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್ ಬಿಗ್ ಬಾಸ್ ಮನೆಯ ಜೋಡಿ ಎಂದೇ ಪ್ರಸಿದ್ಧರಾಗಿದ್ದಾರೆ. ಅವರಿಬ್ಬರು ಆತ್ಮೀಯ ಸ್ನೇಹಿತರಾಗಿದ್ದು, ಟಾಸ್ಕ್ ಸೇರಿದಂತೆ ಪ್ರತಿಯೊಂದು ವಿಚಾರದಲ್ಲೂ ಇಬ್ಬರದ್ದೂ ಒಂದೇ ಮನಸ್ಥಿತಿ. ಮನೆಯಿಂದ ಹೊರ ಬಂದ ಮೇಲೂ ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್ ಅಂತಾ ಅವರಿಬ್ಬರೂ ಹೇಳಿಕೊಂಡಿದ್ದಾರೆ.
ಆದರೆ ಸಂಬರಗಿ ಹಾಗೂ ಚಂದ್ರಚೂಡ್ ಅವರ ಮನಸ್ಥಿತಿಗೆ ಈ ಸಂಬಂಧ ಬೇರೆಯದ್ದೇ ರೀತಿಯಲ್ಲಿ ಕಾಣಿಸಿಕೊಂಡಿದೆ. ಇದನ್ನು ಅವರು ಬಹಿರಂಗವಾಗಿ ಹೇಳಿದ್ದಾರೆ ಕೂಡಾ.
ಇದೀಗ ಆತ್ಮೀಯ ಸ್ನೇಹಿತರಿಬ್ಬರು ನಡುವೆ ಬಿರುಕು ಮೂಡಿದ್ದು, ನನಗಿಂತ ಟಾಸ್ಕ್ ನಿನಗೆ ಮುಖ್ಯವಾಯ್ತಲ್ಲ ಎಂದು ದಿವ್ಯಾ ಸುರೇಶ್ ಮಂಜು ಮೇಲೆ ಕಿಡಿ ಕಾರಿದ್ದಾರೆ.
ಟಾಸ್ಕ್ ಸಂದರ್ಭದಲ್ಲಿ ದಿವ್ಯಾ ಸುರೇಶ್ ಕಾಲಿಗೆ ಗಾಯಲಾಗಿದೆ. ಈ ವೇಳೆ ವೈದ್ಯರು ಬಂದು ಬ್ಯಾಂಡೇಜ್ ಕೂಡಾ ಹಾಕಿದ್ದಾರೆ. ಈ ವೇಳೆ ಕುರ್ಚಿ ಟಾಸ್ಕ್ ನಲ್ಲಿ ಪಾಲ್ಗೊಂಡಿದ್ದ ಮಂಜು ಎದ್ದು ಬಂದು ಸಂತೈಸುತ್ತಾರೆ ಅನ್ನುವುದು ದಿವ್ಯಾ ನಿರೀಕ್ಷೆಯಾಗಿತ್ತು. ಆದರೆ ಹಾಗಾಗಿಲ್ಲ.

ಈ ವೇಳೆ ಕೋಪ ಹಾಗೂ ನೋವಿನಿಂದ ಆಕ್ರೋಶ ಹೊರ ಹಾಕಿದ ದಿವ್ಯಾ, ಮಂಜು ಇಷ್ಟೇ ಅಲ್ವಾ ಗೆಳೆತನ, ಫ್ರೆಂಡ್ ಶಿಪ್ ಬೆಲೆ ತೋರ್ಸಿದಲ್ಯ, ನಿನಗೂ ನಿನ್ನ ಫ್ರೆಂಡ್ ಶಿಫ್ ಗೂ ಗುಡ್ ಬೈ ಅಂದಿದ್ದಾರೆ. ಆದರೆ ಮಂಜು ಇದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ, ಬದಲಾಗಿ ಗಾಯವಾದ ತಕ್ಷಣ ನಿನ್ನ ಕಾಲು ಮುಟ್ಟಿರುತ್ತಿದ್ರೆ ನೋವು ಮಾಯವಾಗಿರುತ್ತಿತ್ತು ಅಂದಿದ್ದಾರೆ.

ಹಾಗೇ ನೋಡಿದರೆ ದಿವ್ಯಾ ಸುರೇಶ್ ಇಲ್ಲಿ ಅತೀಯಾಯ್ತು. ಮಂಜು ಬಂದಿರುವುದು ಬಿಗ್ ಬಾಸ್ ಗೆಲ್ಲುವುದಕ್ಕೆ ಅನ್ನುವುದನ್ನು ದಿವ್ಯಾ ಸುರೇಶ್ ಮೊದಲು ಅರಿತುಕೊಳ್ಳಬೇಕು.
Discussion about this post