ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿರುವ ಚಂದ್ರಚೂಡ, ಇಡೀ ಮಹಾಮನೆಯನ್ನು ತಮ್ಮ ಕೈವಶ ಮಾಡಿಕೊಳ್ಳುವ ಪ್ರಯತ್ನ ಮುಂದುವರಿಸಿದ್ದಾರೆ. ಇಡೀ ಮನೆ ನನ್ನ ನಿಯಂತ್ರಣದಲ್ಲಿರಬೇಕು ಎಂದು ಬಯಸಿರುವ ಅವರು ಇದಕ್ಕಾಗಿ ಇನ್ನಿಲ್ಲದ ಪ್ರಯತ್ನ ಮುಂದುವರಿಸಿದ್ದಾರೆ.
ಈ ನಡುವೆ ಸಹ ಸ್ಪರ್ಧಿ ರಘು ಅವರ ಮನಸ್ಸಿನ ನೋವನ್ನು ಅರಿತುಕೊಂಡಿದ್ದ ಚಂದ್ರಚೂಡ, ವೈಷ್ಣವಿ ಕಣ್ಣಲ್ಲಿ ನಿನ್ನ ತಾಯಿಯನ್ನು ನೋಡು, ಮನಸ್ಸಿನ ನೋವನ್ನು ಹೇಳಿಕೊಂಡು ಮನಸ್ಸು ಹಗುರಾಗಿಸು ಎಂದು ಸಲಹೆ ಕೊಟ್ಟಿದ್ದರು. ಈ ಮೂಲಕ ರಘು ಒಂದಿಷ್ಟು ಮನಸ್ಸು ಹಗುರಾಗಿಸಿದ್ದರು ಕೂಡಾ.

ಆದರೆ ಇದೀಗ ಇದೇ ರಘುವಿನ ನೋವನ್ನೇ ಬಳಸಿಕೊಳ್ಳಲು ಚಂದ್ರಚೂಡ ಮುಂದಾಗಿದ್ದಾರೆ. ಅದು ಪ್ರಶಾಂತ್ ಸಂಬರಗಿ ಜೊತೆಗಿನ ಮಾತುಕತೆಯಲ್ಲಿ ಬಯಲಾಗಿದೆ.
ವೈಷ್ಣವಿ ಕಣ್ಣಲ್ಲಿ ತನ್ನ ತಾಯಿಯನ್ನು ಕಂಡಿದ್ದು ಇದೀಗ ಮಾರ್ಕೆಟಿಂಗ್ ತಂತ್ರ ಅನ್ನುವುದು ಚಂದ್ರಚೂಡ್ ಮಾತು.

ಪ್ರಶಾಂತ್ ಹಾಗೂ ಚಂದ್ರಚೂಡ್ ಮನೆಯಲ್ಲಿ ಗ್ಯಾಂಗ್ ಕಟ್ಟಿಕೊಳ್ಳಲು ಮುಂದಾಗಿದ್ದು ತಮ್ಮ ತಂಡಕ್ಕೆ ಕೆಲ ಸದಸ್ಯರನ್ನು ಸೇರಿಸಿಕೊಳ್ಳುವ ಬಗ್ಗೆ ಚರ್ಚೆ ನಡೆದಿತ್ತು ಈ ವೇಳೆ ಯಾರನ್ನು ಸೇರಿಸಿಕೊಳ್ಳಬೇಕು ಅನ್ನುವಾಗ, ರಘು ಒಳ್ಳೆಯ ವ್ಯಕ್ತಿ. ಆದರೆ, ಅವರು ತಮ್ಮ ನೋವು ಹಾಗೂ ದುಃಖವನ್ನೇ ಹೇಳಿಕೊಂಡು ಓಡಾಡುತ್ತಿದ್ದಾರೆ. ತಮ್ಮ ನೋವನ್ನು ಮಾರ್ಕೆಟಿಂಗ್ ತಂತ್ರವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಅಂದಿದ್ದಾರೆ.
Discussion about this post