ವಿಘ್ನ ನಿವಾರಕನನ್ನು ಪೂಜಿಸುವ ಸುಸಂದರ್ಭದಲ್ಲಿ ಮಣ್ಣಿನ ವಿಗ್ರಹಗಳನ್ನು ಬಳಸಿ, ಪಿಒಪಿ ಮೂರ್ತಿಗಳನ್ನು ಬಳಸಬೇಡಿ ಎಂದು ಪರಿಸರ ಪ್ರಿಯರು, ಮಾಲಿನ್ಯ ನಿಯಂತ್ರಣ ಮಂಡಳಿ, ಬಿಬಿಎಂಪಿ ಸಾರ್ವಜನಿಕರಲ್ಲಿ ಮನವಿ ಮಾಡಿತ್ತು.
ಇದಕ್ಕಿಂತ ಕಡಿಮೆ ಬೆಲೆಯಲ್ಲಿ ಶೂ ಸಿಕ್ರೆ ಹೇಳಿ….!
ಒಂದು ಹೆಜ್ಜೆ ಮುಂದೆ ಹೋಗಿದ್ದ ಬಿಬಿಎಂಪಿ ,ಪಿಒಪಿ ಮೂರ್ತಿಗಳ ವಿಸರ್ಜನೆಗೆ ಅವಕಾಶ ನೀಡೋದಿಲ್ಲ. ಒಂದು ವೇಳೆ ವಿಸರ್ಜನಾ ಸ್ಥಳಕ್ಕೆ ಪಿಒಪಿ ಮೂರ್ತಿ ಬಂದ್ರೆ ಕೇಸು ಜಡಿಯುವುದಾಗಿ ಎಚ್ಚರಿಸಿತ್ತು.
ಆದರೆ ಇದು ಕೇವಲ ಉತ್ತರನ ಪೌರುಷ ಹಾಗೂ ಆರಂಭ ಶೂರತ್ವವಾಗಿ ಹೋಗಿದೆ.
ಕೇವಲ 360 ರೂಪಾಯಿಗೆ ಶೂ ಪಡೆಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ
POP ಗಣೇಶನ ಮೂರ್ತಿಗಳ ಮಾರಾಟಕ್ಕೆ ಅವಕಾಶವೇ ಇಲ್ಲ ಅಂದಿದ್ದ ಪಾಲಿಕೆ, ಬೀದಿ ಬೀದಿಗಳಲ್ಲಿ POP ಮೂರ್ತಿಗಳ ಮಾರಾಟ ಭರ್ಜರಿಯಾಗಿ ನಡೆಯುತ್ತಿದ್ದರೂ ಕಣ್ಣು ಮುಚ್ಚಿ ಕುಳಿತಿತ್ತು. ಇನ್ನು ವಿಸರ್ಜನಾ ಸ್ಥಳಕ್ಕೆ POP ಮೂರ್ತಿಗಳ ಬಂದಾಗ ಈ ಹಿಂದೆ ಕೊಟ್ಟ ಎಚ್ಚರಿಕೆಯನ್ನು ಮರೆತು ಪ್ರತೀ ವರ್ಷದಂತೆ ವಿಸರ್ಜನೆ ಮಾಡಲಾಗಿದೆ.
ಆದರೆ ಅದೃಷ್ಟ ಅಂದರೆ ಆರ್ ಆರ್ ನಗರ ಮತ್ತು ಮಹದೇವಪುರ ವಲಯದಲ್ಲಿ ಒಂದೇ ಒಂದು POP ಮೂರ್ತಿ ವಿಸರ್ಜನೆಗೆ ಬಂದಿಲ್ಲ.
ಒಂದು ವೇಳೆ ಪಾಲಿಕೆ ಕಟ್ಟು ನಿಟ್ಟಾಗಿ ಕ್ರಮ ಕೈಗೊಂಡಿದ್ದರೆ, ಬೆಂಗಳೂರಿನ ಪರಿಸರ ಉಳಿಸುವ ಕಾರ್ಯ ಪ್ರಾರಂಭವಾಗಿರುತ್ತಿತ್ತು. ಆದರೆ ಪರಿಸರ ಕೆಡಿಸಲೆಂದೇ ಟೊಂಕ ಕಟ್ಟಿ ನಿಂತಿರುವ ಅಧಿಕಾರಿಗಳೇ ಪಾಲಿಕೆಯಲ್ಲಿ ಟೆಂಟ್ ಹೂಡಿರುವಾಗ ಇನ್ನೇನು ನಿರೀಕ್ಷಿಸಲು ಸಾಧ್ಯ.
ಒಟ್ಟಿನಲ್ಲಿ ಕಾನೂನು ರಚಿಸದವರೇ ಕಾನೂನು ಮುರಿಯುತ್ತಾರೆ ಅಂದ ಮೇಲೆ ಇನ್ನೇನು ಹೇಳಲು ಸಾಧ್ಯ.

Discussion about this post