ಬೆಂಗಳೂರು : ನಿರೀಕ್ಷಿತ ಮಟ್ಟದಲ್ಲಿ ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕೆ ಬಂದಿಲ್ಲ. ಹೀಗಾಗಿ ಲಾಕ್ ಡೌನ್ ಮುಂದುವರಿಕೆ ಅನಿವಾರ್ಯವಾಗಿದೆ. ಈ ಹಿನ್ನಲೆಯಲ್ಲಿ ಜೂನ್ 7ರ ನಂತ್ರ ಒಂದು ವಾರ ಲಾಕ್ ಡೌನ್ ವಿಸ್ತರಣೆಯಾಗಲಿದೆ. ಬಳಿಕ ಪರಿಸ್ಥಿತಿಯನ್ನು ನೋಡಿಕೊಂಡು ಲಾಕ್ ಡೌನ್ ತೆರವು ಬಗ್ಗೆ ತೀರ್ಮಾನ ಕೈಗೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಜೂನ್ 7ರ ನಂತರವೂ ಕಠಿಣ ಲಾಕ್ ಡೌನ್ ಅನ್ನು ಮುಂದುವರಿಸಿದರೆ ಆರ್ಥಿಕತೆಯ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಜೂನ್ 7 ರ ನಂತ್ರ ಅನ್ ಲಾಕ್ ಪ್ರಕ್ರಿಯೆಯನ್ನು ಪ್ರಾರಂಭಿಸಲು ಚಿಂತಿಸಲಾಗಿದೆ. ಪ್ರಮುಖವಾಗಿ ಅಗತ್ಯ ವಸ್ತುಗಳ ಖರೀದಿಗೆ ವಿನಾಯತಿ ಕೊಡುವಂತೆ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಈಗಾಗಲೇ ಬೆಳಗ್ಗೆ 6 ರಿಂದ 10 ಗಂಟೆ ತನಕ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಇದನ್ನು ಮಧ್ಯಾಹ್ನ 2 ಗಂಟೆ ತನಕ ವಿಸ್ತರಿಸುವ ಸಾಧ್ಯತೆಗಳಿದೆ.
ಇನ್ನು ಸೋಮವಾರದಿಂದ ಗಾರ್ಮೆಂಟ್ಸ್ ಗಳಿಗೆ ಅವಕಾಶ, ಸೀರಿಯಲ್ ಚಿತ್ರೀಕರಣಕ್ಕೂ ಅನುಮತಿ, ಬ್ಯೂಟಿ ಪಾರ್ಲರ್ ಸಲೂನ್, ರಿಪೇರಿ ವರ್ಕ್ ಶಾಪ್, ಗ್ಯಾರೇಜ್, ರೋಲರ್ ಸೇರಿ ಬೃಹತ್ ಯಂತ್ರಗಳ ರಿಪೇರಿಗೆ ಅವಕಾಶ ನೀಡುವ ಬಗ್ಗೆಯೂ ಚಿಂತನೆಗಳು ನಡೆದಿದೆ. ಜೊತೆಗೆ ಮದ್ಯ ಪಾರ್ಸೆಲ್ ಗೆ ಬೆಳಗ್ಗೆ 10 ರಿಂದ ಸಂಜೆ 6ರವರೆಗೆ ಅವಕಾಶ ಕೊಟ್ಟರೆ ಬೊಕ್ಕಸಕ್ಕೆ ಒಂದಿಷ್ಟು ಹಣ ಹರಿದು ಬರೋ ಲೆಕ್ಕಚಾರವೂ ನಡೆದಿದೆ.
Discussion about this post