ಬೆಂಗಳೂರು : ಅಕ್ರಮ ಸಂಬಂಧ ಅನ್ನೋದು ತಪ್ಪು ಎಂದು ಗೊತ್ತಿದ್ದರೂ, ಚಟಕ್ಕೆ ಬೀಳುವ ಮಂದಿಗೆ ಲೆಕ್ಕವಿಲ್ಲ. ಪ್ರೀತಿಯಿಂದ ನೋಡಿಕೊಳ್ಳುವ ಗಂಡ, ನೋವು ಮರೆಸುವ ಮಕ್ಕಳಿದ್ದರೂ ಪರ ಪುರುಷನ ಸಂಗ ಬಯಸುವವರು ಸಾಕಷ್ಟು ಮಂದಿ. ಪತಿಯನ್ನು ದೇವರಂತೆ ನೋಡಿಕೊಳ್ಳುವ ಮಡದಿಯಿದ್ದರೂ ಬೇಲಿ ಹಾರೋ ಗಂಡಸರ ಸಂಖ್ಯೆಯೂ ಕಡಿಮೆ ಇಲ್ಲ
ಹೀಗೆ ಗಂಡ ಜೈಲು ಸೇರಿದ್ದ ಸಂದರ್ಭದಲ್ಲಿ ಪರ ಪುರುಷನ ಚಟಕ್ಕೆ ಬಿದ್ದವಳು ಇದೀಗ ಗಂಡನಿರುವ ಜಾಗವನ್ನೇ ಸೇರಿದ್ದಾಳೆ.
ಆರ್ ಆರ್ ನಗರದ ಜಯಮ್ಮ (25) ಗಂಡ ಅದ್ಯಾವುದೋ ಅಪರಾಧ ಪ್ರಕರಣದಲ್ಲಿ ಜೈಲು ಸೇರಿದ್ದ. ಅತ್ತ ಗಂಡ ಕಂಬಿ ಎಣಿಸಲು ಹೋಗುತ್ತಿದ್ದಂತೆ ಜಯಮ್ಮ ಅಕ್ರಮ ಸಂಬಂಧದ ಚಟಕ್ಕಿ ಬಿದ್ದಿದ್ದಾಳೆ. ಆಸ್ಪತ್ರೆಯೊಂದರಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ಜಯಮ್ಮಳಿಗೆ ಹೇಮಂತ ಅನ್ನುವವ ಪರಿಚಯವಾಗಿದ್ದಾನೆ.
ಇವರಿಬ್ಬರ ಸಂಬಂಧ ಮನೆ ಹೊರಗಡೆ ಇದ್ರೆ ಏನಾಗುತ್ತಿರಲಿಲ್ಲ. ಯಾವಾಗಾ ಹೇಮಂತ್ ಮನೆಗೆ ಬರಲಾರಂಭಿಸಿದನೋ, ಜಯಮ್ಮಳ ಇಬ್ಬರು ಹೆಣ್ಣು ಮಕ್ಕಳು ಕಿರಿ ಕಿರಿ ಅನುಭವಿಸತೊಡಗಿದರು. ಮನೆಗೆ ಬರುತ್ತಿರುವ ಹೊಸ ಅಂಕಲ್ ಕಾಟ ಯಾಕೋ ಅತೀಯಾಯ್ತು ಅಂದುಕೊಂಡ ಮಕ್ಕಳು ಜೈಲಿನಲ್ಲಿದ್ದ ತಂದೆಗೆ ಫೋನ್ ಮಾಡಿ ಮನೆಗೆ ಅಂಕಲ್ ಬಂದು ಹೋಗುತ್ತಾರೆ ಅಂದಿದ್ದಾರೆ.
ಇದರಿಂದ ಕುಪಿತಗೊಂಡ ಪತಿರಾಯ ಜೈಲಿನಿಂದ ಕರೆ ಮಾಡಿ, ಇದೆಲ್ಲಾ ಸರಿ ಅಲ್ಲ, ಎಲ್ಲಾ ನೌಟಂಕಿ ಆಟ ನಿಲ್ಲಿಸು ಎಂದು ವಾರ್ನ್ ಮಾಡಿದ್ದಾನೆ.
ಮಕ್ಕಳಿಂದ ತನ್ನ ಅಕ್ರಮ ಸಂಬಂಧ ಬಯಲಿಗೆ ಬಂತು ಎಂದು ಕುಪಿತಗೊಂಡ ಜಯಮ್ಮ ಇಬ್ಬರು ಹೆಣ್ಣು ಮಕ್ಕಳ ಮೇಲೆ ಕೋಪ ಪ್ರದರ್ಶಿಸಿದ್ದಾಳೆ. ಪ್ರಿಯಕರನ ಜೊತೆ ಸೇರಿ ಮಕ್ಕಳಿಗೆ ಕಚ್ಚಿ, ಬೆಂಕಿಯಿಂದ ಸುಟ್ಟು ರಾಕ್ಷಸಿ ಕೃತ್ಯ ಮೆರೆದಿದ್ದಾಳೆ.
ಮಕ್ಕಳ ಮೇಲೆ ಹಿಂಸೆ ಎಸಗಿದ್ದು ಜೈಲಿನಲ್ಲಿದ್ದ ತಂದೆಗೆ ಗೊತ್ತಾಗುತ್ತಿದ್ದಂತೆ ವಿಷಯ ಆರ್ ಆರ್ ಪೊಲೀಸ್ ಠಾಣೆಗೆ ತಲುಪಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಜಯಮ್ಮ ಹಾಗೂ ಆಕೆಯ ಪ್ರಿಯಕರನನ್ನು ಜೈಲಿಗೆ ಅಟ್ಟಿದ್ದಾರೆ.
Discussion about this post