ನಾನು ಹೀರೋ ಆಗಲು ಲಾಯಕ್ ಮನುಷ್ಯನೇ ಅಲ್ಲ ಎಂದು ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದ ಕಿರಿಕ್ ಕೀರ್ತಿ ಕಡ್ಡಿ ಮುರಿದಂತೆ ಹೇಳಿದ್ದರು. ಬಿಗ್ ಬಾಸ್ ಮನೆಯಿಂದ ಹೊರ ಬಿದ್ದ ಮಂದಿಗೆ ಸಾಲು ಸಾಲು ಸಿನಿಮಾ ಆಫರ್ ಬರೋದು ಮಾಮೂಲಿ, ಹಾಗೇ ಕೀರ್ತಿಗೂ ಬಂದಿತ್ತು. ಆದರೆ ಅದನ್ನು ನಯವಾಗಿ ತಿರಸ್ಕರಿಸಿದ್ದರು ಕೀರ್ತಿ.
ಅದಕ್ಕೆ ಕಾರಣವೂ ಇಲ್ಲದಿಲ್ಲ ತನ್ನ ದೇಹದ ಆಕಾರ ಮತ್ತು ಮುಖಕ್ಕೆ ಒಪ್ಪುವ ಕಥೆಗಳು ಬಂದ್ರೆ ಮಾತ್ರ ಸಿನಿಮಾ ಮಾಡೋದು ಅವರ ನಿರ್ಧಾರವಾಗಿತ್ತು. ಹಾಗೇ ಬಂದ ಆಫರ್ ಗಳನ್ನು ಅವರು ತಿರಸ್ಕರಿಸಿಯೂ ಇಲ್ಲ ಒಂದೆರೆಡು ಸಿನಿಮಾಗಳಲ್ಲಿ ತನಗೊಪ್ಪುವ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಇದೀಗ ಸಿಲಿಂಡರ್ ಸತೀಶನಾಗ ಹೊರಟಿರುವ ಕಿರಿಕ್ ಕೀರ್ತಿ ಹೊಸ ಭರವಸೆ ಮೂಡಿಸಿದ್ದಾರೆ. ನಿನ್ನೆಯಷ್ಟೇ ಸಿಲಿಂಡರ್ ಸತೀಶನ ಟೀಸರ್ ಬಿಡುಗಡೆಯಾಗಿದ್ದು, ಚಿತ್ರ ಹೇಗಿರಬಹುದು ಅನ್ನುವ ಕುತೂಹಲ ಮೂಡಿಸಿದೆ.

ಕಿರಿಕ್ ಕೀರ್ತಿ ಅವರ ಕೈನಲ್ಲಿ ಇನ್ನೂ ಹಲವು ಚಿತ್ರಗಳಿವೆ. ಈಗಾಗಲೇ ‘ಟೈರು’, ‘ತಿರುಮಲ ವೈನ್ ಸ್ಟೋರ್’ ಚಿತ್ರಗಳಲ್ಲಿ ನಟಿಸಿರುವ ಕೀರ್ತಿ ಅಭಿನಯದ ಆ ಚಿತ್ರಗಳು ಬಿಡುಗಡೆಗೆ ಸಜ್ಜಾಗಿವೆ. ಹಾಗೆಯೇ ಕೆಲವು ಸಿನಿಮಾಗಳಲ್ಲಿ ಅವರು ಅತಿಥಿ ಪಾತ್ರಗಳಲ್ಲೂ ನಟಿಸುತ್ತಿದ್ದಾರೆ.
ಅಂದ ಹಾಗೇ ಸಿಲಿಂಡರ್ ಸತೀಶ ಚಿತ್ರ ನಿರ್ಮಾಣದ ಹೊಣೆಯನ್ನು ಕಿರಿಕ್ ಕೀರ್ತಿಯೇ ಹೊತ್ತುಕೊಂಡಿದ್ದಾರೆ. ತಿರುಮಲ ವೈನ್ಸ್ ನಲ್ಲೂ ಕೀರ್ತಿ one of the producer.
ಏನಿವೇ ಕಿರಿಕ್ ಕೀರ್ತಿ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸುತ್ತಾರೆ. ಇನ್ನಾದರೂ ಬದುಕಿನಲ್ಲಿ ಒಳ್ಳೆಯ ದಿನಗಳು ಬರಲಿ ಅವರ ಚಿತ್ರಗಳು ಗೆಲುವು ಕಾಣಲಿ ಅನ್ನುವುದು ನಮ್ಮೆಲ್ಲರ ಹಾರೈಕೆ.
Discussion about this post