crossorigin="anonymous"> ಕಿಚ್ಚನ ಮಾತಿಗೆ ಗೌರವ ಕೊಟ್ರ ವರ್ತೂರು ಸಂತೋಷ್ : Bigg Boss ಮನೆಯಲ್ಲೇ ಮುಂದವರಿಯಲು ನಿರ್ಧಾರ - Torrent Spree
Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ಕಿಚ್ಚನ ಮಾತಿಗೆ ಗೌರವ ಕೊಟ್ರ ವರ್ತೂರು ಸಂತೋಷ್ : Bigg Boss ಮನೆಯಲ್ಲೇ ಮುಂದವರಿಯಲು ನಿರ್ಧಾರ

Radhakrishna Anegundi by Radhakrishna Anegundi
12-11-23, 11 : 59 pm
in ನ್ಯೂಸ್ ರೂಮ್
ವರ್ತೂರು ಸಂತೋಷ್
Share on FacebookShare on TwitterWhatsAppTelegram

ಜೈಲಿನ ದಿನಗಳನ್ನು ನೆನೆದು ನರಳುತ್ತಿರುವ ವರ್ತೂರು ಸಂತೋಷ್ ಸಿಕ್ರೇಟ್ ರೂಮ್ ಗೆ ತೆರಳುತ್ತಾರ

ಬಿಗ್ ಬಾಸ್ ಸೀಸನ್ 10 ಹಲವು ತಿರುವುಗಳಿಗೆ ಸಾಕ್ಷಿಯಾಗಿದೆ. ಈ ಹಿಂದಿನ ಸೀಸನ್ ಗಳಿಗೆ ಹೋಲಿಸಿದ್ರೆ ಕೆಟ್ಟ ಸೀಸನ್ ಎಂದೇ ಕರೆಸಿಕೊಂಡಿದೆ. ತುಕಾಲಿ ಸಂತೋಷನ ತುಕ್ಕು ಹಿಡಿದ ಕೆಟ್ಟ ಜೋಕ್ಸ್, ಸ್ವಯಂ ಘೋಷಿತ ಆನೆ ವಿನಯ್ ಆಟ, ನಮೃತಾ ಗೌಡ ಅವರ ಚಮಚಾಗಿರಿ, ಮೈಕಲ್ ಮತ್ತು ಇಶಾನಿಯ ಸವಕಲು ಪ್ರೇಮಕಥೆಗಳು ವೀಕ್ಷಕರ ಸಹನೆ ಕೆಡಿಸಿದೆ. ಈ ನಡುವೆ ಸೂಪರ್ ಸಂಡೆ ವಿದ್ ಕಿಚ್ಚ ಕಾರ್ಯಕ್ರಮದಲ್ಲಿ ವರ್ತೂರು ಸಂತೋಷ್ ( varthur santhosh )ಸಿಕ್ಕಾಪಟ್ಟೆ ಸದ್ದು ಮಾಡಿದ್ದಾರೆ.

ಹುಲಿ ಉಗುರಿನ ವಿಚಾರದಲ್ಲಿ ಆತುರಕ್ಕೆ ಬಿದ್ದ ಅರಣ್ಯಾಧಿಕಾರಿಗಳು, ವರ್ತೂರು ಸಂತೋಷ್ ವಿಚಾರದಲ್ಲಿ ಭರ್ಜರಿ ಪ್ರಚಾರ ಗಿಟ್ಟಿಸಿಕೊಂಡರು. ವರ್ತೂರು ಸಂತೋಷ್ ರನ್ನ ಬಂಧಿಸಿದ್ದು ಬಿಟ್ರೆ ಮತ್ಯಾರನ್ನೂ ಬಂಧಿಸಲು ಸಾಧ್ಯವಾಗಲಿಲ್ಲ. ಅದು ಬೇರೆ ಕಥೆಯಾದ್ರೆ ವರ್ತೂರು ಸಂತೋಷ್ ಅವರನ್ನು ಸೂಪರ್ ಹೀರೋ ಮಾಡಿದ್ದು ಇದೇ ಅರಣ್ಯಾಧಿಕಾರಿಗಳ ಕಾರ್ಯಾಚರಣೆ ಅನ್ನೋದು ಸತ್ಯ.

Read this : ಅನಂತಪದ್ಮನಾಭ ದೇಗುಲದ ಕೆರೆಯಲ್ಲಿ ಕಾಣಿಸಿಕೊಂಡ ಜ್ಯೂನಿಯರ್ ಬಬಿಯಾ ( Babiya)

ಆದರೆ ಜೈಲು ವಾಸ ಅನುಭವಿಸಿ ಬಂದಿರುವ ವರ್ತೂರು ಸಂತೋಷ್ ಅವರಿಗೆ, ಆ ನೋವಿನಿಂದ ಹೊರ ಬರಲು ಸಾಧ್ಯವಾಗುತ್ತಿಲ್ಲ. ಜೈಲು ವಾಸದ ಸಂದರ್ಭದಲ್ಲಿ ಬೆಂಬಲಕ್ಕೆ ನಿಂತವರಿಗೆ ಥ್ಯಾಂಕ್ಸ್ ಹೇಳಲು ಸಾಧ್ಯವಾಗಿಲ್ಲ, ಅವರ ಮುಖ ನೋಡದೆ ಬಂದು ಬಿಟ್ಟೆ ಅನ್ನುವ ನೋವು ಅವರನ್ನು ಕಾಡುತ್ತಿದೆ.

ಇದೇ ಹೊತ್ತಿನಲ್ಲಿ ಉರಿವ ಬೆಂಕಿಗೆ ತುಪ್ಪ ಅನ್ನುವಂತೆ ಬಿಗ್ ಬಾಸ್ ಮನೆಯಲ್ಲಿ ಸಹ ಆಟಗಾರರ ನಡೆ ಸಂತೋಷ್ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಉಪ್ಪು, ಸಕ್ಕರೆ, ನೀರು ವಿಚಾರದಲ್ಲಿ ಸಹ ಆಟಗಾರರ ಚುಚ್ಚು ಮಾತು ಗಾಯದ ಮೇಲೆ ಉಪ್ಪು ಸವರಿದಂತಾಗಿದೆ. ಹೀಗಾಗಿಯೇ ವರ್ತೂರು ಸಂತೋಷ್ ಅವರಿಗೆ ಮಹಾಮನೆಯ ಆಟ ಸಾಕು ಅನ್ನಿಸತೊಡಗಿದೆ.

ವರ್ತೂರು ಸಂತೋಷ್ sudeep

ಹೀಗಾಗಿಯೇ 37 ಲಕ್ಷಕ್ಕೂ ಅಧಿಕ ಮತ ಪಡೆದರೂ ಮನೆಯಿಂದ ಹೊರಹೋಗಲು ಸಂತೋಷ್ ಪಟ್ಟು ಹಿಡಿದಿದ್ದಾರೆ. ಸಂತೋಷ್ ಅವರ ನಿರ್ಧಾರ ಕಿಚ್ಚ ಸುದೀಪ್ ಅವರಲ್ಲೂ ಬೇಸರ ಮೂಡಿಸಿತು. ಅದೆಷ್ಟು ಸಲ ಮನಪರಿವರ್ತನೆ ಸುದೀಪ್ ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಕಾರ್ಯಕ್ರಮವನ್ನೇ ಅರ್ಧಕ್ಕೆ ನಿಲ್ಲಿಸಿದ ಸುದೀಪ್ ಹೊರ ನಡೆದಿದ್ದಾರೆ. ಸುದೀಪ್ ಅದೆಷ್ಟರ ಮಟ್ಟಿದೆ ಅಪ್ ಸೆಟ್ ಆದ್ರೂ ಅಂದ್ರೆ, ವರ್ತೂರು ಸಂತೋಷ್ ಅವರಿಗೆ ಮತ ಹಾಕಿದ ವೀಕ್ಷಕರಗೆ ಕೈ ಮುಗಿದು ಕ್ಷಮೆ ಕೇಳಿದ್ರು.

ಈ ನಡುವೆ ಸಂತೋಷ್ ಅವರನ್ನು ಮನೆ ಮಂದಿ ಮನವೊಲಿಸಲು ಮುಂದಾದ್ರು. ಸಿರಿ, ಡ್ರೋನ್ ಪ್ರತಾಪ್, ವಿನಯ್ ತುಕಾಲಿ ಸಂತೋಷ್ ಸೇರಿದಂತೆ ಬಹುತೇಕರು ಬಿಟ್ಟು ಹೋಗಬೇಡ ಎಂದು ಸಾರಿ ಸಾರಿ ಹೇಳಿದ್ರು. ಆದರೆ ಜಪ್ಪಯ್ಯ ಅಂದ್ರು ಜಗ್ಗಲಿಲ್ಲ ಹಳ್ಳಿಕಾರ್ ಸಂತೋಷ್.

ಆದರೆ ಬಿಗ್ ಬಾಸ್ ಸಂಡೆ ಎಪಿಸೋಡ್ ಮುಗಿದ ಬಳಿಕ ತೋರಿಸಿದ ಪ್ರೋಮೋದಲ್ಲಿ ವರ್ತೂರು ಸಂತೋಷ್ ಹಾಜರಿದ್ದರು. ದೀಪಾವಳಿ ಸ್ಪೆಷಲ್ ಗೆಸ್ಟ್ ಆಗಿ ಆಗಮಿಸಿದ ಸುಷ್ಮಾ ಕೂಡಾ ಸಂತೋಷ್ ಅವರ ಮನವೊಲಿಸುವ ಕೆಲಸ ಮಾಡಿದ್ದಾರೆ. ಈ ಎಲ್ಲಾ ಬೆಳವಣಿಗೆ ಗಮನಿಸಿದ್ರೆ ವರ್ತೂರು ಸಂತೋಷ್ ಈ ವಾರ ಬಿಗ್ ಬಾಸ್ ಮನೆಯಲ್ಲಿ ಮುಂದುವರಿದಂತೆ ಕಾಣಿಸುತ್ತಿದೆ.

bigg boss 10
Tags: bbk10bigg boss kannadaFEATURED
ShareTweetSendShare

Discussion about this post

Related News

2ನೇ ಬೆಳೆಗೆ ನೀರು ಹರಿಸಲು ತುಂಗಾಭದ್ರ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ

2ನೇ ಬೆಳೆಗೆ ನೀರು ಹರಿಸಲು ತುಂಗಾಭದ್ರ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರಾಮಮಂದಿರ ಮೇಲೆ ಬುಲ್ಡೋಜರ್‌ : ನರೇಂದ್ರ ಮೋದಿ

ಬೆಂಗಳೂರು ಸೇರಿದಂತೆ ದೇಶದ 40 ಸ್ಥಳಗಳಲ್ಲಿ ನಾಳೆ ಬೃಹತ್ ರೋಜ್‌ಗಾರ್ ಮೇಳ

ಲೈಂಗಿಕ ದೌರ್ಜನ್ಯ ಕಿರುಕುಳ ತಡೆಗಾಗಿ ಕಾರ್ಯಾಗಾರ

ಲೈಂಗಿಕ ದೌರ್ಜನ್ಯ ಕಿರುಕುಳ ತಡೆಗಾಗಿ ಕಾರ್ಯಾಗಾರ

ವಕ್ಫ್ ಹೆಸರಲ್ಲಿ ರೈತರ ಜಮೀನು ಕಬಳಿಕೆಗೆ ಯತ್ನ- ಶಾಸಕ ಶರಣಗೌಡ ಕಂದಕೂರ್ ಆರೋಪ

ತಿಪಟೂರಿನಲ್ಲಿ ಜನಶತಾಬ್ದಿ ರೈಲು ನಿಲುಗಡೆಗೆ ಅನುಮತಿ : ಕೇಂದ್ರ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ

ಬಿಜೆಪಿ ನಡೆಗೆ ನಡುಗಿದ ಸರ್ಕಾರ : ಉಪ ಚುನಾವಣೆ ಕಾರಣಕ್ಕೆ ಎಚ್ಚೆತ್ತುಕೊಂಡ ಸರ್ಕಾರ

ಚಿಕ್ಕಬಳ್ಳಾಪುರದಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ : ನಗರ ಸಭೆ

ಕೆ.ಸಿ. ವ್ಯಾಲಿ ಯೋಜನೆಯಿಂದ ಕೋಲಾರ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಏರಿಕೆ

ಇಡೀ ಮಾನವೀಯತೆಗೆ ಭಾರತ ನೆಲೆ; ಸಂಸ್ಕೃತಿ ಸಂರಕ್ಷಣೆಗೆ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಕರೆ

ಅತಿವೃಷ್ಟಿಯಿಂದ ತೊಂದರೆಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ : ಜಿಲ್ಲಾಧಿಕಾರಿಗಳಿಗೆ ಸಿದ್ದರಾಮಯ್ಯ ಸೂಚನೆ

ವೆಬ್ ಸ್ಟೋರಿಸ್

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
On Nov 13, 2023
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
By Radhakrishna Anegundi
On Nov 9, 2023
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
By Radhakrishna Anegundi
On Nov 4, 2023

Web Stories

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು
ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • Advertise
  • About

© 2024 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2024 Torrent Spree - All Rights Reserved | Powered by Kalahamsa Infotech Pvt. ltd.

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • ↓
  • ಗ್ರೂಪ್
  • ಗ್ರೂಪ್