ಬಿಗ್ ಬಾಸ್ ಮನೆಯ ಮೂರನೇ ಸ್ಪರ್ಧಿಯಾಗಿ ಹಿರಿಯ ಕಲಾವಿದ ಶಂಕರ್ ಅಶ್ವಥ್ ಪ್ರವೇಶಿಸಿದ್ದಾರೆ.
ತಂದೆಯ ಆಸೆಯನ್ನು ಇನ್ನೂ ಪೂರೈಸಲಾಗಿಲ್ಲ ಎಂದು ಕೊರಗುತ್ತಿರುವ ಶಂಕರ್ ಅಶ್ವಥ್, ಬಿಗ್ ಬಾಸ್ ಮನೆ ಪ್ರವೇಶಿಸುವ ಮೂಲಕ ತಂದೆ ಆಸೆಯೊಂದನ್ನು ಪೂರೈಸುತ್ತೇನೆ ಅಂದಿದ್ದಾರೆ.
ಇದೇ ವೇಳೆ ಬಿಗ್ ಬಾಸ್ ಮನೆ ಪ್ರವೇಶಿಸುವ ಮುನ್ನ ಸುದೀಪ್ ಜೊತೆ ಮಾತುಕತೆ ನಡೆಸಿದ ಶಂಕರ್ ಅಶ್ವಥ್, ಸುದೀಪ್ ಅವರ ಸಹಾಯವನ್ನು ನೆನಪಿಸಿಕೊಂಡರು.
ಅದು 132 ತಿಂಗಳ ಹಿಂದಿನ ಕಥೆ. ಹಿರಿಯ ನಟ ಅಶ್ವಥ್ ಅವರು ಆಸ್ಪತ್ರೆಯಲ್ಲಿದ್ದರು. ಈ ಸಂದರ್ಭದಲ್ಲಿ ಕರೆ ಮಾಡಿದ್ದ ಸುದೀಪ್, ತಂದೆಯವರನ್ನು ಮಲ್ಯ ಆಸ್ಪತ್ರೆಗೆ ದಾಖಲಿಸಿ ಎಲ್ಲಾ ವ್ಯವಸ್ಥೆಯನ್ನು ಮಾಡುವುದಾಗಿ ಹೇಳಿದ್ದರಂತೆ.
ಅಷ್ಟು ಮಾತ್ರವಲ್ಲದೆ ಶಂಕರ್ ಅಶ್ವಥ್ ಅವರ ವಿಟಿ ಪ್ರಸಾರವಾಗುವ ಸಂದರ್ಭದಲ್ಲೂ ಸುದೀಪ್ ಅವರು ಭಾವುಕರಾಗಿದ್ದರು.
Discussion about this post