ಬಿಗ್ ಬಾಸ್ ಸೀಸನ್ 8 ನಿಧಾನವಾಗಿ ಬಿಸಿಯೇರಲಾರಂಭಿಸಿದೆ. ಕೆಲ ಸ್ಪರ್ಧಿಗಳು ಡಮ್ಮಿ ಅನ್ನಿಸಿದರೂ ಸೈಲೆಂಟ್ ಆಗಿ ಫೈನಲ್ ತನಕ ಹೋಗೋದು ಗ್ಯಾರಂಟಿ.
ಇನ್ನು ಕೆಲವರು ಸದ್ದು ಮಾಡಿ ಮಹಾಮನೆಯಲ್ಲಿ ಉಳಿಯುವ ಪ್ರಯತ್ನ ಮುಂದುವರಿಸಿದ್ದಾರೆ.
ಈ ನಡುವೆ ಒಂಟಿ ಮನೆಯ ಸ್ಪರ್ಧಿಗಳ ನಡುವೆ ವಿರಸ ಮೂಡಲಾರಂಭಿಸಿದೆ. ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಿದ್ದ ಮಂದಿ, ಹಂಚಿ ಕೆಲಸ ಮಾಡೋಣ ಅನ್ನುತ್ತಿದ್ದ ಮಂದಿ ಕಿತ್ತಾಟ ಶುರುವಿಟ್ಟುಕೊಂಡಿದ್ದಾರೆ.
ಹೀಗೆ ಕಿತ್ತಾಟ ಶುರು ಮಾಡಿಸುವುದೇ ಬಿಗ್ ಬಾಸ್ ಮನೆಯ ತಾಕತ್ತು. ಎಂತವರನ್ನೂ ಹೇಗೆ ಬೇಕಾದರೂ ಆಟವಾಡಿಸುವ ತಾಕತ್ತು ಆ ಮನೆಗಿದೆ.
ಈ ನಡುವೆ ಈ ಬಾರಿಯ ಸೀಸನ್ ನಲ್ಲಿ ಬಿಗ್ ಬಾಸ್ ಮನೆಯಲ್ಲಿ ಸಿಕ್ಕಾಪಟ್ಟೆ ತಲೆ ತಿನ್ನುವಂತೆ ಕಾಣಿಸುತ್ತಿರೋದು ನಿರ್ಮಲ.
ಬಿಗ್ ಬಾಸ್ ವೇದಿಕೆಯಲ್ಲೇ ಸುದೀಪ್ ತಲೆ ಹುಳ ಬಿಟ್ಟವರು ಇವರು. ಊಟ ಆಯ್ತಾ ಅಂದ್ರೆ ಮುಂಡಾಸು ಮೂರು ಮೊಳ ಅನ್ನುವ ಉತ್ತರ ಇವರದ್ದು. ಅಡುಗೆ ಬರುತ್ತದೆಯೇ ಅನ್ನುವ ಪ್ರಶ್ನೆಗೆ ಉತ್ತರ ಪಡೆಯಲು ಸುದೀಪ್ ಸಿಕ್ಕಾಪಟ್ಟೆ ಬೆವರು ಹರಿಸಬೇಕಾಗಿ ಬಂದಿತ್ತು.
ಹಾಗೇ ನೋಡಿದರೆ ಈ ಹಿಂದಿನ ಸೀಸನ್ ಗಳನ್ನು ಇದೇ ರೀತಿಯ ಸ್ಪರ್ಧಿಗಳಿದ್ದರು. ಒಳ್ಳೆ ಹುಡುಗ ಪ್ರಥಮ್ ಬಿಗ್ ಬಾಸ್ ಮನೆಯ ಅನಾಸಿನ್ ಎಂದೇ ಕರೆಸಿಕೊಂಡಿದ್ದರು.
ಇದಾದ ಬಳಿಕ ಬಂದ ಅಕ್ಷತಾ ಪಾಂಡವಪುರ ಕೂಡಾ ಹಲವರ ತಲೆಗೆ ಹುಳ ಬಿಟ್ಟಿದ್ದರು. ಒಂಟಿಯಾಗಿ ತಿರುಗಾಡೋದು, ಹೊರ ಜಗತ್ತಿಗೂ ತನಗೂ ಸಂಬಂಧವೇ ಇಲ್ಲದಂತೆ ಆಡೋದು, ಸಹ ಸ್ಪರ್ಧಿಯಾಗಿದ್ದ ಆರ್ ಜೆ ರಾಕೇಶ್ ಜೊತೆ ಲವ್ವಿ ಡವ್ವಿ ಆಟ ಕಾರಣದಿಂದ ಪಾಂಡವಪುರ ವೀಕ್ಷಕರಿಗೆ ಹುಚ್ಚು ಹಿಡಿಸಿದ್ದರು.

ನಂತರ ಸೀಸನ್ ನಲ್ಲಿ ಬಂದ ಚೈತ್ರಾ ಕೊಟ್ಟೂರು ಕೂಡಾ ಕಡಿಮೆ ಇರಲಿಲ್ಲ, ಅದ್ಭುತ ಪ್ರತಿಭೆಯಾಗಿದ್ದರೂ ಬಿಗ್ ಬಾಸ್ ಮನೆಯಲ್ಲಿ ಅವರಾಡಿದ ರೀತಿಯೇ ಭಿನ್ನವಾಗಿತ್ತು.
ಆ ಸೀಸನ್ ನ ವಿನ್ನರ್ ಶೈನ್ ಶೆಟ್ಟಿ ಹಿಂದೆ ಬಿದ್ದಿದ್ದ ಚೈತ್ರಾ, ಸೊಪ್ಪು ಮಾರುವವನೊಂದಿಗಿನ ಲವ್ ಸ್ಟೋರಿ ಮೂಲಕ ಹಲವು ಸ್ಪರ್ಧಿಗಳನ್ನು ಮೆಂಟಲ್ ಮಾಡಿದ್ದು ಸುಳ್ಳಲ್ಲ.

ಇನ್ನು ಬೇರೆ ಬೇರೆ ಸೀಸನ್ ಗಳಲ್ಲಿದ್ದ ಅನಾಸಿನ್ ಸ್ಪರ್ಧಿಗಳು ಯಾರು ಅನ್ನೋದನ್ನ ನೀವು ಕಮೆಂಟ್ ಮೂಲಕ ತಿಳಿಸಿ.

Discussion about this post