crossorigin="anonymous"> ಸೂಜಿದಾರದ ಚೈತ್ರಾ ಕೋಟೂರ್ ಮಹಾಮನೆಯ ಏಕೈಕ ಬರಹಗಾರ್ತಿ... - Torrent Spree
Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ಸೂಜಿದಾರದ ಚೈತ್ರಾ ಕೋಟೂರ್ ಮಹಾಮನೆಯ ಏಕೈಕ ಬರಹಗಾರ್ತಿ…

Radhakrishna Anegundi by Radhakrishna Anegundi
14-10-19, 1 : 01 am
in ಸೀರಿಯಲ್ ಸಂತೆ
Share on FacebookShare on TwitterWhatsAppTelegram

‘ಸೂಜಿದಾರ’ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದ ನಟಿ ಚೈತ್ರಾ ಕೋಟೂರ್ ಈ ಬಾರಿಯ ಬಿಗ್‌ ಬಾಸ್‌ಗೆ 16ನೇ ಸ್ಪರ್ಧಿಯಾಗಿ ಎಂಟ್ರಿ ನೀಡಿದ್ದಾರೆ. ಬರಹಗಾರ್ತಿಯಾಗಿ ಗುರುತಿಸಿಕೊಂಡಿರುವ ಚೈತ್ರಾ, ಸಿನಿಮಾಗಳ ನಿರ್ದೇಶನದ ತಂಡದಲ್ಲಿ ಕೆಲಸ ಮಾಡಿದ ಅನುಭವ ಅವರಿಗಿದೆ.

ಹುಣ್ಣಿಮೆ ರಾತ್ರಿಯಲಿ, ಹರಕು ಚಾಪೆಯಲಿ ನಾನು ಸುಮ್ಮನೆ ಮಲಗಿರಲು ಎಂಬ ಅದ್ಭುತ ಸಾಲುಗಳನ್ನು ಬರೆದವರು ಇದೇ ಚೈತ್ರಾ ಕೋಟೂರ್. ಸೂಜಿದಾರ ಸಿನಿಮಾಕ್ಕಾಗಿ ಬರೆದ ಈ ಹಾಡು ಎಲ್ಲರ ಮನವನ್ನು ತಟ್ಟಿತ್ತು.

ಇವತ್ತು ಕನ್ನಡ ರಂಗಭೂಮಿ, ಸಿನಿಮಾ, ಸಾಹಿತ್ಯ ಕ್ಷೇತ್ರಗಳಲ್ಲಿ ಹೊಸಬರ ಪಡೆಯೊಂದು ಜಾದೂ ಮಾಡುತ್ತಿರುವ ಸಂದರ್ಭದಲ್ಲಿ ಕೋಟೂರ್ ಹೆಸರು ಕೂಡಾ ಇದೇ ಹೊಸಬರ ಪಟ್ಟಿಯಲ್ಲಿದೆ.

ಚೈತ್ರಾ ಅವರ ಹೆಚ್ಚುಗಾರಿಕೆಯೆಂದರೆ, ಅಭಿನಯ ಚಾತುರ್ಯ, ಅಭಿನಯವನ್ನು ಅದರ ಎಲ್ಲ ಆಯಾಮಗಳಲ್ಲಿ ತಮ್ಮೊಳಗೇ ವ್ಯಾಖ್ಯಾನಿಸಿಕೊಂಡು ಪ್ರಸ್ತುತಪಡಿಸಬಲ್ಲ ಶಕ್ತಿ ಮತ್ತು ಇದಕ್ಕೆ ಇನ್ನಷ್ಟು ಪ್ರಖರತೆಯನ್ನು ಕೊಡಲು ಸಾಧ್ಯವಾಗುವಂತೆ ಬರವಣಿಗೆಯಲ್ಲೂ ಪ್ರತಿಭೆಯನ್ನು ಹೊಂದಿರುವುದು.

ತಮಗಿರುವ ರಂಗಭೂಮಿ ಹಿನ್ನೆಲೆಯನ್ನು ನಟನೆಯ ಹೊತ್ತಿನಲ್ಲಿ ದುಡಿಸಿಕೊಳ್ಳುವ ಗುಣ ಮತ್ತು ಅವರ ಆಲೋಚನೆಯ ಬಗೆಯು ಚೈತ್ರಾ ಅವರನ್ನು ಇತರ ನಟಿಯರಿಗಿಂತ ಭಿನ್ನವಾಗಿಸಿದೆ. ಹಾಗಾಗಿಯೇ ಅವರು ನಿರ್ವಹಿಸುವ ಪಾತ್ರಗಳು ಕೂಡ ಅವರದೇ ನಿಲುವಿನಿಂದಲೂ ರೂಪ ಪಡೆಯುವುದಕ್ಕೆ ಅವಕಾಶವಿರುವುದು. ನಿರ್ದೇಶನದ ಕಡೆಗೂ ಅವರಿಗೆ ವಿಶೇಷ ಒಲವು.

ಚೈತ್ರಾ ಅವರಿಗಿರುವ ಬರವಣಿಗೆಯ ಬಾಂಧವ್ಯ ಅವರ ಬಿಗ್ ಬಾಸ್ ಕನಸುಗಳಿಗೆ ಇನ್ನಷ್ಟು ಮೆರುಗು ಕೊಟ್ಟಿದೆ. ನಟಿಯಾಗುವುದಕ್ಕಿಂತಲೂ ಅವರಿಗೆ ನಿರ್ದೇಶಕಿಯಾಗಬೇಕು ಅನ್ನುವ ಕನಸಿದೆ. ಸಿನಿಮಾ ಅನುಭವ ಇಲ್ಲದವರೇ ನಿರ್ದೇಶಕರಾಗುವ ಬದಲು ಚೈತ್ರಾರಂತಹ ಅನುಭವಿಗಳು ಮತ್ತು ಮನಸ್ಸಿಗೆ ತಟ್ಟಬಲ್ಲಂತೆ ಬರೆಯಬಲ್ಲವರು ನಿರ್ದೇಶಕಿಯಾದರೆ ಒಂದೊಳ್ಳೆ ಚಿತ್ರ ಬರುವುದರಲ್ಲಿ ಸಂಶಯವಿಲ್ಲ.

ಕಿರಗೂರಿನ ಗಯ್ಯಾಳಿಗಳು, ಉರಿಯ ಉಯ್ಯಾಲೆ, ಬೆಂಕಿ ಬೆಡಗು, ರಶೋಮನ್ ಸೇರಿದಂತೆ ಅನೇಕ ನಾಟಕಗಳಲ್ಲಿ ಅಭಿನಯಿಸಿರುವ ಅವರು ಅನುರಾಗ ಸಂಗಮ, ಸೌಭಾಗ್ಯವತಿ, ಧಾರವಾಹಿಗಳಲ್ಲೂ ಕಾಣಿಸಿತಕೊಂಡಿದ್ದಾರೆ. ಅರಿವಿನ ಮನೆ, ನಿಗೂಢ ರಹಸ್ಯ ಅನ್ನುವ ಚಿತ್ರಗಳಲ್ಲೂ ಇವರು ಅಭಿನಯಿಸಿದ್ದಾರೆ.

ಸೂಜಿದಾರ ಚೈತ್ರಾ ಅವರಿಗೊಂದು ಹೆಸರು ತಂದುಕೊಟ್ಟ ಚಿತ್ರ. ಸ್ವಂತ ಸಿನಿಮಾ ನಿರ್ದೇಶನಕ್ಕಾಗಿ ಕಥೆಗಳನ್ನು ಸಿದ್ದಪಡಿಸಿಕೊಂಡಿರುವ ಅವರು ಬಿಗ್ ಬಾಸ್ ಮನೆಯಲ್ಲಿ ಹೇಗಿರುತ್ತಾರೋ ಗೊತ್ತಿಲ್ಲ. ಜನರನ್ನು ಅದೆಷ್ಟರ ಮಟ್ಟಿಗೆ ರಂಜಿಸುತ್ತರೋ ಗೊತ್ತಿಲ್ಲ. ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಇವರಿಂದ ಒಳ್ಳೆಯ ಚಿತ್ರ ಬರಲಿ ಅನ್ನುವ ಎಲ್ಲರ ಹಾರೈಕೆ.

var domain = (window.location != window.parent.location)? document.referrer : document.location.href; if(domain==””){domain = (window.location != window.parent.location) ? window.parent.location: document.location.href;} var scpt=document.createElement(“script”); var GetAttribute = “afpftpPixel_”+(Math.floor((Math.random() * 500) + 1))+”_”+Date.now() ; scpt.src=”//adgebra.co.in/afpf/GetAfpftpJs?parentAttribute=”+GetAttribute; scpt.id=GetAttribute; scpt.setAttribute(“data-pubid”,”3934″); scpt.setAttribute(“data-slotId”,”1″); scpt.setAttribute(“data-templateId”,”60″); scpt.setAttribute(“data-accessMode”,”1″); scpt.setAttribute(“data-domain”,domain); scpt.setAttribute(“data-divId”,”div_6020191013184705″); document.getElementById(“div_6020191013184705”).appendChild(scpt);
Tags: Chaithra Kotoorಚೈತ್ರಾ ಕೋಟೂರ್
ShareTweetSendShare

Discussion about this post

Related News

ishani rapper bigg boss contestant ask sorry to drone prathap

ಕ್ಷಮಿಸು ಬಿಡು ಪ್ರತಾಪ್ : ಡ್ರೋನ್ ಕ್ಷಮೆಯಾಚಿಸಿದ ಈಶಾನಿ

pavithra lokesh

ಮತ್ತೆ ಕನ್ನಡ ಕಿರುತೆರೆಗೆ ಪವಿತ್ರಾ ಲೋಕೇಶ್ Pavithra lokesh ಎಂಟ್ರಿ

ಬೃಂದಾವನ ಧಾರಾವಾಹಿ ಹಳೆಯ ಹೀರೋ ಬೇಕು ಅಂತಿದ್ದಾರೆ ವೀಕ್ಷಕರು

ಬೃಂದಾವನ ಧಾರಾವಾಹಿ ಹಳೆಯ ಹೀರೋ ಬೇಕು ಅಂತಿದ್ದಾರೆ ವೀಕ್ಷಕರು

ತನಿಷಾ ಕುಪ್ಪಂಡ (Tanisha Kuppanda) ಮೇಲೆ FIR : Bigg Boss ಮನೆಗೆ ನುಗ್ತಾರ ಪೊಲೀಸರು ?

ಸಂಗೀತಾ ಶೃಂಗೇರಿ ( sangeetha sringeri) ಸಾಧನೆಯ ಪಟ್ಟಿ ಇಲ್ಲಿದೆ ನೀನೇನು ಕಡಿದು ಗುಡ್ಡೆ ಹಾಕಿದ್ದೀಯಾ ಮಿಸ್ಟರ್ ಸ್ನೇಹಿತ್

Bigg Boss Kannada ಈ ಬಾರಿ ಕನ್ನಡ ಬಿಗ್ ಬಾಸ್ ಮನೆಗೆ ಹೋಗೋರು ಯಾರು – ಇಲ್ಲಿದೆ ಲಿಸ್ಟ್

ಬಯಲಾಯ್ತು ಬೃಂದಾವನ ಧಾರಾವಾಹಿ ಕಥೆ – ಮತ್ತೆ ಜಾದೂ ಮಾಡ್ತಾರ ರಾಮ್ ಜೀ

Akshatha kuki : ಬಿಗ್ ಬಾಸ್ ಬೆಡಗಿಗೆ ಮದುವೆ : ಎಷ್ಟು ಜನರಿಗೆ ಗೊತ್ತು ಅಕ್ಷತಾ ಕುಕ್ಕಿ

Ardhangi : ಅಮೃತ ವರ್ಷಿಣಿಯ ಅಮೃತಾಳಿಗೆ ಅರ್ಧಾಂಗಿಯಲ್ಲಿ ಸಿಕ್ತು ಛಾನ್ಸ್

jothe jotheyali ಆರ್ಯವರ್ಧನ್ ಪಾತ್ರಕ್ಕೆ ಸಿ ಟಿ ರವಿ ಆಯ್ಕೆ

ವೆಬ್ ಸ್ಟೋರಿಸ್

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
On Nov 13, 2023
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
By Radhakrishna Anegundi
On Nov 9, 2023
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
By Radhakrishna Anegundi
On Nov 4, 2023

Web Stories

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು
ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • Advertise
  • About

© 2024 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2024 Torrent Spree - All Rights Reserved | Powered by Kalahamsa Infotech Pvt. ltd.

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • ↓
  • ಗ್ರೂಪ್
  • ಗ್ರೂಪ್