ಕನ್ನಡ
ಚಿತ್ರರಂಗದ ನಟ, ನಿರ್ದೇಶಕ
ಮತ್ತು ನಿರ್ಮಾಪಕ. ೩೦೦ಕ್ಕೂ ಚಿತ್ರಗಳಲ್ಲಿ ಪಾಲು ಪಡೆದ ಅನುಭವ. ಅವರೇ ಜೈ
ಜಗದೀಶ್. ಹಳೆಯ ತಲೆಮಾರಿನ ನಟರಿಂದ ಹಿಡಿದು ಹೊಸ ತಲೆಮಾರಿನ ನಟರೊಂದಿಗೆ ಸಂಬಂಧ ಹೊಂದಿರುವ ಇವರು
ಮದನ ಚಿತ್ರವನ್ನು ನಿರ್ದೇಶಿಸುವ ಮೂಲಕ ನಿರ್ದೇಶಕ ಕಿರೀಟವನ್ನು ಧರಿಸಿದರು.
ಭೂಮಿತಾಯಿಯ ಚೊಚ್ಚಲ ಮಗ(೧೯೯೮) , ಓ ಪ್ರೇಮವೆ( ೧೯೯೯),ಕೋತಿಗಳು ಸಾರ್ ಕೋತಿಗಳು(೨೦೦೧), ಕಾಂಚನಗಂಗಾ ( ೨೦೦೫),ಈ ಬಂಧನ (೨೦೦೭),ವಾರೆ ವಾಹ್ (೨೦೧೦) ಇವರ ನಿರ್ಮಾಣದ ಚಲನಚಿತ್ರಗಳು.
https://www.youtube.com/watch?v=Po8f26MbVKA
‘ಫಲಿತಾಂಶ’ ಚಲನಚಿತ್ರದಲ್ಲಿ ನಾಯಕನಾಗಿ ನಟಿಸುವ
ಮೂಲಕ ಅಭಿನಯ ಯಾತ್ರೆ ಆರಂಭಿಸಿದ ಇವರು ಬಂಧನ, ಗಾಳಿಮಾತು,ತಾಯಿ ಕನಸು ಹೀಗೆ ಹಲವಾರು
ಚಿತ್ರಗಳಲ್ಲಿ ನಟಿಸಿದ್ದಾರೆ.
ನಟ ವಿಷ್ಣುವರ್ಧನ್ ಜೊತೆಗೆ ಒಳ್ಳೆಯ ನಂಟು ಹೊಂದಿದ್ದ ಇವರು ಕನ್ನಡ ಚಿತ್ರರಂಗದ ಮಟ್ಟಿಗೆ ವಿಶ್ವವಿದ್ಯಾನಿಲಯವೇ ಸರಿ.
https://www.youtube.com/watch?v=kcPRZQWfYTE
ಹಾಗೇ ನೋಡಿದರೆ ಜೈಜಗದೀಶ್ ಅವರಿಗೆ ಬಿಗ್ ಬಾಸ್ ಮನೆ ಒಳ್ಳೆಯ ವೇದಿಕೆ ಅನ್ನಿಸುತ್ತಿಲ್ಲ. ಅವರ ಅನುಭವ, ಅವರಿಗಿರುವ ತಾಕತ್ತು ಮನೆಯೊಳಗೆ ಈವರೆಗೆ ಹೋಗಿರುವ ಸ್ಪರ್ಧಿಗಳನ್ನು ನೋಡಿದರೆ ಜೈಜಗದೀಶ್ ಮನೆಯೊಳಗೆ ಹೋಗಬಾರದಿತ್ತು. ಜೈ ಜಗದೀಶ್ ರಂತಹ ಅದ್ಭುತ ವ್ಯಕ್ತಿಗಳಿಗೆ ಈ ಗಾಸಿಪ್ ಮನೆ ಒಗ್ಗಿಬರಲಾರದು.
Discussion about this post