ಬೆಂಗಳೂರು : ಬಿಗ್ ಬಾಸ್ ಕಾರ್ಯಕ್ರಮ ಆರಂಭಕ್ಕೆ ಇನ್ನು ಒಂದಿಷ್ಟು ದಿನಗಳ ಬಾಕಿ ಫೆಬ್ರವರಿ 28ಕ್ಕೆ ಮಹಾಮನೆಯ ಉದ್ಘಾಟನೆ ನಡೆಯಲಿದೆ.
ಈ ನಡುವೆ ಕಾರ್ಯಕ್ರಮದ ಮೊದಲ ಪ್ರೋಮೋ ಬಿಡುಗಡೆಯಾಗಿದ್ದು, ಕ್ರಿಯೇಟಿವಿಟಿ ಕೊರತೆ ತೀರಾ ಸಪ್ಪೆ ಅನ್ನಿಸಿದೆ.
ಬಿಗ್ ಬಾಸ್ ಸೀಸನ್ 8ರ ಮೊದಲ ಪ್ರೋಮೋದಲ್ಲಿ ಧಮ್ ಇಲ್ಲ ಅನ್ನೋದು ಪ್ರೇಕ್ಷಕರ ಅಭಿಪ್ರಾಯ. ಸುದೀಪ್ ಸಲುವಾಗಿ ಮಾತ್ರ ಪ್ರೋಮೋ ಚೆನ್ನಾಗಿದೆ ಅನ್ನಬೇಕು.
ಇದನ್ನೂ ಓದಿ : ಪ್ರೇಮಿಗಳ ದಿನದಂದು ಬಿಗ್ ಬಾಸ್ ಪ್ರಾರಂಭ….ಆದರೆ ನಡೆಸಿಕೊಡೋದು ಸುದೀಪ್ ಅಲ್ಲ ಮೋಹನ್ ಲಾಲ್
ಈ ನಡುವೆ ಮತ್ತೊಂದು ಪ್ರೋಮೋ ಬಿಡುಗಡೆ ಮಾಡಲು ವಾಹಿನಿ ಸಿದ್ದತೆ ನಡೆಸಿದ್ದು, ಮೂಲಗಳ ಪ್ರಕಾರ ಪ್ರೋಮೋ ವಿವಾದ ಸೃಷ್ಟಿಸುವ ಸಾಧ್ಯತೆಗಳಿದೆಯಂತೆ.

ಈ ಪ್ರೋಮೋದಲ್ಲಿ ಸುದೀಪ್ ಜ್ಯೋತಿಷಿ ಅವತಾರ ತಳೆದಿದ್ದಾರೆ. ಇದಕ್ಕೆ ಪೂರಕವಾಗಿ ಕಲರ್ಸ್ ವಾಹಿನಿ ಬಿಗ್ ಬಾಸ್ ಎಂಟಕ್ಕೆ ಜೋಯಿಸರು ಇಟ್ಟಿರುವ ಮುಹೂರ್ತ ಯಾವುದು ಎಂದು ಕೇಳಿದೆ.
ಇದನ್ನೂ ಓದಿ : ಬಿಗ್ ಬಾಸ್ ಆಫರ್ ತಿರಸ್ಕರಿಸಿದ ವೈಷ್ಣವಿ ಗೌಡ… ಕಾರಣವೇನು ಗೊತ್ತಾ….?
ಜೋಯಿಸರು ಅನ್ನುವ ಪದಕ್ಕೆ ತುಂಬಾ ಗೌರವವಿದೆ. ಜೋಯಿಸ ಅನ್ನುವ ನಾಮಪದವನ್ನು ಮನೋರಂಜನೆಗಾಗಿ ಬಳಸಿಕೊಂಡಿರುವುದು ನಿಜಕ್ಕೂ ದುರಂತ ಅನ್ನುತ್ತಾರೆ ಧಾರ್ಮಿಕ ವಿದ್ವಾಂಸರು.

ಪ್ರತೀ ಸಲವೂ ಹಿಂದೂಗಳ ಭಾವನೆಗಳನ್ನು ಮಾಧ್ಯಮಗಳು ಕೆಣಕುತ್ತಿವೆ. ಹೀಗಾಗಿ ಪೂರ್ತಿ ಪ್ರೋಮೋ ಬಿಡುಗಡೆಯಾಗಲಿ. ಒಂದು ವೇಳೆ ಹಿಂದೂ ಧರ್ಮದ ನಂಬಿಕೆಯನ್ನು ಹಾಸ್ಯ ಮಾಡಿದ್ರೆ ಅಥವಾ ನಂಬಿಕೆಗೆ ಧಕ್ಕೆ ತರುವಂತಿದ್ದರೆ ಹೋರಾಟ ಗ್ಯಾರಂಟಿ ಅಂದಿದ್ದಾರೆ ಹಿಂದೂ ಸಂಘಟನೆ ಮುಖಂಡರೊಬ್ಬರು.
ಇದನ್ನು ಓದಿ : 90 ದಿನದ ಬಿಗ್ ಬಾಸ್ ಆಟಕ್ಕೆ ಸುದೀಪ್ ಗಳಿಸೋದು ಎಷ್ಟು ಕೋಟಿ ಗೊತ್ತಾ….?
ಈ ಹಿಂದೆ ಕಲರ್ಸ್ ವಾಹಿನಿಯ ಪ್ರತಿ ಸ್ಪರ್ಧಿ ವಾಹಿನಿ ಜಾತಿಯೊಂದರ ಭಾವನೆಗಳನ್ನು ಕೆಣಕಿ ವಿವಾದಕ್ಕೆ ಸಿಲುಕಿತ್ತು. ಬಳಿಕ ಕ್ಷಮೆ ಕೇಳಿದ್ದ ವಾಹಿನಿ ಇಕ್ಕಟ್ಟಿನಿಂದ ಪಾರಾಗಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ
Discussion about this post