ಮುಂಬೈ : ಮೊನ್ನೆ ಮೊನ್ನೆ ಪಲ್ಸ್ ಪೊಲೀಯೋ ಲಸಿಕೆ ದಿನ ಆರೋಗ್ಯ ಸಿಬ್ಬಂದಿ ಲಸಿಕೆ ಬದಲು ಮಕ್ಕಳ ಬಾಯಿಗೆ ಸ್ಯಾನಿಟೈಸರ್ ಹಾಕಿ ಯಡವಟ್ಟು ಮಾಡಿಕೊಂಡಿದ್ದರು.
ಇದರ ಬೆನ್ನಲ್ಲೇ ಮುಂಬೈ ಪಾಲಿಕೆಯ ಉಪ ಕಮಿಷನರ್ ಒಬ್ಬರು ನೀರೆಂದು ಸ್ಯಾನಿಟೈಸರ್ ಕುಡಿದಿದ್ದಾರೆ.
ಬುಧವಾರ ಪಾಲಿಕೆಯ ಬಜೆಟ್ ಮಂಡಿಸುವ ವೇಳೆ ಈ ಘಟನೆ ನಡೆದಿದ್ದು, ಉಪ ಆಯುಕ್ತ ರಮೇಶ್ ಪವಾರ್ ಅಪಾಯದಿಂದ ಪಾರಾಗಿದ್ದಾರೆ.

ಬಜೆಟ್ ಮಂಡಿಸುವ ಸಂದರ್ಭದಲ್ಲಿ ನೀರಿನ ಬಾಟಲಿ ಹಾಗೂ ಸ್ಯಾನಿಟೈಸರ್ ಬಾಟಲಿಗಳನ್ನು ಇರಿಸಲಾಗಿತ್ತು. ದುರಂತ ಅಂದ್ರೆ ಎರಡೂ ಬಾಟಲಿಗಳು ನೋಡುವುದಕ್ಕೆ ಒಂದೇ ರೀತಿ ಇತ್ತು.
ಇನ್ನೇನು ಬಜೆಟ್ ಓದಲು ಪ್ರಾರಂಭಿಸಬೇಕು ಅನ್ನುವಷ್ಟರಲ್ಲಿ ಪವಾರ್ ಗುಟುಕು ನೀರು ಕುಡಿಯಲು ಮುಂದಾಗಿದ್ದಾರೆ. ಹಾಗೇ ಸ್ಯಾನಿಟೈಸರ್ ಬಾಟಲಿ ತೆಗೆದುಕೊಂಡು ಮುಚ್ಚಳ ತೆಗೆದು ಬಾಯಿಗೆ ಹಾಕಿದ್ದಾರೆ.
ರುಚಿ ಬದಲಾಗಿದ್ದು ಗೊತ್ತಾಗುತ್ತಿದ್ದಂತೆ ಬಾಯಿಯೊಳಗೆ ಹೋದ ಸ್ಯಾನಿಟೈಸರ್ ಅನ್ನು ಉಗುಳಿದ್ದಾರೆ.
ಬಳಿಕ ಸಭಾಂಗಣದಿಂದ ಹೊರ ನಡೆದ ರಮೇಶ್ ಪವಾರ್ ವಿರಾಮದ ಬಳಿಕ ಸುಧಾರಿಸಿಕೊಂಡು ಹಿಂತಿರುಗಿದ್ದಾರೆ. ಬಳಿಕ ಬಜೆಟ್ ಮಂಡಿಸಲಾಗಿದೆ.
Discussion about this post