ಒಂದು ಕಾಲದ ನೀಲಿ ಚಿತ್ರಗಳ ರಾಣಿ ಸನ್ನಿ ಲಿಯೋನ್ ಕಾರ್ಯಕ್ರಮಕ್ಕೆ ಕನ್ನಡ ಪರ ಸಂಘಟನೆಗಳು ಅಡ್ಡಿ ಮಾಡಿದ್ದು, ನಂತ್ರ ಎಂಜಲು ಕಾಸಿಗೆ ಇದೇ ಕನ್ನಡ ಪರ ಸಂಘಟನೆ ಸದಸ್ಯರು ಕೈಯೊಡ್ಡಿದ್ದು ಹಳೆಯ ಸುದ್ದಿ.
ಇದೀಗ ಮತ್ತೊಮ್ಮೆ ಸನ್ನಿ ಲಿಯೋನ್ ಸುದ್ದಿಯಲ್ಲಿದ್ದಾಳೆ. ಅದು ಕೂಡಾ ಉತ್ತರ ಕರ್ನಾಟಕದ ಹಳ್ಳಿಯೊಂದರ ಯುವಕರ ಕಾರಣಕ್ಕೆ.
ಇತ್ತೀಚೆಗೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಹುಡಾ ಗ್ರಾಮದ ಅಂಬಾಮಠದಲ್ಲಿ ನಡೆಯುತ್ತಿರುವ ಅಂಬಾದೇವಿ ಜಾತ್ರೆಗಾಗಿ ಹಾಕಿದ್ದ ಬ್ಯಾನರ್ ಗಮನ ಸೆಳೆದಿತ್ತು.
ಶ್ರೀಮತಿ ಸನ್ನಿ ಲಿಯೋನ್ ಯುವಕ ಮಂಡಳದ ಹೆಸರಿನಲ್ಲಿ ಜಾತ್ರೆಗೆ ಶುಭ ಕೋರಲಾಗಿತ್ತು. ಆರೇ ಸನ್ನಿ ಲಿಯೋನ್ ಹೆಸರಿನಲ್ಲಿ ಯುವಕ ಸಂಘವೇ ಅನ್ನುವ ಪ್ರಶ್ನೆ ಜಾತ್ರೆಗೆ ಪರ ಊರಿನಿಂದ ಬಂದವರಿಗೆ ಕಾಡಿತ್ತು.

ಇದೇನು ಸನ್ನಿ ಲಿಯೋನ್ ಅಭಿಮಾನಿ ವರ್ಗವನ್ನು ಸಂಪಾದಿಸಿದ್ದು ನೀಲಿ ಚಿತ್ರಗಳ ಮೂಲಕ. ಆದರೆ ನೀಲಿ ಚಿತ್ರ ನೋಡಿದವರು ಅಭಿಮಾನಿ ಸಂಘ ಕಟ್ಟಿಕೊಳ್ಳಲು ಸಾಧ್ಯವೇ.
ಈ ಅಭಿಮಾನಿ ಸಂಘದ ಅಸಲಿ ಕಥೆಯೇನು ಎಂದು ಹುಡುಕಿಕೊಂಡು ಹೊರಟರೆ ಸಿಕ್ಕಿದ್ದು ಅಚ್ಚರಿಯ ಕಥೆ.
ಗ್ರಾಮದ ಕಾಲೇಜಿಗೆ ಹೋಗುವ ಕೆಲ ವಿದ್ಯಾರ್ಥಿಗಳು ಹಾಗೂ ಕೆಲಸ ಮಾಡುವ ಯುವಕರು ಸೇರಿಕೊಂಡು ಎರಡು ತಿಂಗಳ ಹಿಂದೆ ಶ್ರೀಮತಿ ಸನ್ನಿ ಲಿಯೋನ್ ಯುವಕ ಮಂಡಲ ಹೆಸರಿನಲ್ಲಿ ಸಂಘ ರಚಿಸಿಕೊಂಡಿದ್ದಾರೆ.

ಮೊದಲು ಈ ಹೆಸರು ಇಡುವುದಕ್ಕೆ ಗ್ರಾಮದ ಹಿರಿಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಕೊನೆಯ ಆಕೆಯ ಬದುಕಿನಲ್ಲಿ ಆದ ಬದಲಾವಣೆ, ಆಕೆಯ ಸಮಾಜ ಸೇವೆಯನ್ನು ಹೇಳಿದ ನಂತ್ರ ಹಿರಿಯರು ಒಕೆ ಅಂದಿದ್ದರು.
ಢಿಪರೆಂಟ್ ಹೆಸರಿನಲ್ಲಿ ಸಂಘ ಸ್ಥಾಪಿಸಿಕೊಂಡ ಯುವಕರು ಇದೀಗಎರಡು ತಿಂಗಳ ಹರೆಯದ ಸಂಘಟನೆ ವತಿಯಿಂದ ಮುಂದಿನ ದಿನಗಳಲ್ಲಿ ಪರಿಸರ ರಕ್ಷಣೆ ಸೇರಿದಂತೆ ಉತ್ತಮ ಕೆಲಸ ಮಾಡಲು ನಿರ್ಧರಿಸಿದ್ದಾರೆ.
Discussion about this post