crossorigin="anonymous"> ಈ ಮೀನು ತಿಂದರೆ ಕ್ಯಾನ್ಸರ್ ಗ್ಯಾರಂಟಿ...! - Torrent Spree
Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ಈ ಮೀನು ತಿಂದರೆ ಕ್ಯಾನ್ಸರ್ ಗ್ಯಾರಂಟಿ…!

Radhakrishna Anegundi by Radhakrishna Anegundi
06-08-18, 4 : 22 pm
in ರಾಜ್ಯ
fish 4
Share on FacebookShare on TwitterWhatsAppTelegram

ಸಮುದ್ರದ ಮೀನುಗಳಿಗೆ ರಾಸಾಯನಿಕ ಬಳಸಲಾಗುತ್ತಿದೆ ಅನ್ನುವ ಸುದ್ದಿ ಇತ್ತೀಚೆಗೆ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಅದೃಷ್ಟದಿಂದ ರಾಜ್ಯದ ಕರಾವಳಿ ಭಾಗದಲ್ಲಿ ರಾಸಾಯನಿಕ ಬಳಸಿದ ಮೀನುಗಳು ಪತ್ತೆಯಾಗಿಲ್ಲ ಅನ್ನುವುದು ನೆಮ್ಮದಿ.

ಮನುಷ್ಯರ ಹೆಣ ಹಾಳಾಗದಂತೆ ಬಳಸುವ ರಾಸಾಯನಿಕವನ್ನೇ ಮೀನುಗಳು ಕೆಡದಂತೆ ಬಳಸುವ ದಂಧೆಯೊಂದು ಅನಾವರಣಗೊಂಡು ಮೀನು ಪ್ರಿಯರು ತಲ್ಲಣಗೊಂಡಿದ್ದರು.

ರಾಸಾಯನಿಕ ಬಳಿದ ಮೀನು ತಿಂದರೆ ಆ ರೋಗ ಬರುತ್ತದೆ, ಈ ರೋಗ ಬರುತ್ತದೆ ಎಂದು ಎಲ್ಲರೂ ಹೇಳಿದ್ದರು.

ಆದರೆ ಬೆಂಗಳೂರಿನಲ್ಲಿ ಸದ್ದಿಲ್ಲದೆ ರೋಗ ಹೊತ್ತುವ ಮೀನುಗಳ ಸಾಕಾಣಿಕೆ ನಡೆಯುತ್ತಿದೆ. ಅದನ್ನೇ ಕಡಿಮೆ ದರಕ್ಕೆ ಮಾರಾಟ ಮಾಡಲಾಗುತ್ತಿದೆ ಅನ್ನುವುದು ಬಹಳಷ್ಟು ಜನರಿಗೆ ಗೊತ್ತೇ ಇಲ್ಲ.

ಜೂನ್ ತಿಂಗಳಲ್ಲಿ ನ್ಯೂಸ್ 18 ನ ಸರ್ಜಿಕಲ್ ಸ್ಟೈಕ್ ಕಾರ್ಯಕ್ರಮದಲ್ಲಿ ವಿಜಯಲಕ್ಷ್ಮಿ ಶಿಬರೂರು ಇಂತಹುದೊಂದು ಕರಾಳ ದಂಧೆಯನ್ನು ಬಯಲು ಮಾಡಿದ್ದಾರೆ.

fish-3

ಇಡೀ ಇಂಡಿಯಾದಲ್ಲಿ ಬ್ಯಾನ್ ಆಗಿರುವ ಕ್ಯಾಟ್ ಫಿಶ್ ಅಥವಾ ಆನೆ ಮೀನನ್ನು ಚಿಂತಾಮಣಿ, ಸೂಲಿಬೆಲೆ, ಚಿನ್ನಸಂದ್ರಗಳಲ್ಲಿ ಸಾಕಲಾಗುತ್ತಿದೆ ಎಂದು ಕರಾಳದಂಧೆಯನ್ನು ಬಿಚ್ಚಿಟ್ಟಿದ್ದರು.

ಡೆಡ್ಲಿ ಫಿಶ್ ಮಾಫಿಯಾದ ಪಿನ್ ಟೂ ಪಿನ್ ವಿವರ ಕೊಟ್ಟಿದ್ದ ಅವರು ಕೇವಲ ಚಿಂತಾಮಣಿ ಮಾತ್ರವಲ್ಲದೆ ರಾಜ್ಯದ ನಾನಾ ಭಾಗಗಳಲ್ಲಿ ಈ ದಂಧೆ ನಡೆಯುತ್ತಿದೆ ಎಂದು ಹೇಳಿದ್ದರು. ಬ್ಯಾನ್ ಆಗಿರುವ ದಂಧೆ ಇಲ್ಲಿ ಬಿಂದಾಸ್ ಎಂದು ಸಾರಿದ್ದರು.

fish-1

ಕ್ಯಾಟ್ ಫಿಶ್ ಅಪಾಯವೇಕೆ…

ಕ್ಯಾಟ್ ಫಿಶ್ ಸಾಕುವ ಕೊಳಗಳನ್ನು ನೋಡಿದರೆ ಯಾರೊಬ್ಬರೂ ಆ ಮೀನುಗಳನ್ನು ತಿನ್ನಲಾರರು. ಕೊಳೆತು ನಾರುವ ಕೊಳಗಳಲ್ಲಿ ಇದನ್ನು ಸಾಕಲಾಗುತ್ತದೆ. ಇನ್ನು ಇದಕ್ಕೆ ಆಹಾರ ಸತ್ತ ಪ್ರಾಣಿಗಳು.

ಸತ್ತ ದನ,ನಾಯಿಯ ಶವ ತಂದು ಇದೇ ಕೆರೆಗೆ ಹಾಕಲಾಗುತ್ತದೆ. ವಿಕೃತ ಮೀನಿಗೆ ಕೊಳೆತ ಮಾಂಸ, ಮಾಂಸದ ತ್ಯಾಜ್ಯಗಳನ್ನು ಸುರಿಯಲಾಗುತ್ತದೆ. ಅದನ್ನೇ ತಿಂದ ಕ್ಯಾಟ್ ಫಿಶ್ ಗಳು ದಷ್ಟ ಪುಷ್ಟವಾಗಿ ಬೆಳೆಯುತ್ತದೆ.

ಇನ್ನು ಈ ಮೀನನಲ್ಲಿ ಪಾದರಸ ಅಂಶವಿದ್ದು, ನರವ್ಯೂಹವನ್ನೇ ತಿಂದು ಹಾಕುತ್ತದೆ. ಈ ಮೀನಿನ ಮಾಂಸದೊಳಗಿದೆ ವಿಷಕಾರಿ ಅಂಶ ಕ್ಯಾನ್ಸರ್ ಕಾರಕ ಎಂದು ಮೀನುಗಾರಿಕಾ ಇಲಾಖೆಯ ಅಧಿಕಾರಿಗಳೇ ಹೇಳಿದ್ದಾರೆ.

ಗರ್ಭಿಣಿಯರು ತಿಂದರೆ ಮುಗಿಯಿತು ಕಥೆ. ಹುಟ್ಟುವ ಮಕ್ಕಳಲ್ಲಿ ನರ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತದೆಯಂತೆ.

ರಕ್ತ ಹೆಪ್ಪು ಗಟ್ಟಿಸುವ ಸಾಮರ್ಥ್ಯ ಈ ಮೀನಿನ ಮಾಂಸಕ್ಕಿದ್ದು, ಹೃದ್ರೋಗಕ್ಕೂ ಕಾರಣವಾಗಬಹುದು.

ಬ್ಯಾನ್ ಆಗಿದ್ದರೂ ಸುಪ್ರೀಂಕೋರ್ಟ್ ಆದೇಶವಿದೆ ಎಂದು ಸುಳ್ಳು ಹೇಳುವ ದಂಧೆಕೋರರು, ಮುಳ್ಳು ಕಡಿಮೆ ಇದ್ದು,ರುಚಿ ಹೆಚ್ಚಿರುವ ಮೀನಿನ ಚರ್ಮ ಸುಲಿದು, ಬೇರೆ ಯಾವುದೋ ಮೀನಿನ ಹೆಸರು ಕೊಟ್ಟು ಮಿಕ್ಸ್ ಮಾಡುತ್ತಾರೆ. ಹೀಗಾಗಿ ಗೊತ್ತಿಲ್ಲದಂತೆ ಇದು ಸಿಲಿಕಾನ್ ಸಿಟಿಯ ಜನರ ಹೊಟ್ಟೆ ಸೇರುತ್ತಿದೆ.
ಇನ್ನು ದಂಧೆ ಕೋರರು ಹೇಳುವಂತೆ UP, MP ಗಳಿಗೆ ಇದನ್ನು ರಫ್ತು ಬೇರೆ ಮಾಡ್ತಾರಂತೆ. ಕೋಲ್ಕತ್ತಾದಿಂದ ಮರಿ ತರಿಸಿಕೊಳ್ಳುವ ದಂಧೆಕೋರರು, ಮೀನು ದಪ್ಪ ಆಗ್ಲಿ ಅಂತಾ ಕೆಮಿಕಲ್ ಬಳಸುತ್ತಾರೆ, ಸ್ಟೆರಾಯಿಡ್ ಕೂಡಾ ಹಾಕ್ತಾರಂತೆ. ಅಲ್ಲಿಗೆ ಲೆಕ್ಕ ಹಾಕಿ ಕೊಳಕು ಕೊಳದ ಮೀನಿನ ಶಕ್ತಿಯನ್ನು.

fish-2

ಸರ್ಜಿಕಲ್ ಸ್ಟ್ರೈಕ್ ಪ್ರಸಾರವಾಗಿ ಹಲವು ತಿಂಗಳುಗಳೇ ಕಳೆದಿದೆ. ಸಮುದ್ರದ ಮೀನಿಗೆ ರಾಸಾಯನಿಕ ಬೆರೆಸುವ ಅಂಶ ಸದ್ದು ಮಾಡಿತು. ಆದರೆ ಡೆಡ್ಲಿ ಕ್ಯಾಟ್ ಫಿಶ್ ಬಗ್ಗೆ ಯಾರೊಬ್ಬರೂ ಚಕಾರವೆತ್ತಲಿಲ್ಲ.

ಕಲ್ಯಾಣ ರಾಜ್ಯದ ಬಗ್ಗೆ ಮಾತನಾಡುವ ನಾಯಕರು ತುಟಿ ಬಿಚ್ಚಲಿಲ್ಲ. ಬೆಂಗಳೂರು ಹೊರವಲಯದಲ್ಲಿ ತಯಾರಾಗುವ ನಿಧಾನ ವಿಷ, ಮನುಷ್ಯರನ್ನು ಅವರಿಗೆ ಅರಿವಿಲ್ಲದೆ ಕೊಲ್ಲುತ್ತಿದೆ. ಗ್ರಾಹಕರಿಗಂತು ಇದನ್ನು ಪತ್ತೆ ಮಾಡುವುದು ಅಸಾಧ್ಯ.

ಜಿಲ್ಲಾಧಿಕಾರಿಗಳಿಂದ ಹಿಡಿದು ಪಿಡಿಓ ತನಕ ಖಡಕ್ಕ್ ಆದೇಶ ಕೊಟ್ಟು ಕ್ಯಾಟ್ ಫಿಶ್ ಅಡ್ಡೆಗಳಿದ್ದರೆ ಮುಚ್ಚಿಸಿ, ಇಲ್ಲವೇ ಮನೆಗೆ ನಡೆಯಿರಿ ಅಂದರೆ ಈ ದಂಧೆಗೆ ಬ್ರೇಕ್ ಬೀಳುತ್ತಿತ್ತು. ಆದರೆ ಅಧಿಕಾರಿಗಳಿಗೂ ಆದಾಯ ತರುವ ಮೂಲವಾಗಿರುವ ಕ್ಯಾಟ್ ಫಿಶ್ ದಂಧೆಗೆ ಬ್ರೇಕ್ ಹಾಕುವವರು ಯಾರು..?

Tags: catfish
ShareTweetSendShare

Discussion about this post

Related News

2ನೇ ಬೆಳೆಗೆ ನೀರು ಹರಿಸಲು ತುಂಗಾಭದ್ರ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ

2ನೇ ಬೆಳೆಗೆ ನೀರು ಹರಿಸಲು ತುಂಗಾಭದ್ರ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರಾಮಮಂದಿರ ಮೇಲೆ ಬುಲ್ಡೋಜರ್‌ : ನರೇಂದ್ರ ಮೋದಿ

ಬೆಂಗಳೂರು ಸೇರಿದಂತೆ ದೇಶದ 40 ಸ್ಥಳಗಳಲ್ಲಿ ನಾಳೆ ಬೃಹತ್ ರೋಜ್‌ಗಾರ್ ಮೇಳ

ಲೈಂಗಿಕ ದೌರ್ಜನ್ಯ ಕಿರುಕುಳ ತಡೆಗಾಗಿ ಕಾರ್ಯಾಗಾರ

ಲೈಂಗಿಕ ದೌರ್ಜನ್ಯ ಕಿರುಕುಳ ತಡೆಗಾಗಿ ಕಾರ್ಯಾಗಾರ

ವಕ್ಫ್ ಹೆಸರಲ್ಲಿ ರೈತರ ಜಮೀನು ಕಬಳಿಕೆಗೆ ಯತ್ನ- ಶಾಸಕ ಶರಣಗೌಡ ಕಂದಕೂರ್ ಆರೋಪ

ತಿಪಟೂರಿನಲ್ಲಿ ಜನಶತಾಬ್ದಿ ರೈಲು ನಿಲುಗಡೆಗೆ ಅನುಮತಿ : ಕೇಂದ್ರ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ

ಬಿಜೆಪಿ ನಡೆಗೆ ನಡುಗಿದ ಸರ್ಕಾರ : ಉಪ ಚುನಾವಣೆ ಕಾರಣಕ್ಕೆ ಎಚ್ಚೆತ್ತುಕೊಂಡ ಸರ್ಕಾರ

ಚಿಕ್ಕಬಳ್ಳಾಪುರದಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ : ನಗರ ಸಭೆ

ಕೆ.ಸಿ. ವ್ಯಾಲಿ ಯೋಜನೆಯಿಂದ ಕೋಲಾರ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಏರಿಕೆ

ಇಡೀ ಮಾನವೀಯತೆಗೆ ಭಾರತ ನೆಲೆ; ಸಂಸ್ಕೃತಿ ಸಂರಕ್ಷಣೆಗೆ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಕರೆ

ಅತಿವೃಷ್ಟಿಯಿಂದ ತೊಂದರೆಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ : ಜಿಲ್ಲಾಧಿಕಾರಿಗಳಿಗೆ ಸಿದ್ದರಾಮಯ್ಯ ಸೂಚನೆ

ವೆಬ್ ಸ್ಟೋರಿಸ್

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
On Nov 13, 2023
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
By Radhakrishna Anegundi
On Nov 9, 2023
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
By Radhakrishna Anegundi
On Nov 4, 2023

Web Stories

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು
ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • Advertise
  • About

© 2024 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2024 Torrent Spree - All Rights Reserved | Powered by Kalahamsa Infotech Pvt. ltd.

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • ↓
  • ಗ್ರೂಪ್
  • ಗ್ರೂಪ್