ಬೆಂಗಳೂರು : ರಮೇಶ್ ಜಾರಕಿಹೊಳಿ ಕಾಮಲೀಲೆಯ ಸಿಡಿ ಪ್ರಕರಣ ತಾರ್ಕಿಕ ಅಂತ್ಯ ತಲುಪುವ ಲಕ್ಷಣಗಳಿಲ್ಲ. ಒಬ್ಬ ಮಹಿಳೆಯ ವಿಚಾರದಲ್ಲಿ ಹೇಗೆಲ್ಲಾ ನಡೆದುಕೊಳ್ಳಬಾರದೋ ಹಾಗೆಲ್ಲಾ ನಡೆದುಕೊಳ್ಳುತ್ತಿದೆ ರಾಜಕೀಯ ಪಕ್ಷಗಳು.
ಒಬ್ಬ ಮಹಿಳೆಯ ವಿಚಾರದಲ್ಲಿ ಅದರಲ್ಲೂ ಮಹಿಳೆಯ ಮಾನ, ಮರ್ಯಾದೆ, ಆಕೆಯ ಗೌರವ ವಿಚಾರದಲ್ಲಿ ಗಂಭೀರವಾಗಿರಬೇಕಾಗಿರುವ ರಾಜ್ಯ ಸರ್ಕಾರ ಕೂಡಾ ನಿರ್ಲಕ್ಷ್ಯ ವಹಿಸಿರುವುದು ದುರಂತ. ಇಂತಹ ವಿಚಾರಗಳಲ್ಲಿ ತನಿಖೆಗೊಂದು ಕಾಲ ಮಿತಿಯಲ್ಲಿ ಹಾಕಿಕೊಳ್ಳಬೇಕಾಗಿತ್ತು ಆದರೆ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಸಂತ್ರಸ್ಥೆ ವಿಚಾರ ನಿತ್ಯ ಮಾಧ್ಯಮಗಳಲ್ಲಿ ಪ್ರಸಾರ, ಪ್ರಚಾರ ಕಾಣುತ್ತಿದೆ. ಅಂದ್ರೆ ಆಕೆಯ ಹಾಗೂ ಆಕೆಯ ಮನೆಯವರ ಮನಸ್ಥಿತಿಯೇನಾಗಬೇಕು.
ಈ ನಡುವೆ ಇಡೀ ಪ್ರಕರಣದಲ್ಲಿ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿ, ರಮೇಶ್ ಜಾರಕಿಹೊಳಿಯವರನ್ನು ರಕ್ಷಿಸುವ ಕೆಲಸವನ್ನು ರಾಜ್ಯ ಬಿಜೆಪಿ ಟ್ವೀಟರ್ ನಲ್ಲಿ ಮುಂದುವರಿಸಿದೆ.
ನಿನ್ನೆಯಷ್ಟೇ ಸಿಡಿ ಲೇಡಿಯ ಆಡಿಯೋ ಬಿಡುಗಡೆಯಾದ ಬೆನ್ನಲ್ಲೇ ಟ್ವೀಟ್ ಮಾಡಿದ್ದ ಬಿಜೆಪಿ ಮಹಾನಾಯಕ ಯಾರು ಅನ್ನುವುದನ್ನು ಸೂಚ್ಯವಾಗಿ ಹೇಳಿತ್ತು.
ಆದರೆ ಇಂದು ಎಲ್ಲವೂ ಉಲ್ಟಾ ಪಲ್ಟಾ ಆಗಿದೆ. 4ನೇ ವಿಡಿಯೋ ಬಿಡುಗಡೆ ಮಾಡಿರುವ ಸಿಡಿ ಲೇಡಿ, ಹೌದು ನಾನು ಡಿಕೆಶಿ ಹೆಸರು ಪ್ರಸ್ತಾಪ ಮಾಡಿದ್ದೇನೆ ಅನ್ನುವುದನ್ನು ಒಪ್ಪಿಕೊಂಡಿದ್ದಾರೆ. ಈ ಮೂಲಕ ಬಿಜೆಪಿ ಡಿಕೆಶಿ ವಿರುದ್ಧ ಮಾಡಿದ್ದ ಆರೋಪಕ್ಕೆ ಸಿಡಿ ಲೇಡಿಯೇ ಉತ್ತರ ಕೊಟ್ಟಿದ್ದಾರೆ.
ಮಾರ್ಚ್ 2ರಂದು ಸಿ.ಡಿ. ಹೊರಗೆ ಬರುತ್ತಿದ್ದಂತೆ, ನನಗೆ ಏನು ಮಾಡಬೇಕು ಎಂದು ಗೊತ್ತಾಗಲಿಲ್ಲ. ಸುದ್ದಿವಾಹಿನಿಯಲ್ಲಿದ್ದ ನರೇಶ್ ಅಣ್ಣನನ್ನು ಸಂಪರ್ಕಿಸಿದೆ. ಆತನೇ, ಇದಕ್ಕೆಲ್ಲ ರಾಜಕೀಯ ಬೆಂಬಲ ಬೇಕು. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಜೊತೆ ಮಾತನಾಡೋಣ ಎಂದ.
ಮನೆಗೆ ಹೋದರೂ ಡಿ.ಕೆ.ಶಿವಕುಮಾರ್ ಭೇಟಿಯಾಗಲು ಆಗಲಿಲ್ಲ. ವಾಪಸು ಬಂದೆ. ಮನೆಯಿಂದಲೂ ನಿರಂತರವಾಗಿ ಕರೆಗಳು ಬರುತ್ತಿದ್ದವು. ಅವರೆಲ್ಲ ಭಯಗೊಂಡಿದ್ದರು. ಅವರನ್ನ ಸಮಾಧಾನ ಮಾಡಿದ್ದೆ.
ತಂದೆ-ತಾಯಿ, ಸಹೋದರನ ಮೊಬೈಲ್ ಸಂಭಾಷಣೆ ಎಲ್ಲೆಡೆ ಹರಿದಾಡುತ್ತಿದೆ. ಇದನ್ನು ನೋಡಿದರೆ, ಕುಟುಂಬದವರು ಭಯದಲ್ಲಿರುವಂತೆ ಕಾಣುತ್ತಿದೆ. ದಯವಿಟ್ಟು ಅವರನ್ನು ಪೊಲೀಸರು ರಕ್ಷಿಸಬೇಕು. ಅಮ್ಮ-ಅಪ್ಪ, ಇಬ್ಬರೂ ಸಹೋದರರನ್ನು ಬೆಂಗಳೂರಿಗೆ ಕರೆತಂದು ಭದ್ರತೆ ನೀಡಬೇಕು. ಅವರ ಎದುರು ನಾನು ಪೊಲೀಸರಿಗೆ ಹೇಳಿಕೆ ನೀಡುತ್ತೇನೆ ಅಂದಿದ್ದಾರೆ.
ನನ್ನ ಎದುರಾಳಿಗಳ ಅಸ್ತ್ರ ಮುಗಿಯಿತು. ಕೊನೆಯ ಬಾಣ ಬಿಟ್ಟಾಯ್ತು ಅವರು, ನಾಳೆಯಿಂದ ನನ್ನ ಆಟ ಶುರು ದು ರಮೇಶ್ ಜಾರಕಿಹೊಳಿ ಹೇಳಿದ ಬೆನ್ನಲ್ಲೇ ಸಿಡಿ ಲೇಡಿಯ ಫೋನ್ ಕಾಲ್ ಆಡಿಯೋ ಬಿಡುಗಡೆಯಾಗಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಜೊತೆಗೆ ಸರ್ಕಾರ ಉರುಳಿಸಿದವನಿಗೆ ಇದ್ಯಾವ ಲೆಕ್ಕ ಎಂದು ಜಾರಕಿಹೊಳಿ ಹೇಳಿರುವುದನ್ನು ನೋಡಿದರೆ ಇಡೀ ಸಿಡಿ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸುವುದೇ ಸೂಕ್ತ.
Discussion about this post