ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಾಟೀಲ್ ಅವರಿಂದ ಆರಂಭವಾದ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕಾರ ಪರಂಪರೆ ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಅವರ ನೇತೃತ್ವದಲ್ಲಿ ಪ್ರತಿ ಬಾರಿ ಲೋಕಸಭಾ ಸದಸ್ಯರು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸುವುದಕ್ಕೆ ಕಾರಣವಾಗಿತ್ತು.
ಈ ಬಾರಿಯೂ ಅವರ ಅನುಪಸ್ಥಿತಿಯಲ್ಲಿ ಸೋಮವಾರ ಸಂಸತ್ ಭವನದಲ್ಲಿ ನಡೆದ ಸಂಸದರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಬೆಳಗಾವಿಯ ಸಂಸದ ಸುರೇಶ್ ಅಂಗಡಿ ಹೊರತುಪಡಿಸಿ ಉಳಿದ ಎಲ್ಲಾ ಸಂಸದರು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು. ಅನಂತ ಕುಮಾರ್ ಹೆಗಡೆ ಸಂಸ್ಕೃತ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು.
ಇದೀಗ ಸಚಿವ ಸುರೇಶ್ ಅಂಗಡಿ ವಿರುದ್ಧ ಕನ್ನಡಿಗರು ಆಕ್ರೋಶಗೊಂಡಿದ್ದು, ಕನ್ನಡ ಸಂಘಟನೆಗಳು ಪ್ರತಿಭಟನೆಯ ಎಚ್ಚರಿಕೆ ನೀಡಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸುರೇಶ್ ಅಂಗಡಿ,ಯಾರೊಬ್ಬನ್ನೂ ನಂಬಲು ಅಸಾಧ್ಯ ಅನ್ನುವ ಕಾರಣ ಕೊಟ್ಟಿದ್ದಾರೆ. ಅವರು ಹೇಳುವಂತೆ “ಪ್ರಮಾಣವಚನ ಸ್ವೀಕರಿಸುವ ಕೊನೆ ಗಳಿಗೆಯಲ್ಲಿ ನನ್ನ ಕೈಗೆ ಆಂಗ್ಲ ಭಾಷೆಯ ಪ್ರತಿ ಬಂದಿತ್ತು. ಹೀಗಾಗಿ, ಅದನ್ನೇ ಓದಿ ಪ್ರಮಾಣ ಸ್ವೀಕರಿಸಬೇಕಾಯಿತು. ಬಹುಶಃ ನನ್ನ ಸಹಾಯಕರು ಆ ಬಗ್ಗೆ ಎಚ್ಚರ ವಹಿಸಿರಲಿಕ್ಕಿಲ್ಲ. ಆದರೆ, ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ. ನಾನು ಯಾವಾಗಲೂ ಕನ್ನಡ ಭಾಷೆಗೆ ಮೊದಲ ಪ್ರಾಶಸ್ತ್ಯ ಕೊಡುತ್ತಲೇ ಬಂದಿದ್ದೇನೆ. ಕನ್ನಡದ ಬಗ್ಗೆ ನನಗಿರುವ ಪ್ರೀತಿಯನ್ನು ಯಾರೂ ಅನುಮಾನಿಸುವ ಅಗತ್ಯವಿಲ್ಲ” ಎಂದಿದ್ದಾರೆ.
ಕರ್ನಾಟಕ ಅದ್ಯಾವ ಸಂಸದನ ಕೈಗೂ ಇಂಗ್ಲೀಷ್ ಭಾಷೆಯ ಪ್ರತಿ ಬಾರಲಿಲ್ಲ. ಸುರೇಶ್ ಅಂಗಡಿಯವರಿಗೆ ಮಾತ್ರ ಇಂಗ್ಲೀಷ್ ಪ್ರತಿ ಬಂದಿದೆ ಅಂದ್ರೆ ಸಂಸತ್ ಭವನದಲ್ಲಿ ದಾಖಲಾಗಬೇಕಾದ ಅಚ್ಚರಿಯ ಸಂಗತಿ ಇದು.
ಹಾಗಾಂತ ಸುರೇಶ್ ಅಂಗಡಿ ಇಂಗ್ಲೀಷ್ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿಲು ಕಾರಣವಿದೆ. ಅವರು ಗೆದ್ದಿರುವುದು ಕನ್ನಡದ ನೆಲ್ಲದಲ್ಲಾದರೂ ಮರಾಠಿ ಮಾತೃಭಾಷೆಯ ಮಂದಿಯ ಓಟುಗಳು ಅವರ ಗೆಲುವಿನಲ್ಲಿ ಪ್ರಮುಖ ಮಾತ್ರ ವಹಿಸುತ್ತದೆ. ಹೀಗಾಗಿ ಬುದ್ದಿವಂತಿಕೆಯ ನಡೆಯನ್ನು ಅವರಿಟ್ಟಿದ್ದಾರೆ ಅನ್ನುವುದು ಬಹಿರಂಗ ಸತ್ಯ.
Discussion about this post