ಬೆಂಗಳೂರು : ರಾಬರ್ಟ್ ಸಿನಿಮಾ ಬಿಡುಗಡೆ ಮುಹೂರ್ತ ಫಿಕ್ಸ್ ಆಗಿದ್ದು, ಅಭಿಮಾನಿಗಳನ್ನು ರೊಚ್ಚಿಗೆಬ್ಬಿಸುವ ಕೆಲಸಗಳು ಕೂಡಾ ಪ್ರಾರಂಭವಾಗಿದೆ.
ಕೊರೋನಾ ಸಂಕಷ್ಟದ ನಂತರ ಬಿಡುಗಡೆಯಾಗುತ್ತಿರುವ ಬಹು ನಿರೀಕ್ಷಿತ ಚಿತ್ರ ರಾಬರ್ಟ್. ಹೀಗಾಗಿ ಮತ್ತೆ ಚಿತ್ರಪ್ರೇಮಿಗಳು ಥಿಯೇಟರ್ ನತ್ತ ಬರಬೇಕಾದ್ರೆ ರೊಚ್ಚಿಗೆಬ್ಬಿಸುವುದು ಅನಿವಾರ್ಯ ಕೂಡಾ ಹೌದು.

ಈ ನಡುವೆ ರಾಬರ್ಟ್ ಚಿತ್ರ ಬಿಡುಗಡೆಗೆ ಹಲವು ಅಡೆ ತಡೆಗಳು ಕೂಡಾ ಎದುರಾಗುತ್ತಿವೆ. ಇದೀಗ ಎಲ್ಲಾ ಅಡೆ ತಡೆಗಳು ನಿವಾರಣೆಯಾಗಿದ್ದು ಚಿತ್ರ ಬಿಡುಗಡೆಯಾಗುವುದನ್ನೇ ಜನ ಕಾಯುತ್ತಿದ್ದಾರೆ.
ಈ ನಡುವೆ ರಾಬರ್ಟ್ ಬಿಡುಗಡೆ ಹಿನ್ನಲೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಿರುಮಲ ತಿರುಪತಿ ದೇಗುಲಕ್ಕೆ ಭೇಟಿ ನೀಡಿದ್ದಾರೆ.

ದೇವರ ದರ್ಶನ ಪಡೆದಿರುವ ಅವರು ವಿಶೇಷ ಪೂಜೆ ಸಲ್ಲಿಸಿ ಬಂದಿದ್ದಾರೆ.
ಈಗಾಗಲೇ ರಾಬರ್ಟ್ ಸಿನಿಮಾದ ತೆಲುಗು ಅವತರಣಿಕೆಯ ಪ್ರಚಾರ ಭರ್ಜರಿಯಾಗಿ ಪ್ರಾರಂಭಗೊಂಡಿದ್ದು, ದರ್ಶನ್ ಕೂಡಾ ಪ್ರಚಾರ ಸಲುವಾಗಿ ಆಂಧ್ರ ನೆಲದಲ್ಲಿದ್ದಾರೆ.
Discussion about this post