ಬೆಂಗಳೂರು : ಚಿತ್ರದುರ್ಗದ ಪ್ರತಿಷ್ಠಿತ ಮಠವೊಂದರ ಸ್ವಾಮೀಜಿಯೊಬ್ಬರ ಪೂರ್ವಾಶ್ರಮದ ಸಹೋದರನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ.
ಇದೇ ಮಠದ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯನಿರ್ವಾಹಕನಾಗಿ ಕಾರ್ಯನಿರ್ವಹಿಸುತ್ತಿದ್ದ ಆ ಸಹೋದರನ ವಿರುದ್ಧ ಉಪನ್ಯಾಸಕಿಯೊಬ್ಬರು ಬೆಂಗಳೂರಿನ ಠಾಣೆಯೊಂದರಲ್ಲಿ ದೂರು ದಾಖಲಿಸಿದ್ದಾರೆ.
ಈ ಸಂಬಂಧ ಎಫ್ ಐ ಆರ್ ಕೂಡಾ ದಾಖಲಾಗಿದ್ದು, ಆರೋಪಿಗೆ ಜಾಮೀನು ಕೂಡಾ ನಿರಾಕರಣೆಯಾಗಿದೆ.
2019ರ ಸೆ 17 ರಂದು ನಡೆದ ಕಾರ್ಯಾಗಾರವೊಂದರಲ್ಲಿ ಮಠದ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯನಿರ್ವಾಹಕನಾಗಿ ಕಾರ್ಯನಿರ್ವಹಿಸುತ್ತಿದ್ದ ದೊರೆಸ್ವಾಮಿ ಉಪನ್ಯಾಸಕಿಯ ಮೊಬೈಲ್ ಸಂಖ್ಯೆ ಪಡೆದಿದ್ದ. ಬಳಿಕ ಪದೇ ಪದೇ ಕರೆ ಮಾಡಿ ಕಿರಿ ಕಿರಿ ಮಾಡುತ್ತಿದ್ದ.
ಕರೆ ಮಾಡಬೇಡಿ ಎಂದು ಉಪನ್ಯಾಸಕಿ ಹೇಳಿದರೂ ಆತ ಅದಕ್ಕೆ ಸೊಪ್ಪು ಹಾಕಿರಲಿಲ್ಲ. ಮಾತ್ರವಲ್ಲದೆ ನನಗೆ ವಿವಾಹವಾಗಿ ವಿಚ್ಛೇದನವಾಗಿದೆ ಎಂದು ಸಂತ್ರಸ್ಥೆಯನ್ನು ನಂಬಿಸಿ 2019ರ ಅಕ್ಟೋಬರ್ ನಲ್ಲಿ ಭೇಟಿಯಾಗಿದ್ದ.
ಅದೇ ಸಂದರ್ಭಲ್ಲಿ ಊಟಕ್ಕೆ ಆಹ್ವಾನಿಸಿ, ರಾಜಾಜಿನಗರದ ಪ್ರತಿಷ್ಟಿತ ಹೋಟೆಲ್ ನಲ್ಲಿ ಊಟ ಕೊಡಿಸಿ, ಯಶವಂತಪುರದಲ್ಲಿದ್ದ ಹೋಟೆಲ್ ಒಂದಕ್ಕೆ ಬಲವಂತವಾಗಿ ಕರೆದುಕೊಂಡು ಹೋಗಿದ್ದ. ಅಲ್ಲಿ ಅತ್ಯಾಚಾರ ಎಸಗಿದ್ದಾನೆ ಅನ್ನುವುದು ಸಂತ್ರಸ್ಥೆಯ ದೂರು.
ನಂತರವೂ ಸಂತ್ರಸ್ಥೆಗೆ ಕರೆ ಮಾಡಿದ್ದ ದೊರೆಸ್ವಾಮಿ, ಭೇಟಿಯಾಗಲು ಒತ್ತಾಯಿಸಿದ್ದ, ಬರೋದಿಲ್ಲ ಅಂದ್ರೆ ತನ್ನ ವಿಡಿಯೋ ಇದೆ ಅನ್ನುವುದಾಗಿ ಬೆದರಿಸಿದ್ದ.
ಹೀಗಾಗಿ 2019ರ ಅಕ್ಟೋಬರ್ 25 ಮತ್ತು 26 ರಂದು 2 ದಿನಗಳ ನಿರಂತರವಾಗಿ ಅತ್ಯಾಚಾರ ನಡೆಸಿದ್ದ ಹಾಗೂ ನಂತರದ ದಿನಗಳಲ್ಲೂ ಹಲವು ಬಾರಿ ನನ್ನ ಮೇಲೆ ಅತ್ಯಾಚಾರವಾಗಿದೆ ಎಂದೂ ದೂರಿನಲ್ಲಿ ವಿವರಿಸಿಲಾಗಿದೆ.
ಇದಾದ ಬಳಿಕ ಮದುವೆಯಾಗುವಂತೆ ಉಪನ್ಯಾಸಕಿ ದೊರೆಸ್ವಾಮಿಗೆ ಹೇಳಿದರೆ, ಆತ ನಿರಾಕರಿಸಿದ್ದ. ಜೊತೆಗೆ ಆತ ವಿಚ್ಛೇದನ ಪಡೆದಿಲ್ಲ ಅನ್ನುವುದು ಕೂಡಾ ಗೊತ್ತಾಗಿದೆ.
ಈ ಬಗ್ಗೆ ಪ್ರಶ್ನಿಸಿದಾಗ ದೊರೆಸ್ವಾಮಿ ಹಾಗೂ ಆತನ ಜೊತೆಗಿದ್ದ ಮಲ್ಲಿಕಾರ್ಜುನ ಹಾಗೂ ಪರಮಶಿವಯ್ಯ, ಗಂಗಾಧರ್ ನನ್ನ ಬೆದರಿಸಿದ್ದಾರೆ. ದೊರೆ ಸ್ವಾಮಿ ಮತ್ತು ನನ್ನ ನಡುವಿನ ಸಂಭಾಷಣೆಯ ಆಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇವೆ ಎಂದು ಹೇಳಿರುವುದಾಗಿ ಸಂತ್ರಸ್ಥೆ ಹೇಳಿದ್ದಾರೆ.
ಈ ನಡುವೆ ದೊರೆಸ್ವಾಮಿಯನ್ನು ಮಠದ ಹುದ್ದೆಯಿಂದ 2 ತಿಂಗಳ ಹಿಂದೆಯೇ ವಜಾ ಮಾಡಲಾಗಿದೆ. ಹಾಗೂ ಮೂವರು ಆರೋಪಿಗಳದಾ ಎಜೆ ಪರಮಶಿವಯ್ಯ, ಎನ್.ಗಂಗಾಧರ್ ಮತ್ತು ಎಂಟಿ. ಮಲ್ಲಿಕಾರ್ಜುನ್ 55ನೇ ಹೆಚ್ಚುವರಿ ನ್ಯಾಯಾಲಯದಲ್ಲಿ ಜಾಮೀನು ಪಡೆದುಕೊಂಡಿದ್ದಾರೆ.
ದೊರೆಸ್ವಾಮಿ ತಲೆ ಮರೆಸಿಕೊಂಡಿದ್ದು , ಅತ ಸಲ್ಲಿಸಿದ್ದ ಜಾಮೀನು ಅರ್ಜಿ ಕೂಡಾ ವಜಾಗೊಂಡಿದೆ.
Discussion about this post