ಬೆಂಗಳೂರು : ರಾಜ್ಯದಲ್ಲಿ ಇದೀಗ ಕಠಿಣ ಲಾಕ್ ಡೌನ್ ಜಾರಿಯಲ್ಲಿದ್ದು, ಕೊರೋನಾ ಸೋಂಕು ನಿಯಂತ್ರಣಕ್ಕೆ ಹರ ಸಾಹಸ ಮುಂದುವರಿದಿದೆ. ಲಾಕ್ ಡೌನ್ ಕಾರಣದಿಂದ ದೇವಸ್ಥಾನದ ಬಾಗಿಲು ಮುಚ್ಚಿದ್ದು ಆಸ್ತಿಕರು ಚಡಪಡಿಸುವಂತಾಗಿದೆ. ಸಂಪ್ರದಾಯ ಪಾಲಿಸುವ ಸಲುವಾಗಿ ಅರ್ಚಕರಿಗೆ ಮಾತ್ರ ದೇವಸ್ಥಾನ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ.
ಇನ್ನು ಅರ್ಚಕರು ದೇವಸ್ಥಾನ ಪ್ರವೇಶಿಸುವ ಸಂದರ್ಭದಲ್ಲಿ ಬಾಗಿಲು ತೆರೆಯುತ್ತಾರಲ್ಲ ಎಂದು ಭಕ್ತರು ಕೂಡಾ ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ. ಬರಬೇಡಿ ಮನೆಯಲ್ಲಿ ಇದ್ದುಕೊಂಡೇ ಪ್ರಾರ್ಥಿಸಿ ಅಂದರೂ ಯಾರೊಬ್ಬರೂ ಅದನ್ನು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಇದೀಗ ಹೀಗೆ ಬರುವ ಭಕ್ತರಿಂದಲೇ ಅರ್ಚಕರಿಗೆ ಸಂಕಷ್ಟ ಶುರುವಾಗಿದೆ.
ಭಕ್ತರು ದೇವಸ್ಥಾನದ ಬಾಗಿಲಲ್ಲಿ ನಿಂತು ಪೂಜೆ ಮಾಡಿದರೂ ಅರ್ಚಕರ ಮೇಲೆ ಕೇಸ್ ದಾಖಲಿಸಲಾಗುತ್ತಿದೆ. ದೇವನಹಳ್ಳಿಯ ಬೆಸ್ತರ ಪೇಟೆಯ ದೇಗುಲದಲ್ಲೂ ಹೀಗೆ ಆಗಿದೆ. ದೇವಸ್ಥಾನದ ಬಾಗಿಲು ಮುಚ್ಚಿದ್ದರೂ ಬಾಗಿಲ ಬಳಿ ಬಂದ ಭಕ್ತರಿಗೆ ಪ್ರಸಾರ ಕೊಟ್ಟ ಕಾರಣಕ್ಕೆ ಅರ್ಚಕ ಗಂಗಧಾರ್ ಸೇರಿದಂತೆ 25 ಮಂದಿ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ
Discussion about this post