crossorigin="anonymous"> ಕೊರೋನಾ ಗೆಲ್ಲಲು ಅಮೆರಿಕಾದಿಂದ ಮೋದಿಗೆ ಬಂತು ಅಮೂಲ್ಯ ಸಲಹೆ – ದೊಡ್ಡಣ್ಣನ ಮಾತಿಗೆ ಏನಾಂತರೆ ನಮೋ - Torrent Spree
Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ಕೊರೋನಾ ಗೆಲ್ಲಲು ಅಮೆರಿಕಾದಿಂದ ಮೋದಿಗೆ ಬಂತು ಅಮೂಲ್ಯ ಸಲಹೆ – ದೊಡ್ಡಣ್ಣನ ಮಾತಿಗೆ ಏನಾಂತರೆ ನಮೋ

Radhakrishna Anegundi by Radhakrishna Anegundi
01-05-21, 4 : 35 pm
in ವಿದೇಶ
biden modi
Share on FacebookShare on TwitterWhatsAppTelegram

ನವದೆಹಲಿ : ಭಾರತದಲ್ಲಿ ತಾಂಡವವಾಡುತ್ತಿರುವ ಕೊರೋನಾ ಸೋಲಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇನ್ನಿಲ್ಲದ ಸರ್ಕಸ್ ನಡೆಸುತ್ತಿದೆ. ಆದರೆ ಕೊರೋನಾ ವೈರಸ್ ಪದೇ ಪದೇ ರೂಪಾಂತರಿಯಾಗುತ್ತಿರುವ ಕಾರಣ ಕೊರೋನಾ ವಿರುದ್ಧದ ಹೋರಾಟ ಅಷ್ಟು ಸುಲಭವಾಗಿ ಮುಗಿಯುವಂತಿಲ್ಲ. ಮೊದಲ ಅಲೆಗಿಂತಲೂ ಎರಡನೆ ಅಲೆ ಭೀಕರವಾಗಿದ್ದು, ಮನೆಯಿಂದ ಹೊರಗಡೆ ಕಾಲಿಡಲು ಭಯವಾಗುತ್ತಿದೆ.

ಈ ನಡುವೆ ಭಾರತದ ಪರಿಸ್ಥಿತಿಗೆ ಸ್ಪಂದಿಸಿರುವ ವಿಶ್ವದ 40ಕ್ಕೂ ಹೆಚ್ಚು ರಾಷ್ಟ್ರಗಳು, ಸಹಾಯ ಹಸ್ತ ಚಾಚಿವೆ. ಆದರೆ ಆ ಸಹಾಯದಿಂದ ಕೊರೋನಾ ಅಟ್ಟಹಾಸವನ್ನು ಅಡಗಿಸಲು ಸಾಧ್ಯವೇ ಇಲ್ಲ ಅನ್ನುವಂತಾಗಿದೆ. ದಿನದಿಂದ ದಿನಕ್ಕೆ ರೂಪಾಂತರಿಯಾಗುವ ವೈರಸ್ ಅನ್ನು ಸೋಲಿಸಬೇಕಾದರೆ ಸಮುದಾಯವೇ ಎಚ್ಚೆತ್ತುಕೊಳ್ಳಬೇಕಿದೆ.

ಈ ನಡುವೆ ಭಾರತದ ಸ್ಥಿತಿಯ ಕುರಿತಂತೆ ಕಳವಳ ವ್ಯಕ್ತಪಡಿಸಿರುವ ಅಮೆರಿಕಾದ ಖ್ಯಾತ ಸಾಂಕ್ರಾಮಿಕ ರೋಗ ತಜ್ಞ ಡಾ. ಅಂಥೋನಿ ಫೌಸಿ, ಕೊರೋನಾ ಸುಳಿಯಲ್ಲಿ ಸಿಲುಕಿದವರನ್ನು ಅತ್ಯಂತ ಎಚ್ಚರದಿಂದ ರಕ್ಷಿಸಬೇಕಾಗಿದೆ ಅಂದಿದ್ದಾರೆ.

ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು, ಭಾರತ ಕೊರೋನಾ ವಿರುದ್ಧ ಗೆಲುವನ್ನು ಅಂತ್ಯ ಅಕಾಲಿಕವಾಗಿ ಮತ್ತು ಬೇಗ ಘೋಷಿಸಿತು. ಈ ಕಾರಣದಿಂದಲೇ ಭಾರತದಲ್ಲಿ ಕೊರೋನಾ ಮತ್ತೊಮ್ಮೆ ಅಪಾಯದ ಮಟ್ಟಕ್ಕೆ ಹೋಗಿದೆ. ಹೀಗಾಗಿ ಭಾರತ ಕೊರೋನಾವನ್ನು ಗೆಲ್ಲಬೇಕಾದರೆ ತಾತ್ಕಾಲಿಕ ಲಾಕ್ ಡೌನ್ ಒಂದೇ ಪರಿಹಾರ ಅಂದಿದ್ದಾರೆ.

ಒಂದು ವರ್ಷದ ಹಿಂದೆ ಚೀನಾದಲ್ಲಿ ಕೊರೋನಾ ಸೋಂಕು ದೊಡ್ಡದಾಗಿ ಸ್ಫೋಟಗೊಂಡಿತ್ತು. ಆಗ ಇಡೀ ಚೀನಾವನ್ನು ಲಾಕ್ ಡೌನ್ ಮಾಡಲಾಯ್ತು, ಈ ಮೂಲಕ ಚೀನಾ ಬಹುದೊಡ್ಡ ಅಪಾಯದಿಂದ ಬಲುಬೇಗ ಪಾರಾಯ್ತು ಅಂದಿರುವ ಫೌಸಿ, ಭಾರತಕ್ಕೆ ಉಳಿದಿರುವುದು ಇದೊಂದೇ ಮಾರ್ಗ ಅಂದಿದ್ದಾರೆ.

fauci

ಭಾರತವನ್ನು 6 ತಿಂಗಳಿನಷ್ಟು ಧೀರ್ಘಕಾಲ ಲಾಕ್ ಡೌನ್ ಮಾಡುವ ಅವಶ್ಯಕತೆಯಿಲ್ಲ, ಬದಲಾಗಿ ಒಂದು ತಿಂಗಳಿನಷ್ಟು ಕಾಲ ಲಾಕ್ ಡೌನ್ ಮಾಡಿದರೆ ಸಾಕು. ಈ ಮೂಲಕ ವೈರಸ್ ನ ಚೈನ್ ಲಿಂಕ್ ಅನ್ನು ಮುರಿಯಬಹುದು ಅಂದಿದ್ದಾರೆ.

ಇದೇ ವೇಳೆ ಭಾರತದ ಭೀಕರ ಪರಿಸ್ಥಿತಿಯ ಕುರಿತಂತೆ ಮಾತನಾಡಿರುವ ಫೌಸಿ, ಭಾರತದ ರಸ್ತೆಗಳಲ್ಲಿ ತಮ್ಮ ತಂದೆ, ತಾಯಿ, ಒಡಹುಟ್ಟಿದವರನ್ನು ಬದುಕಿಸಲು ಜನ ಆಕ್ಸಿಜನ್ ಗಾಗಿ ಪರದಾಡುತ್ತಿರುವ ಬಗ್ಗೆ ಕೇಳಿದ್ದೇನೆ.

ಇನ್ನು ಕೊರೋನಾ ವಿರುದ್ಧ ಸಮರದಲ್ಲಿ ಗೆಲವು ಸಾಧಿಸಲು ಕೊರೋನಾ ಲಸಿಕೆ ಪ್ರಮುಖ ಪಾತ್ರವಹಿಸುತ್ತದೆ. ಆದರೆ ಭಾರತದಂತಹ 1.4 ಬಿಲಿಯನ್ ಜನಸಂಖ್ಯೆ ಹೊಂದಿರುವ ದೇಶದಲ್ಲಿ ಕೇವಲ ಶೇ.2ರಷ್ಟು ಜನಸಂಖ್ಯೆಗೆ ಮಾತ್ರ ಲಸಿಕೆಗಳು ತಲುಪಿದೆ. ಹೀಗಾಗಿ ಕೊರೋನಾ ವಿರುದ್ಧದ ಸಮರದಲ್ಲಿ ಭಾರತ ಗೆಲುವು ಸಾಧಿಸಬೇಕಾದರೆ ಹಾದಿ ತುಂಬಾ ಉದ್ದವಿದೆ.

ಲಸಿಕಾ ಉತ್ಪಾದನ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಲಹೆ ಕೊಟ್ಟಿರುವ ಫೌಸಿ, ತ್ವರಿತವಾಗಿ ಲಸಿಕೆ ಜನರಿಗೆ ತಲುಪಬೇಕಾದರೆ ಲಸಿಕಾ ಉತ್ಪಾದನಾ ಪ್ರಮಾಣ ಹೆಚ್ಚಾಗಲೇಬೇಕು. ಭಾರತ ವಿಶ್ವದಲ್ಲೇ ಅತ್ಯಂತ ಹೆಚ್ಚು ಲಸಿಕೆಯನ್ನು ಹೆಚ್ಚಿಸುವ ದೇಶವಾಗಿದೆ. ಹೀಗಾಗಿ ವಿವಿಧ ಕಂಪನಿಗಳ ಜೊತೆಗೆ ಮಾತುಕತೆ, ಒಪ್ಪಂದ ಮಾಡಿಕೊಳ್ಳುವ ಮೂಲಕ ಲಸಿಕೆ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳಬೇಕು ಅಂದಿದ್ದಾರೆ.

ಆದರೆ ಅಮೆರಿಕಾದಿಂದ ಬಂದಿರುವ ಸಲಹೆಯನ್ನು ಪ್ರಧಾನಿ ನರೇಂದ್ರ ಮೋದಿ ಸ್ವೀಕರಿಸುವ ಲಕ್ಷಣಗಳಿಲ್ಲ. ಈ ಹಿಂದೆ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಲಾಕ್ ಡೌನ್ ನಮ್ಮ ಕೊನೆಯ ಅಸ್ತ್ರವಾಗಿರಬೇಕು ಅಂದಿದ್ದಾರೆ. ಉಳಿದ ಸಲಹೆಗಳನ್ನು ಜಾರಿಗೊಳಿಸುವ ಸಾಧ್ಯತೆಗಳಿದೆ.

Tags: anthony-fauciCorona
Share1TweetSendShare

Discussion about this post

Related News

ತೆಳು – ಬಿಗಿ – ಚಿಕ್ಕದಾದ ಬಟ್ಟೆ ಧರಿಸಬಾರದು : ಅಫ್ಫಾನಿಸ್ತಾನದಲ್ಲಿ ಮಹಿಳೆಯರಿಗೆ ಹೊಸ ನಿಯಮ

ತೆಳು – ಬಿಗಿ – ಚಿಕ್ಕದಾದ ಬಟ್ಟೆ ಧರಿಸಬಾರದು : ಅಫ್ಫಾನಿಸ್ತಾನದಲ್ಲಿ ಮಹಿಳೆಯರಿಗೆ ಹೊಸ ನಿಯಮ

ಆಫ್ರಿಕಾ ದೇಶದ ಮಂಕಿ ಪಾಕ್ಸ್ ಪಾಕಿಸ್ತಾನಕ್ಕೆ ಎಂಟ್ರಿ : ಭಾರತಕ್ಕೆ ಶುರುವಾಯ್ತು ಢವ ಢವ

ಆಫ್ರಿಕಾ ದೇಶದ ಮಂಕಿ ಪಾಕ್ಸ್ ಪಾಕಿಸ್ತಾನಕ್ಕೆ ಎಂಟ್ರಿ : ಭಾರತಕ್ಕೆ ಶುರುವಾಯ್ತು ಢವ ಢವ

ವಲಸಿಗ V/S ಬ್ರಿಟಿಷರ ನಡುವೆ ಸಂಘರ್ಷ : ಬ್ರಿಟನ್ ನಲ್ಲಿ ಹಿಂಸಾಚಾರ

ಕ್ಯೂಬಾದಲ್ಲಿ Cuba ಪೆಟ್ರೋಲ್ ದರ 456 ರೂಪಾಯಿಗೆ ಏರಿಕೆ

ಬತ್ತಿ ಹೋಗುತ್ತಿದೆ ಅಮೆಜಾನ್ ನದಿ : ಜಗತ್ತಿನ ಅಂತ್ಯಕ್ಕೆ ಸಿಕ್ತು ಮತ್ತೊಂದು ಮುನ್ಸೂಚನೆ

Warships In Karachi: ಪಾಕಿಸ್ತಾನದ ಕರಾಚಿ ಬಂದರಿನಲ್ಲಿ ಚೀನಾ ಯುದ್ಧ ನೌಕೆ

Joe Biden Visit Israel : ಅಮೆರಿಕ ಅಧ್ಯಕ್ಷ ಜೋ ಬೈಡನ್‌ ನಾಳೆ ಇಸ್ರೇಲ್‌ಗೆ

facebook meta : ಫೇಸ್ ಬುಕ್ ನಲ್ಲೂ 11000 ಸಿಬ್ಬಂದಿ ವಜಾ : ಅಸಲಿಗೆ ಕಾರಣವೇನು ಗೊತ್ತಾ…?

Indian American : ಅಮೆರಿಕಾದ ನೆಲದಲ್ಲಿ ಅವಮಾನ : ಆರೋಪಿ ಮಹಿಳೆಯನ್ನು ಬಂಧಿಸಿದ ಪೊಲೀಸರು

mexico modi : ಯುದ್ದ ತಡೆಯಲು ಮೋದಿ ನೇತೃತ್ವದಲ್ಲಿ ಸಮಿತಿ ರಚಿಸಿ : ಮೆಕ್ಸಿಕೋ ಆಗ್ರಹ

ವೆಬ್ ಸ್ಟೋರಿಸ್

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
On Nov 13, 2023
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
By Radhakrishna Anegundi
On Nov 9, 2023
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
By Radhakrishna Anegundi
On Nov 4, 2023

Web Stories

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು
ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • Advertise
  • About

© 2024 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2024 Torrent Spree - All Rights Reserved | Powered by Kalahamsa Infotech Pvt. ltd.

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • ↓
  • ಗ್ರೂಪ್
  • ಗ್ರೂಪ್