crossorigin="anonymous"> ಬಾಂಗ್ಲಾ to ಬೆಂಗ್ಳೂರು via ದೀದಿ ಊರು : ಕೋಟಿ ಕದ್ದ ಖದೀಮರು ಖರ್ಚು ಮಾಡಿದ್ದು 1600 ರೂ - Torrent Spree
Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ಬಾಂಗ್ಲಾ to ಬೆಂಗ್ಳೂರು via ದೀದಿ ಊರು : ಕೋಟಿ ಕದ್ದ ಖದೀಮರು ಖರ್ಚು ಮಾಡಿದ್ದು 1600 ರೂ

Radhakrishna Anegundi by Radhakrishna Anegundi
09-06-21, 8 : 55 am
in ಕ್ರೈಮ್
bagalagunte police
Share on FacebookShare on TwitterWhatsAppTelegram

ಬೆಂಗಳೂರು :  ಬಾಂಗ್ಲಾ ದೇಶದಿಂದ ಪಶ್ಚಿಮ ಬಂಗಾಳ ಮೂಲಕ ಅಕ್ರಮವಾಗಿ ನುಸುಳುವ ದುಷ್ಕರ್ಮಿಗಳು ಭಾರತದಲ್ಲಿ ದುಷ್ಕೃತ್ಯಗಳನ್ನು ಎಸಗುತ್ತಿದ್ದಾರೆ. ರಾಜಕೀಯ ಲಾಭದ ಸಲುವಾಗಿ ಪಶ್ಟಿಮ ಬಂಗಾಳ ಸರ್ಕಾರ ಅಕ್ರಮ ನುಸುಳುಕೋರರ ಮೇಲೆ ಕ್ರಮ ಕೈಗೊಳ್ಳಲು ಸಿದ್ದವಿಲ್ಲ.

ಪಶ್ಚಿಮ ಬಂಗಾಳ ಮಾತ್ರವಲ್ಲ ನಮ್ಮ ಕರ್ನಾಟಕ ಸರ್ಕಾರವೂ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಭಾಗಗಳಲ್ಲಿ ಬಾಂಗ್ಲಾದ ಅಕ್ರಮ ವಲಸಿಗರು ನೆಲೆಸಿದ್ದಾರೆ. ಈ ಪೈಕಿ ಅನೇಕರು ಕ್ರಿಮಿನಲ್ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದಾರೆ. ಮನಸ್ಸು ಮಾಡಿದರೆ ಮತ್ತೆ ಅವರನ್ನು ಬಾಂಗ್ಲಾಗೆ ಸೇರಿಸಬಹುದು.

ಹೀಗೆ ಬಾಂಗ್ಲಾದಿಂದ ಪಶ್ಚಿಮ ಬಂಗಾಳ ಮೂಲಕ ಎಂಟ್ರಿ ಕೊಟ್ಟ ಸಂಜೀವ್ ಸಾಹ ಮತ್ತು ಶಿಭಂಕರ್ ಸಿಲ್ ಬೆಂಗಳೂರಿಗೆ ಕಾಲಿಟ್ಟಿದ್ದರು. ಪೀಣ್ಯ, ಬಾಗಲಗುಂಟೆ ಪ್ರದೇಶದಲ್ಲಿ ಚಿಂದಿ ಆಯುತ್ತಿದ್ದ ಅವರು ದಿನಕ್ಕೆ 500 ರೂಪಾಯಿ ಸಂಪಾದಿಸುತ್ತಿದ್ದರು. ಆದರೆ ಚಿಂದಿ ಆಯುತ್ತಿದ್ದ ಅವರಿಗೆ ದಿಢೀರ್ ಶ್ರೀಮಂತರಾಗುವ ಕನಸು ಕಂಡಿದೆ. ಹೀಗಾಗಿ ಲಾಕ್ ಡೌನ್ ಸಮಯದಲ್ಲಿ ಕಳ್ಳತನ ಮಾಡಲು ನಿರ್ಧರಿಸಿದ್ದಾರೆ.

theft arrest bagalagunte

ಇದಕ್ಕಾಗಿ ಯಾರೂ ಇಲ್ಲದ ಮನೆಯನ್ನು ಟಾರ್ಗೇಟ್ ಮಾಡಿದ್ದ ಇವರಿಬ್ಬರಿಗೆ MHAR ಬಡಾವಣೆಯ ಮನೆಯೊಂದು ಕಂಡಿದೆ. ಹೀಗಾಗಿ ಅಕ್ಕಪಕ್ಕದವರ ಚಲನವನಗಳನ್ನು ಗಮನಿಸಿ ಮೇ 2 ರಂದು ಬೀಗ ಒಡೆದಿದ್ದಾರೆ. ಮೊದಲ ಪ್ರಯತ್ನದಲ್ಲೇ 90 ಲಕ್ಷ ರೂಪಾಯಿ ಕೈಸೇರಿದೆ.

ಈ ನಡುವೆ ಮನೆಯ ಬೀಗ ಮುರಿದಿರುವುದನ್ನು ಗಮನಿಸಿದ ನೆರೆ ಮನೆಯವರು ವಿಷಯವನ್ನು ಮಾಲೀಕರಿಗೆ ಮುಟ್ಟಿಸಿದ್ದಾರೆ. ಅವರು ಬಂದು ನೋಡಿದರೆ ಮನೆ ಮಗನ ವೈದ್ಯಕೀಯ ಶಿಕ್ಷಣಕ್ಕಾಗಿ ತಂದಿಟ್ಟಿದ್ದ 90 ಲಕ್ಷ ರೂಪಾಯಿ ನಾಪತ್ತೆ. ತಕ್ಷಣ ಬಾಗಲಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಪೊಲೀಸರು ಕೂಡಾ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದರು. ಆದರೆ ಫಲಿತಾಂಶ ಶೂನ್ಯ.

ಈ ನಡುವೆ ಚಿತ್ತೂರು ಪೊಲೀಸ್ ಠಾಣೆಯಿಂದ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಗೆ ಬಂದ ಕರೆ ಬಾಗಲಕುಂಟೆ ಪೊಲೀಸರ ಕಾರ್ಯಾಚರಣೆಗೆ ಜೀವ ಕೊಟ್ಟಿದೆ. ಇದೀಗ ಚಿತ್ತೂರಿಗೆ ದೌಡಾಯಿಸಿದ್ದು ಆರೋಪಿಗಳನ್ನು ಕರೆ ತಂದಿದ್ದಾರೆ.

ಕಳ್ಳರು ಸಿಕ್ಕಿದು ಹೇಗೆ..?

ಚಿಂತಾಮಣಿ ಮೂಲದ ಮನೆ ಮಾಲೀಕರು ಲಾಕ್ ಡೌನ್ ಹಿನ್ನಲೆಯಲ್ಲಿ ಮೆನಗೆ ಬೀಗ ಹಾಕಿ ಊರಿಗೆ ತೆರಳಿದ್ದರು. ಹೋಗುವ ವೇಳೆ 90 ಲಕ್ಷ ರೂಪಾಯಿ ನಗದನ್ನು ಮನೆಯಲ್ಲೇ ಬಿಟ್ಟು ಹೋಗಿದ್ದರು.

ಈ ನಡುವೆ ಕಳ್ಳತನ ಮಾಡಿದ ಬಾಂಗ್ಲಾ ಖದೀಮರು, ದೊಡ್ಡ ಮೊತ್ತ ಸಿಕ್ಕ ಖುಷಿಯಲ್ಲಿ ಕೋಲ್ಕತಾ ಸೇರಲು ನಿರ್ಧರಿಸಿದ್ದಾರೆ. ಕಳ್ಳತನ ಬಳಿಕ ವಾಹನ ಹತ್ತಿದ್ರೆ ಪೊಲೀಸರು ಹಿಡಿಯುತ್ತಾರೆ ಎಂದು ಪೀಣ್ಯಾದಿಂದ ಹೊಸಕೋಟೆ ತನಕ ನಡೆದುಕೊಂಡು ಹೋಗಿದ್ದಾರೆ. ಬಳಿಕ ಹೊಸಕೋಟೆಯಲ್ಲಿ ಕೋಲ್ಕತಾಗೆ ತೆರಳಲು ಕಾರು ಬುಕ್ ಮಾಡಿದ್ದಾರೆ. ಬಳಿಕ ಮುಳಬಾಗಿಲು ಮೂಲಕ ಚಿತ್ತೂರು ತಲುಪಿದ್ದಾರೆ.

ಈ ವೇಳೆ ಪಲನಮೇರು ಸಮೀಪ ಪೊಲೀಸರು ಲಾಕ್ ಡೌನ್ ಹಿನ್ನಲೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಚಿಂದಿ ಆಯುವವರ ಕಳ್ಳತನದ ಕಥೆ ಬೆಳಕಿಗೆ ಬಂದಿದೆ. ಇದೀಗ ಬೆಂಗಳೂರು ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ 90 ಲಕ್ಷದಲ್ಲಿ ಕೇವಲ 1600 ರೂಪಾಯಿ ಮಾತ್ರ ಖರ್ಚಾಗಿರುವುದು ಗೊತ್ತಾಗಿದೆ.

Tags: bagalagunteCrime
Share1TweetSendShare

Discussion about this post

Related News

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 16 ಬಾಲ್ಯ ವಿವಾಹ ಪ್ರಕರಣಗಳು ದಾಖಲು

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 16 ಬಾಲ್ಯ ವಿವಾಹ ಪ್ರಕರಣಗಳು ದಾಖಲು

ಎರಡು ದಿನಗಳ ಹಿಂದಷ್ಟೇ ಮದುವೆಯಾಗಿದ್ದ ನವ ದಂಪತಿ ಕಾರು ಅಪಘಾತ : ಸ್ಥಳದಲ್ಲೇ ಕೊನೆಯುಸಿರೆಳೆದ ಪತ್ನಿ

ಎರಡು ದಿನಗಳ ಹಿಂದಷ್ಟೇ ಮದುವೆಯಾಗಿದ್ದ ನವ ದಂಪತಿ ಕಾರು ಅಪಘಾತ : ಸ್ಥಳದಲ್ಲೇ ಕೊನೆಯುಸಿರೆಳೆದ ಪತ್ನಿ

ವಿಮಾನದಲ್ಲಿ ಬಂದು ಬೆಂಗಳೂರಿನಲ್ಲಿ ಕದಿಯುತ್ತಿದ್ದ ಯುಪಿ ಖದೀಮರ ಬಂಧನ

ವಿಮಾನದಲ್ಲಿ ಬಂದು ಬೆಂಗಳೂರಿನಲ್ಲಿ ಕದಿಯುತ್ತಿದ್ದ ಯುಪಿ ಖದೀಮರ ಬಂಧನ

ಅತ್ತ ದರ್ಶನ್ ಬಳ್ಳಾರಿ ಜೈಲು ಸೇರಿದ ಬೆನ್ನಲ್ಲೇ ಇತ್ತ ಎಸಿಪಿ ಚಂದನ್ ಮುಂದೆ ಹಾಜರಾದ ಚಿಕ್ಕಣ್ಣ

ಜೈಲಲ್ಲಿ ದರ್ಶನ್’ಗೆ ಆತಿಥ್ಯ : ತನಿಖೆಯ ಮೇಲುಸ್ತುವಾರಿ ವಹಿಸಿಕೊಂಡ ಆಯುಕ್ತ ಬಿ. ದಯಾನಂದ್

ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ಸಾಕ್ಷಿ : ಜೈಲಲ್ಲಿ ದರ್ಶನ್ ದರ್ಬಾರ್

ಅಪ್ಪನಿಂದ ಕಿರುಕುಳ ಮಗನಿಂದ ಅತ್ಯಾ*ಚಾರ | ರಿಪಬ್ಲಿಕ್ ಹಾಸನದ ಕಾಮಕಾಂಡ Karnataka sex tape scandal

ಐವರು ಮಂಗಳ ಮುಖಿಯರ ಅಟ್ಟಹಾಸ : ಮರ್ಮಾಂಗ ಕತ್ತರಿಸಿ ಲಿಂಗ ಪರಿವರ್ತನೆ

ತಾಯಿ ಮಗನ ಅಪಹರಣ : 9 ಮಂದಿ ಕ್ರಿಮಿನಲ್ ಗಳ ಬಂಧನ

ಪೊಲೀಸರ ನಿರ್ಲಕ್ಷ್ಯದಿಂದ ಬೇಸತ್ರ ಜನತೆ : ಫ್ಲೈ ಓವರ್ ನಿಂದ ವ್ಹೀಲಿಂಗ್ ಕೋರರ ಬೈಕ್ ಎಸೆದ ನಾಗರಿಕರು

ವೆಬ್ ಸ್ಟೋರಿಸ್

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
On Nov 13, 2023
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
By Radhakrishna Anegundi
On Nov 9, 2023
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
By Radhakrishna Anegundi
On Nov 4, 2023

Web Stories

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು
ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • Advertise
  • About

© 2024 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2024 Torrent Spree - All Rights Reserved | Powered by Kalahamsa Infotech Pvt. ltd.

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • ↓
  • ಗ್ರೂಪ್
  • ಗ್ರೂಪ್