ಚಂದನವನದ ಅಂಗಳದಲ್ಲಿ ಒಡೆಯನ ದರ್ಬಾರ್ ಶುರುವಾಗಿದೆ. ಮೊದಲ ದಿನವೇ ಡಿ ಬಾಸ್ ಭಕ್ತ ಗಣ ಚಿತ್ರವನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ.
ಈ ನಡುವೆ ಒಡೆಯನಿಗೆ ಭರ್ಜರಿ ಪ್ರಚಾರ ಕೂಡಾ ನೀಡಲಾಗುತ್ತಿದೆ. ನಟ ದರ್ಶನ್ ಸುದ್ದಿ ವಾಹಿನಿಗಳಿಗೆ ಪ್ರತ್ಯೇಕವಾಗಿ ಸಂದರ್ಶನ ಕೂಡಾ ಕೊಡುತ್ತಿದ್ದಾರೆ.
ಆ ಪೈಕಿ ಖಾಸಗಿ ವಾಹಿನಿಯೊಂದಕ್ಕೆ ಕೊಟ್ಟಿರುವ ಸಂದರ್ಶನದಲ್ಲಿ ತಮ್ಮ ಚಿತ್ರಕ್ಕೆ ಕನ್ನಡದ ನಾಯಕಿಯರೇ ಇರಬೇಕು, ಅಸಾಧ್ಯವಾದ್ರೆ ಕನ್ನಡ ಬಲ್ಲವರು ಬೇಕು, ಅದು ಅಸಾಧ್ಯ ಅನ್ನಿಸಿದ್ರೆ ಕನಿಷ್ಟ ಕನ್ನಡ ಕಲಿಯಬಲ್ಲ ನಾಯಕಿಯರು ಇರಬೇಕು ಅಂದಿದ್ದಾರೆ.

ಈ ವೇಳೆ ಐರಾವತ ಸಿನಿಮಾ ಪ್ರಸ್ತಾಪಿಸಿದ ಅವರು ನಟಿ ಊರ್ವಶಿ ನೋಡಲು ಚೆನ್ನಾಗಿದ್ದರು. ಆದರೆ ಅವರು ಕನ್ನಡ ಭಾಷೆ ಕಲಿಯಲಿಲ್ಲ. ಇದು ಐರಾವತ ಚಿತ್ರಕ್ಕೆ ಮೈನಸ್ ಪಾಯಿಂಟ್ ಆಯಿತು. ಮುಂಬೈಯಿಂದ ಬಂದವರು ತಮಿಳು ಹಾಗೂ ತೆಲುಗು ಚಿತ್ರರಂಗಕ್ಕೆ ಹೋದಾಗ ಅಲ್ಲಿನ ಭಾಷೆ ಕಲಿಯುತ್ತಾರೆ. ಆದರೆ ನಮ್ಮ ಭಾಷೆಯನ್ನು ನಿರ್ಲಕ್ಷ್ಯಿಸುತ್ತಾರೆ ಎಂದು ದರ್ಶನ್ ಅಸಮಾಧಾನ ವ್ಯಕ್ತಪಡಿಸಿದರು.

ನಮ್ಮ ಭಾಷೆಯವರನ್ನೇ ಸಿನಿಮಾದಲ್ಲಿ ಅವಕಾಶ ಕೊಟ್ಟಾಗ ಲಿಪ್ ಮೂಮೆಂಟ್ ತಿಳಿಯುತ್ತದೆ. ಲಿಪ್ ಮೂಮೆಂಟ್ ಸಿಂಕ್ ಆಗಿಲ್ಲ ಅದು ಅಭಾಸ ಅನ್ನಿಸಿಕೊಳ್ಳುತ್ತದೆ. ಜನ ಕೂಡ ಇಷ್ಟಪಡುವುದಿಲ್ಲ ಅಂದ್ರು.
ಹೀಗಾಗಿಯೇ ನಾಯಕಿಯರ ಆಯ್ಕೆ ಸಂದರ್ಭದಲ್ಲಿ ಪರಭಾಷೆಯ ನಾಯಕಿಯರ ಬಗ್ಗೆ ಒತ್ತುಕೊಡುವುದಿಲ್ಲ. ಒಂದು ವೇಳೆ ಪರಭಾಷೆಯವರೇ ಬೇಕು ಅನ್ನುವುದಾಗಿದ್ದರೆ ಆ ಮಟ್ಟದ ಆ ಎತ್ತರಕ್ಕೆ ಬೆಳೆದಿರುವವರನ್ನು ಕರೆದುಕೊಂಡು ಬರುವಂತೆ ನಿರ್ಮಾಪಕರಿಗೆ ಹೇಳುವುದಾಗಿ ದರ್ಶನ್ ತಿಳಿಸಿದ್ದಾರೆ.
ಒಟ್ಟಿನಲ್ಲಿ ದರ್ಶನ್ ಅವರ ಕನ್ನಡ ಪ್ರೀತಿಗೆ ತಲೆ ತೂಗಲೇಬೇಕು. ದರ್ಶನ್ ಅವರ ಮಾತುಗಳನ್ನು ಕೇಳಿದ ನಂತರವಾದರೂ ನಮ್ಮ ಸೋ ಕಾಲ್ಡ್ ಹೀರೋಗಳಿಗೆ ಅರ್ಥವಾದ್ರೆ ಅಷ್ಟೇ ಸಾಕು.
Discussion about this post