ಬೆಂಗಳೂರು : ಸರ್ಜಾ ಕುಟುಂಬದ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಘಳಿಗೆ ಇಂದು ಕೂಡಿ ಬಂದಿದೆ. ಚಿರು ಮತ್ತು ಮೇಘನಾ ಪುತ್ರನ ನಾಮಕರಣ ಇಂದು ನೆರವೇರಿದ್ದು, ರಾಯನ್ ರಾಜ್ ಸರ್ಜಾ ಅನ್ನುವ ಹೆಸರನ್ನು ಇಡಲಾಗಿದೆ. ಈ ಹೆಸರಿನಲ್ಲಿ ಸುಂದರಾಜ್ ಮತ್ತು ಸರ್ಜಾ ಕುಟುಂಬವನ್ನು ಮತ್ತಷ್ಟು ಬೆಸೆಯಲಾಗಿದೆ.
ಈ ನಡುವೆ ಕೆಲ ಕಿಡಿಗೇಡಿಗಳು ಸರ್ಜಾ ಹಾಗೂ ಸುಂದರ ರಾಜ್ ಕುಟುಂಬದ ನಡುವೆ ವೈಮನಸ್ಸು ಮೂಡಿದೆ. ಸಂಬಂಧ ಹಳಸಿದೆ ಅನ್ನುವ ಸುದ್ದಿಗಳು ಪ್ರಸಾರ ಮಾಡುತ್ತಿದ್ದಾರೆ. ಇವಕ್ಕೆಲ್ಲಾ ಉತ್ತರ ಕೊಟ್ಟಿರುವ ಧ್ರುವ ಸರ್ಜಾ, ಅಣ್ಣನ ಮಗನ ಹೆಸರಿನಲ್ಲೇ ಸುಂದರ್ ರಾಜ್ ಅವರ ಕುಟುಂಬ ಹಾಗೂ ಸರ್ಜಾ ಕುಟುಂಬ ಒಂದಾಗಿಯೇ ಇರುತ್ತದೆ. ಕೆಲ ಯೂ ಟ್ಯೂಬ್, ಹಾಗೂ ಬೇರೆ ಬೇರೆ ಮಾಧ್ಯಮಗಳಲ್ಲಿ ಭಿನ್ನಾಭಿಪ್ರಾಯ ಮೂಡಿಸಲು ಪ್ರಯತ್ನಿಸಲಾಗುತ್ತಿದೆ. ದಯವಿಟ್ಟು ಹಾಗೇ ಮಾಡಬೇಡಿ. ನಾವು ಎಂದಿಗೂ ಭಿನ್ನಾಭಿಪ್ರಾಯ ಮಾಡಿಕೊಳ್ಳುವುದಿಲ್ಲ ಅಂದಿದ್ದಾರೆ.
ದಿನ ದಿನ ನಾವು ಸುಧಾರಿಸಿಕೊಳ್ಳುತ್ತಿದ್ದೇವೆ. ರಾಯನ್ ಗೆ ಎಲ್ಲರಿಗೂ ಆಶೀರ್ವಾದ ಮಾಡಿ. ರಾಯನ್ ಅಂದ್ರೆ ಯುವರಾಜ, ಅವನು ಯುವರಾಜನಂತೆ ಇರುತ್ತಾನೆ ಎಂದು ಚಿಕ್ಕಪ್ಪನ ಸ್ಥಾನದಲ್ಲಿ ನಿಂತು ಧ್ರುವ ಶುಭ ಹಾರೈಸಿದ್ದಾರೆ.
Discussion about this post