crossorigin="anonymous"> ಮಿಸ್ಟರ್ ಶಶಿ..ನಿಮ್ಮನ್ನು ಬಿಗ್ ಬಾಸ್ ಮನೆಯಲ್ಲಿ ಗೆಲ್ಲಿಸಿದ್ದು ಕನ್ನಡಿಗರು JDS ಕಾರ್ಯಕರ್ತರಲ್ಲ - Torrent Spree
Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ಮಿಸ್ಟರ್ ಶಶಿ..ನಿಮ್ಮನ್ನು ಬಿಗ್ ಬಾಸ್ ಮನೆಯಲ್ಲಿ ಗೆಲ್ಲಿಸಿದ್ದು ಕನ್ನಡಿಗರು JDS ಕಾರ್ಯಕರ್ತರಲ್ಲ

Radhakrishna Anegundi by Radhakrishna Anegundi
24-03-19, 1 : 34 am
in ಮನೋರಂಜನೆ
big boss shashi
Share on FacebookShare on TwitterWhatsAppTelegram

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಯಬೇಕು, ಸದಾನಂದಗೌಡರನ್ನು ಮಣಿಸಬೇಕು ಅನ್ನುವುದು ದೇವೇಗೌಡರ ಆಸೆಯಾಗಿತ್ತು. ಆದರೆ ಅದ್ಯಾಕೋ ಸೋಲಿನ ಭೀತಿ ಕಾಡಿದ ಹಿನ್ನಲೆಯಲ್ಲಿ ದೇವೇಗೌಡರು ತುಮಕೂರಿಗೆ ವಲಸೆ ಹೋಗಿದ್ದಾರೆ.

ಈ ನಡುವೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ  ಬಿಗ್​ಬಾಸ್ ಸೀಸನ್ 6 ವಿನ್ನರ್ ಶಶಿಕುಮಾರ್ ಕಾಂಗ್ರೆಸ್ ಜೆಡಿಎಸ್ ಅಭ್ಯರ್ಥಿ ಆಗ್ತಾರೆ ಅನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ಮೂಲದ ಶಶಿಕುಮಾರ್ ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಶಶಿಕುಮಾರ್ ಭಾವ ಸತೀಶ್ ಮೂಲತಃ ಹಾಸನ ಜಿಲ್ಲೆಯವರು ಆಗಿದ್ದು, ದೇವೇಗೌಡರ ಕುಟುಂಬದ ಜೊತೆ ಶಶಿ ಕುಟುಂಬ ಆತ್ಮೀಯವಾಗಿದೆ ಎಂದು ಹೇಳಲಾಗುತ್ತಿದೆ.

ಈ ನಡುವೆ ಮಾಧ್ಯಮದೊಂದಿಗೆ ಮಾತನಾಡಿರುವ ಶಶಿ ಅವರ ಭಾವ ಸತೀಶ್ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಪ್ರತಿನಿಧಿಸಲು ಅವಕಾಶ ಬಂದಿದ್ದು ನಿಜ. ಈ ಬಗ್ಗೆ ಮನೆಯ ಎಲ್ಲಾ ಸದಸ್ಯರು ಸೇರಿಕೊಂಡು ಒಮ್ಮತದ ಅಭಿಪ್ರಾಯ ಬಂದ ಮೇಲೆ ನಾವು ಅದನ್ನು ಅಧಿಕೃತವಾಗಿ ಪ್ರಕಟಿಸುತ್ತೇವೆ ಅಂದಿದ್ದಾರೆ.

ಇನ್ನು ಶಶಿ ಕೂಡಾ ಈ ಬಗ್ಗೆ ಮಾತನಾಡಿದ್ದು, ಜೆಡಿಎಸ್​ನಿಂದ ಅಭ್ಯರ್ಥಿಯಾಗುವ ಅವಕಾಶ ಬಂದಿದೆ. ಅಂಥಾದ್ದೊಂದು ಬೆಳವಣಿಗೆ ನಡೆಯುತ್ತಿದೆ. ಸದ್ಯಕ್ಕೆ ನಾನು ಯಾವುದೇ ನಿರ್ಧಾರವನ್ನ ತೆಗೆದುಕೊಂಡಿಲ್ಲ. ಹಿರಿಯರ ಸಲಹೆಯನ್ನ ಪಡೆದು ಮುಂದಿನ ನಿರ್ಧಾರ ತಿಳಿಸುತ್ತೇನೆ ಅಂದಿದ್ದಾರೆ.

big boss shashi1

ಇದುವರೆಗೆ ಕಾಂಗ್ರೆಸ್​ನ ಹಿರಿಯ ನಾಯಕ ಬಿ.ಎಲ್​.ಶಂಕರ್​ ಹೆಸರು ಬೆಂಗಳೂರು ಉತ್ತರಕ್ಕೆ ಕೇಳಿ ಬಂದಿತ್ತು. ಆದ್ರೀಗ ದಿಢೀರ್ ಇದೀಗ ಬಿಗ್​ಬಾಸ್ ಸೀಸನ್​-6 ವಿನ್ನರ್​ ಶಶಿಕುಮಾರ್​ ಹೆಸರು ಪ್ರಸ್ತಾಪವಾಗಿದೆ.

ಶಶಿಕುಮಾರ್​ ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಜೊತೆಗೆ ಒಬ್ಬ ರೈತ ಈ ಮೂಲಕ ಮೈಲೇಜ್ ಪಡೆದುಕೊಳ್ಳುವುದು ದಳಪತಿಗಳ ತಂತ್ರ.

ಈ ಸಂಬಂಧ ಈಗಾಗ್ಲೆ ಜೆಡಿಎಸ್​ನ ಮುಖಂಡರು ಶಶಿ ಜೊತೆ ಒಂದು ಸುತ್ತಿನ ಮಾತುಕತೆಯನ್ನು ಕೂಡ ನಡೆಸಿದ್ದಾರೆ ಎನ್ನಲಾಗಿದೆ. ಎಲ್ಲಾ ಅಂದುಕೊಂಡಂತೆ ಆದರೆ ಇನ್ನೆರಡು ದಿನಗಳಲ್ಲಿ ಶಶಿ ಹೆಸರನ್ನ ಅಂತಿಮಗೊಳಿಸುವ ಸಾಧ್ಯತೆ ಇದೆ.

ಅವರನ್ನ ಕಣಕ್ಕಿಳಿಸಿದ್ರೆ ಮತದಾರರನ್ನ ಸುಲಭವಾಗಿ ಸೆಳೆಯಬಹುದೆಂಬುದು ಜೆಡಿಎಸ್​ ಲೆಕ್ಕಾಚಾರ.

big boss shashi2

ಆಧುನಿಕ ಕೃಷಿ ಮಾಡಿ ಹೆಸರು ಗಳಿಸಿರೋ ಬಿಗ್​ಬಾಸ್​ ವಿನ್ನರ್ ಶಶಿಕುಮಾರ್,​ ಎಂಎಸ್​​ಸಿ ಪದವಿ ಪಡೆದು ಕೃಷಿ ಮಾಡುತ್ತಿದ್ದಾರೆ.

ಪಾಪ ಜೆಡಿಎಸ್ ನಾಯಕರಾದರೂ ಏನು ಮಾಡಲು ಸಾಧ್ಯ. ಕಾಂಗ್ರೆಸ್ ನಿಂದ ಕಾಡಿ ಬೇಡಿ ಪಡೆದ ಕ್ಷೇತ್ರಗಳಿಗೆ ಸೂಕ್ತ ಅಭ್ಯರ್ಥಿಗಳ ಕೊರತೆ ಕಾಡುತ್ತಿದೆ. ಅದರಲ್ಲೂ ಬೆಂಗಳೂರು ಉತ್ತರದಲ್ಲಿ ಸದಾನಂದಗೌಡರ ಗೆಲುವು ಖಚಿತವಾಗಿರುವ ಹಿನ್ನಲೆಯಲ್ಲಿ. ಜೆಡಿಎಸ್ ನಿಂದ ಅಭ್ಯರ್ಥಿಯಾಗಲು ಯಾರೊಬ್ಬರೂ ಸಿದ್ದರಿಲ್ಲ.

ಹೀಗಾಗಿ ಬಿಗ್ ಬಾಸ್ ವಿನ್ನರ್ ಶಶಿಗಿರುವ ಜನಪ್ರಿಯತೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಆದರೆ ಲೋಕಸಭೆ ಚುನಾವಣೆ ಮತ ಚಲಾಯಿಸುವುದು, ಬಿಗ್ ಬಾಸ್ ಗೆ ಓಟು ಹಾಕಿದಷ್ಟು ಸುಲಭವಲ್ಲ ಅನ್ನುವುದನ್ನು ಅರಿಯದಷ್ಟು ದಡ್ಡರಲ್ಲ ಮತದಾರರು.

big boss shashi3

ಇನ್ನು ಶಶಿಗೆ ಸ್ಪರ್ಧಿಸುವ ಎಲ್ಲಾ ಅವಕಾಶಗಳು ಮುಕ್ತವಾಗಿದೆ. ಬಂದಿರೋ ಆಫರ್ ಬಗ್ಗೆ ನಿರ್ಧಾರ ಕೈಗೊಳ್ಳಲು ಅವರು ಸರ್ವ ಸ್ವತಂತ್ರರಾಗಿದ್ದಾರೆ.

ಹಾಗಿದ್ದರೂ ಬಿಗ್ ಬಾಸ್ ಅನ್ನುವ ಕಾರ್ಯಕ್ರಮದಲ್ಲಿ ಸಿಕ್ಕ ಫೇಮ್ ಅನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ಸರಿಯಲ್ಲ. ಅಂದು ಬಿಗ್ ಬಾಸ್ ಕಾರ್ಯಕ್ರಮದಲ್ಲಿ ವಿನ್ನರ್ ಮಾಡಿದ್ದು, ಕನ್ನಡಿಗರೇ ಹೊರತು ಜೆಡಿಎಸ್ ಕಾರ್ಯಕರ್ತರಲ್ಲ ಅನ್ನುವುದನ್ನು ಶಶಿ ನೆನಪಿನಲ್ಲಿಟ್ಟುಕೊಂಡರೆ ಉತ್ತಮ.

ಹಾಗಂತ ಶಶಿ ಸದಾನಂದಗೌಡರ ಮುಂದೆ ಸ್ಪರ್ಧಿಸಿದ್ರೆ, ಗೆಲ್ಲುವ ಸಾಧ್ಯತೆಗಳಿದೆಯೇ…ಗೊತ್ತಿಲ್ಲ..ಮತದಾರರ ಮನಸ್ಸಿನಲ್ಲಿ ಏನಿದೆ ಅನ್ನುವುದನ್ನು ಅರಿತುಕೊಳ್ಳಲು ಸಾಧ್ಯವಿಲ್ಲ.

big boss shashi4

ಒಂದು ವೇಳೆ ಶಶಿ ಚುನಾವಣಾ ಕಣಕ್ಕೆ ಇಳಿದರೆ ಅಂಡಿಯಂತ ಸಾವಿರ ನಾಯಕರಿರುತ್ತಾರೆ. ಹೊಡೆದುಕೊಳ್ಳಲು ಗೋಡೆ ಇರುವುದಿಲ್ಲ ಅನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಬೆಟರ್.

ShareTweetSendShare

Discussion about this post

Related News

ಕಾಂತಾರ ಚಿತ್ರದ ನಟನೆಗೆ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ : ಎರಡು ಪುರಸ್ಕಾರಗಳಿಗೆ  ಭಾಜನವಾದ ಕೆಜಿಎಫ್-೨

ಕಾಂತಾರ ಚಿತ್ರದ ನಟನೆಗೆ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ : ಎರಡು ಪುರಸ್ಕಾರಗಳಿಗೆ  ಭಾಜನವಾದ ಕೆಜಿಎಫ್-೨

ishani rapper bigg boss contestant ask sorry to drone prathap

ಕ್ಷಮಿಸು ಬಿಡು ಪ್ರತಾಪ್ : ಡ್ರೋನ್ ಕ್ಷಮೆಯಾಚಿಸಿದ ಈಶಾನಿ

pavithra lokesh

ಮತ್ತೆ ಕನ್ನಡ ಕಿರುತೆರೆಗೆ ಪವಿತ್ರಾ ಲೋಕೇಶ್ Pavithra lokesh ಎಂಟ್ರಿ

ಬಹು ಬೇಡಿಕೆಯ ನಟಿಯಾಗುವತ್ತ ಆಪಲ್ ಕೇಕ್ ಖ್ಯಾತಿಯ ಶುಭ ರಕ್ಷಾ Shubha Raksha

ಬೃಂದಾವನ ಧಾರಾವಾಹಿ ಹಳೆಯ ಹೀರೋ ಬೇಕು ಅಂತಿದ್ದಾರೆ ವೀಕ್ಷಕರು

ನಾನ್ಯಾಕೆ ರಾಜ್ ಶೆಟ್ಟಿಗೆ ಕೈ ಕೊಟ್ಟೆ : ಅದ್ಭುತ ಅವಕಾಶವನ್ನ ಕಳೆದುಕೊಂಡ್ರ ರಮ್ಯಾ

ತನಿಷಾ ಕುಪ್ಪಂಡ (Tanisha Kuppanda) ಮೇಲೆ FIR : Bigg Boss ಮನೆಗೆ ನುಗ್ತಾರ ಪೊಲೀಸರು ?

ಸಂಗೀತಾ ಶೃಂಗೇರಿ ( sangeetha sringeri) ಸಾಧನೆಯ ಪಟ್ಟಿ ಇಲ್ಲಿದೆ ನೀನೇನು ಕಡಿದು ಗುಡ್ಡೆ ಹಾಕಿದ್ದೀಯಾ ಮಿಸ್ಟರ್ ಸ್ನೇಹಿತ್

Deep fake video : ಕೊನೆಗೂ ಮೌನ ಮುರಿದ ರಶ್ಮಿಕಾ ಮಂದಣ್ಣ

ಶ್ರೀಲೀಲಾ ರಶ್ಮಿಕಾಗೆ ಹಿನ್ನಡೆ  : ದೇವರಕೊಂಡ ಪ್ರಾಜೆಕ್ಟ್ ಗೆ ಸಾಕ್ಷಿ ವೈದ್ಯ  ಎಂಟ್ರಿ

ವೆಬ್ ಸ್ಟೋರಿಸ್

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
On Nov 13, 2023
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
By Radhakrishna Anegundi
On Nov 9, 2023
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
By Radhakrishna Anegundi
On Nov 4, 2023

Web Stories

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು
ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • Advertise
  • About

© 2024 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2024 Torrent Spree - All Rights Reserved | Powered by Kalahamsa Infotech Pvt. ltd.

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • ↓
  • ಗ್ರೂಪ್
  • ಗ್ರೂಪ್