ತಮಿಳುನಾಡು ಇದೀಗ ಹಿಂದೆ ಕೇಳರಿಯದ ಭೀಕರ ಬರಕ್ಕೆ ತುತ್ತಾಗಿದೆ. ಹನಿ ನೀರಿಗೂ ಪರದಾಡುವಂತಾಗಿದೆ. ಕೆಲ ವರ್ಷಗಳ ಹಿಂದೆ ಅತಿವೃಷ್ಟಿಯಿಂದ ಕಂಗಲಾಗಿದ್ದ ನಗರ ಅನಾವೃಷ್ಟಿಗೆ ತುತ್ತಾಗಿದೆ.
ಈ ನಡುವೆ ಜನ ನೀರಿಗಾಗಿ ಪ್ರತಿಭಟನೆಗಳನ್ನು ಪ್ರಾರಂಭಿಸಿದ್ದಾರೆ. ಹಲವು ಕಡೆ ಪೊಲೀಸರು ಪ್ರತಿಭಟನೆಗೆ ನಿರಾಕರಿಸುತ್ತಿದ್ದಾರೆ. ಇದರಿಂದ ಕೆರಳಿರುವ ಸ್ವಯಂ ಸೇವಾ ಸಂಘಟನೆಯೊಂದು ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿತ್ತು.
ನೀರು ಕೊಡಲಾಗದ ಸರ್ಕಾರ ಪ್ರತಿಭಟನೆಗೂ ಅನುಮತಿ ಕೊಡುತ್ತಿಲ್ಲ ಅಂದ್ರೆ ಅರ್ಥವೇನು ಎಂದು ತನ್ನ ವಾದ ಮಂಡಿಸಿತ್ತು.
ವಾದ ಆಲಿಸಿದ ಹೈಕೋರ್ಟ್ ಸರ್ಕಾರ ಪ್ರತಿಭಟನೆಗಳನ್ನು ತಡೆಯುವ ಬದಲು ಜಲಮೂಲಗಳ ಸಂರಕ್ಷಣೆಯಲ್ಲಿ ಆಸಕ್ತಿ ಹೊಂದಿರುವ ಸಂಘ, ಸಂಸ್ಥೆಗಳೊಂದಿಗೆ ಕೆಲಸ ಮಾಡುವಂತೆ ಸಲಹೆ ನೀಡಿದೆ.
ಇದೇ ವೇಳೆ ನಗರದಲ್ಲಿ ಸದ್ಯದ ನೀರಿನ ಬಿಕ್ಕಟ್ಟನ್ನು ಎತ್ತಿ ತೋರಿಸಲು ಜೂನ್ 30ರಂದು ವಲ್ಲೂವರಕೊಟ್ಟಂ ಸಮೀಪಿ ಪ್ರತಿಭಟನೆ ನಡೆಸಲು ಎನ್ ಜಿಒಗೆ ಅನುಮತಿ ನೀಡುವಂತೆ ಚೆನ್ನೈ ಪೊಲೀಸ್ ಆಯುಕ್ತರಿಗೆ ಕೋರ್ಟ್ ಸೂಚಿಸಿದೆ.
ನಗರದ ಪ್ರತಿ ಮೂಲೆಗೂ ನೀರು ಸರಬರಾಜು ಆಗುವಂತೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಇಂತಹ ಪರಿಸ್ಥಿತಿಗಳಿಗೆ ಜನ ಜಾಗೃತಿಯೊಂದೆ ಪರಿಹಾರ. ಇಂತಹ ಸಂದರ್ಭಗಳಲ್ಲಿ ನಡೆಯುವ ಪ್ರತಿಭಟನೆಗಳನ್ನು ತಡೆಯಬಾರದು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
Discussion about this post