ಉಗ್ರಂ, ಚಂದನವನದಲ್ಲಿ ಮುರಳಿಗೆ ಹೊಸ ಬದುಕಿ ಕೊಟ್ಟ ಚಿತ್ರ. ಭಾವ ಪ್ರಶಾಂತ್ ನೀಲ್ ಕೊಟ್ಟ ಕಥೆಯಿಂದ ಮತ್ತೆ ಮುರಳಿ ಎದ್ದು ನಿಲ್ಲುವಂತೆ ಮಾಡಿದ ಚಿತ್ರ ಉಗ್ರಂ.
ಕೇವಲ ಮುರಳಿ ಮಾತ್ರವಲ್ಲ, ಪ್ರಶಾಂತ್ ನೀಲ್ ಎಂಬ ಅದ್ಭುತ ನಿರ್ದೇಶಕನನ್ನು ಇದು ಚಂದನವನಕ್ಕೆ ಕೊಟ್ಟ ಚಿತ್ರ. ಹರಿಪ್ರಿಯಾ ಸಿನಿ ಜರ್ನಿಗೆ ಹೊಸ ತಿರುವು ನೀಡಿದ ಸಿನಿಮಾ. ರವಿಬಸ್ರೂರು ಎಂಬ ಸಂಗೀತ ನಿರ್ದೇಶಕನಿಗೆ ಜೀವನ ಕೊಟ್ಟ ಚಿತ್ರ. ತಿಲಕ್ ಎಂಬ ನಟನ ಹೊಸ ಇನ್ನಿಂಗ್ಸ್ ಗೆ ಜೀವ ನೀಡಿದ ಚಿತ್ರ.

ಮೊದಲು ಪ್ರಶಾಂತ್ ನೀಲ್ ಕಥೆ ತಂದಾಗ ಮುರಳಿ ಅದನ್ನು ನಿರಾಕರಿಸಿದ್ದರು. ಆದರೆ ನೀಲ್ ಅವರ ಒತ್ತಾಯಕ್ಕೆ ಮಣಿದು ಒಪ್ಪಿದಾಗ ಉಗ್ರಂ ಚಿತ್ರದ ಟೈಟಲ್ ‘ನಂದೇ’ ಅಂತಿತ್ತು.

‘ನಂದೇ’ ಅನ್ನುವ ಟೈಟಲ್ ನಲ್ಲಿ ಸಿನಿಮಾದ ಪ್ರಚಾರ ಕೂಡಾ ಶುರುವಾಯ್ತು. ಆದರೆ ಟೈಟಲ್ ಬಗ್ಗೆ ಅಸಡ್ಡೆಯ ಮಾತುಗಳು ಬಂತು. ಹೀಗಾಗಿ ಮನಸ್ಸಲ್ಲಿ ಗೊಂದಲ ಬೇಡ ಎಂದು ಟೈಟಲ್ ಬದಲಾಯಿಸಲು ನಿರ್ಧರಿಸಲಾಯ್ತು.
‘ನಂದೇ’ ಟೈಟಲ್ ಅಷ್ಟಾಗಿ ನಮಗೆ ಆಗ್ತಿಲ್ಲ. ಬದಲಾಯಿಸೋಣ ಎಂದು ಪ್ರಶಾಂತ್ ಗೆ ಹೇಳಿದ್ರೆ ಅವರು ಯಾಕೆ ಆಗಲ್ಲ ಅಂದಿದ್ದಾರೆ. ಕೊನೆಗೆ ಪರಿಸ್ಥಿತಿ ವಿವರಿಸಿ ಹೇಳಿದ ಮೇಲೆ ಸರಿ ಎಂದು ಒಪ್ಪಿಕೊಂಡ ನೀಲ್, ‘ಉಗ್ರಂ ವೀರಂ’ ಅನ್ನುವ ಟೈಟಲ್ ತಂದ್ರು.

ಆಗ ‘ವೀರಂ’ ತೆಗೆದು ‘ಉಗ್ರಂ’ ಮಾತ್ರ ಇಟ್ಟುಕೊಂಡ್ರೆ ಚೆಂದ ಎಂದು ‘ವೀರಂ’ ಟೈಟಲ್ ಗೆ ಗೇಟ್ ಪಾಸ್ ನೀಡಿ ಉಗ್ರಂ ಉಳಿಸಿಕೊಳ್ಳಲಾಯ್ತು.
ಬಳಿಕ ಹಲವು ಅಡೆ ತಡೆ ಏಳು ಬೀಳುಗಳನ್ನು ಕಂಡ ಉಗ್ರಂ ತೆರೆಗೆ ಬಂತು. ಉಗ್ರಂನಲ್ಲಿ ಮುರಳಿಯ ಆರ್ಭಟ ನೋಡಿದವರು ಫಿದಾ ಆದ್ರು. ಚಿತ್ರ ಶತದಿನೋತ್ಸವ ಆಚರಿಸಿತು.

ನಂತ್ರ ಮುರಳಿ ಹಿಂತಿರುಗಿ ನೋಡಲಿಲ್ಲ. ಪ್ರಶಾಂತ್ ನೀಲ್ ಮಾರ್ಗದರ್ಶನದಲ್ಲೇ ಕಥೆಗಳ ಆಯ್ಕೆ ಮಾಡುತ್ತಾ ಮುನ್ನಡೆದರು. ಇದೀಗ ಭರಾಟೆ ತನಕ ಬಂದು ನಿಂತಿದ್ದಾರೆ.

Discussion about this post