ಭಾರತ ಮತ್ತು ಪಾಕಿಸ್ತಾನ ಪ್ರತ್ಯೇಕಗೊಂಡ ನಂತರ ಮೊದಲ ಬಾರಿಗೆ ಪಾಕ್ ಅಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಮೂಲದ ಹಾಂಕಾಂಗ್ ಹಿಂದೂ ದಂಪತಿ ಶಾರದಾ ಮಾತೆಗೆ ಪೂಜೆ ಸಲ್ಲಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಪಿ.ವಿ.ವೆಂಕಟರಮಣ ಮತ್ತು ಅವರ ಪತ್ನಿ ಸುಜಾತಾ ಸೇವ್ ಶಾರದಾ ಸಮಿತಿ ಹಾಗೂ ಪಿಓಕೆಯಲ್ಲಿನ ನಾಗರಿಕ ಸದಸ್ಯರ ಸಮಾಜದ ಸಂಘಟಿತ ಪ್ರಯತ್ನಗಳ ಮೂಲಕ ಅಧಿಕೃತ ವೀಸಾದೊಂದಿಗೆ ಪಿಓಕೆಯಲ್ಲಿನ ಶಾರದಾ ಪೀಠಕ್ಕೆ ತೆರಳಲು ನಿರ್ಧರಿಸಿದ್ದರು. ಆದರೆ ಅವರಿಗೆ ಅಲ್ಲಿಗೆ ಹೋಗಲು ಅನುಮತಿಗೆ ಲಭ್ಯವಾಗಲಿಲ್ಲ.
ಈ ಕಾರಣದಿಂದ ಕಿಸನ್ ಗಂಗಾ (ನೀಲಂ) ನದಿ ನಟದಲ್ಲಿ ಶಾರಾದೆಯನ್ನು ಸ್ಮರಿಸಿಕೊಂಡ ದಂಪತಿ 6ನೇ ದಿನದ ನವರಾತ್ರಿಯನ್ನು ಪೂಜೆಯನ್ನು ನದಿ ನಟದಲ್ಲೇ ನೆರವೇರಿಸಿದರು. ಹೀಗಾಗಿ ಸೂಕ್ತ ಜಾಗಕ್ಕಾಗಿ ಸೂಕ್ತ ಹುಡುಕಾಟ ನಡೆಸಿದ ವೆಂಕಟರಮಣ ಮೂರು ಕಲ್ಲುಗಳಿರುವ ಜಾಗವನ್ನು ಹುಡುಕಿ, ಶಾರಾದದೇವಿ,ನಾರಾದ ದೇವಿ ಹಾಗೂ ವಾಗ್ದೇವಿಯನ್ನು ಸ್ಮರಿಸಿ ದೇವತೆ ಮತ್ತು ಸ್ವಾಮಿ ನಂದ ಲಾಲ್ ಅವರ ಫೋಟೋಗಳನ್ನು ಇರಿಸಿ ಪೂಜೆ ಸಲ್ಲಿಸಿದ್ದಾರೆ.
ಈ ಮೂಲಕ ಶಕ್ತಿ ಪೀಠಗಳಲ್ಲಿ ಒಂದಾಗಿರುವ ಆದಿ ಶಂಕರಾಚಾರ್ಯ ಅವರಿಂದ ಸ್ಥಾಪಿತವಾಗಿರುವ ಪೀಠದಲ್ಲಿ ಹಿಂದೂಗಳಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಅನ್ನುವ ಹೋರಾಟಕ್ಕೆ ಬಲ ಬಂದ ಹಾಗಾಗಿದೆ.
Discussion about this post