ಬೆಂಗಳೂರು : ಛಲವಾದಿ ಪಾಳ್ಯದ ಬಿಜೆಪಿ ಕಾರ್ಪೋರೇಟರ್ ಆಗಿದ್ದ ರೇಖಾ ಕದಿರೇಶ್ ಕೊಲೆ ಪ್ರಕರಣ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ಒಂದು ಕಡೆ ಮುಖ್ಯಮಂತ್ರಿ ಯಡಿಯೂರಪ್ಪನವರು ಕೊಲೆ ಆರೋಪಿಗಳನ್ನು ತಕ್ಷಣ ಬಂಧಿಸಿ ಎಂದು ಕಮಿಷನರ್ ಅವರಿಗೆ ಆದೇಶಿಸಿದ್ದಾರೆ. ಹೀಗಾಗಿ ಸಹಜವಾಗಿಯೇ ಪೊಲೀಸರ ಮೇಲೆ ಒತ್ತಡ ಬಿದ್ದಿದೆ.
ಮತ್ತೊಂದು ಕಡೆ ಕೊಲೆ ನಡೆದ ಜಾಗದ ಸುತ್ತ ಮುತ್ತ 7 ಕ್ಯಾಮಾರಗಳಿದೆ. ಆದರೆ ಒಂದರಲ್ಲೂ ಕೊಲೆಗೆ ಸಾಕ್ಷಿಗಳಿಲ್ಲ. ಅದ್ಯಾವ ಕ್ಯಾಮಾರವೂ ಘಟನೆಯನ್ನು ರೆಕಾರ್ಡ್ ಮಾಡಿಲ್ಲ. ಕಾರಣ ಎಲ್ಲಾ ಏಳೂ ಕ್ಯಾಮಾರಗಳು ಆಕಾಶಕ್ಕೆ ಮುಖ ಮಾಡಿವೆ.
ಅಲ್ಲಿಗೆ ಕೊಲೆಗೂ ಮುಂಚೆ ದುಷ್ಕರ್ಮಿಗಳು ರಿಹರ್ಸಲ್ ಮಾಡಿದ್ದಾರೆ ಅನ್ನುವುದು ಸ್ಪಷ್ಟ. ಕೊಲೆ ಮಾಡುವ ಮುನ್ನ ಸ್ಥಳ ಪರಿಶೀಲನೆ ಮಾಡಿರುವ ದುಷ್ಕರ್ಮಿಗಳು ಎಲ್ಲಾ ಸಿಸಿ ಕ್ಯಾಮಾರಗಳನ್ನು ತಿರುಗಿಸಿದ್ದಾರೆ ಈ ಮೂಲಕ ಕೊಲೆಗೆ ಸಾಕ್ಷಿ ಸಿಗದಂತೆ ಮಾಡಿದ್ದಾರೆ.
ಇದೀಗ ಲಭ್ಯ ಮಾಹಿತಿಗಳ ಪ್ರಕಾರ ರೇಖಾ ಕೊಲೆಯನ್ನು ಅವರ ಗನ್ ಮ್ಯಾನ್ ಮಾಡಿದ್ದಾರೆ ಎನ್ನಲಾಗಿದೆ. ಅವರ ಗನ್ ಮ್ಯಾನ್ ಆಗಿದ್ದವನು ಪೀಟರ್, ಪೀಟರ್ ಬೇರಾರೂ ಅಲ್ಲ, ಕದರೀಶ್ ಅಕ್ಕ ಮಾಲಾ ಅವರ ಗಂಡ. ಇನ್ನು ತಾಯಿಯ ಕೊಲೆ ಕುರಿತಂತೆ ಸ್ಪೋಟಕ ಹೇಳಿಕೆ ಕೊಟ್ಟಿರುವ ರೇಖಾ ಕದಿರೇಶ್ ಪುತ್ರ ರಾಹುಲ್ ಈ ಕೊಲೆಯನ್ನು ನಮಗೆ ಗೊತ್ತಿರುವವರೇ ಮಾಡಿದ್ದಾರೆ ಅಂದಿದ್ದಾನೆ.
Discussion about this post