ಬೆಂಗಳೂರು : ಸಿಡಿ ಲೇಡಿಯ ಬಲೆಗೆ ಕೇವಲ ಸಾಹುಕಾರ್ ಖ್ಯಾತಿಯ ರಮೇಶ್ ಜಾರಕಿಹೊಳಿ ಮಾತ್ರವಲ್ಲದೆ ಮತ್ತೊಬ್ಬ ಮಾಜಿ ಸಚಿವರೂ ಸಿಕ್ಕಿ ಬಿದ್ದಿದ್ದಾರೆ ಎಂದು ಗೊತ್ತಾಗಿದೆ.
ಸಿಡಿ ಲೇಡಿ ಮತ್ತು ಡಿ, ಸುಧಾಕರ್ ನಡುವೆ ಸಾಕಷ್ಟು ಸಲ ಕರೆಗಳ ವಿನಿಮಯವಾಗಿದೆ. ಸಿಡಿ ಲೇಡಿಯ ಫೋನ್ ಕರೆಗಳ ವಿವರದಲ್ಲಿ ಡಿ. ಸುಧಾಕರ್ ಜೊತೆಗೆ ಸಾಕಷ್ಟು ಸಲ ಮಾತನಾಡಿರುವುದು ಗೊತ್ತಾಗಿದೆ.
ಲಾಕ್ ಡೌನ್ ಅವಧಿಯಲ್ಲೇ ಅತೀ ಹೆಚ್ಚು ಕರೆಗಳ ವಿನಿಮಯವಾಗಿರುವುದನ್ನು ಪತ್ತೆ ಹಚ್ಚಿರುವ ಎಸ್ಐಟಿ, ಇವರಿಬ್ಬರ ನಡುವೆ ಹಣಕಾಸು ವ್ಯವಹಾರವಾಗಿರುವುದನ್ನು ಪತ್ತೆ ಹಚ್ಚಿದೆ. ಸಿಡಿ ಬಿಡುಗೆಡೆಯಾಗುವುದಕ್ಕೂ ಎರಡು ದಿನ ಮುಂಚೆ ಸುಧಾಕರ್ ಸಿಡಿ ಲೇಡಿಗೆ ಹಣ ವರ್ಗಾಯಿಸಿದ್ದರು ಅದು ಲಕ್ಷದ ಮೊತ್ತದಲ್ಲಿತ್ತು ಅನ್ನುವುದನ್ನು SIT ಪತ್ತೆ ಹಚ್ಚಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿ, ಸುಧಾಕರ್, ಈ ವರದಿ ಬಗ್ಗೆ ನನಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ, ಸುದ್ದಿ ನೋಡಿದ ಮೇಲೆ ನಗಬೇಕೋ ಆಳಬೇಕೋ ಎಂದು ಗೊತ್ತಾಗುತ್ತಿಲ್ಲ, ಹಣಕಾಸು ವರ್ಗಾವಣೆ ಶುಂಠಿ ಮಸಿ ಏನೂ ಇಲ್ಲ.
ನನಗೆ ಸಾವಿರಾರು ಜನ ಫೋನ್ ಮಾಡ್ತಾರೆ, ನೂರಾರು ಜನ ಮಾತನಾಡುತ್ತಾರೆ. ಹೀಗಾಗಿ ಸಿಡಿ ಲೇಡಿಗೂ ನನಗೂ ಸಂಬಂಧವಿಲ್ಲ. ನನ್ನ ಫೋನ್ ನಂಬರ್ ಆಕೆಯ ಬಳಿ ಇರಬಹುದು. ಆದರೆ ಹಣ ವರ್ಗಾವಣೆ ಮಾಡಿರುವುದಕ್ಕೆ ಸಾಕ್ಷಿ ಏನಿದೆ. ಅವಳು ತುಂಬಾ ಜನರಿಗೆ ಕರೆ ಮಾಡಿರಬಹುದು ಅಂದಿದ್ದಾರೆ.
ಇನ್ನು ಎಸ್ಐಟಿ ನೋಟೀಸ್ ಕೊಟ್ಟರೆ ತನಿಖೆ ಎದುರಿಸಲು ಸಿದ್ದ, ಅವರು ಕೇಳುವ ಪ್ರಶ್ನೆಗೆ ಉತ್ತರಿಸಲು ಬದ್ಧ ಅಂದಿದ್ದಾರೆ. ಒಟ್ಟಿನಲ್ಲಿ ಸಿಡಿ ಲೇಡಿಯ ಜಾಡು ಹಿಡಿದು ಹೊರಟಿರುವ ಎಸ್ಐಟಿ ತಂಡಕ್ಕೆ ಅನಿರೀಕ್ಷಿತ ಮಾಹಿತಿಗಳು ಲಭ್ಯವಾಗುತ್ತಿದೆ.
Discussion about this post