ಬೆಂಗಳೂರು : ಹುಟ್ಟುಹಬ್ಬದಂದು ಹೊಸ ಬಟ್ಟೆ ಕೊಡಿಸಲಿಲ್ಲವೆಂದು ನೊಂದ 16 ವರ್ಷದ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಕೊಡಿಗೇಹಳ್ಳಿ ಸಮೀಪದ ಸಹಕಾರ ನಗರದಲ್ಲಿ ನಡೆದಿದೆ.
ಬಳ್ಳಾರಿ ಶಿರಗುಪ್ಪ ಮೂಲದ ಸಂಜೀವಪ್ಪ ಕೆಲ ವರ್ಷಗಳ ಹಿಂದೆಯೇ ಸಂಸಾರ ಸಮೇತ ಬೆಂಗಳೂರಿಗೆ ಬಂದಿದ್ದರು. ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಸಂಜೀವಪ್ಪ ಪುತ್ರಿ ನಾಗವೇಣಿ ಖಾಸಗಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದಳು. ಆಗಸ್ಟ್ 2 ರಂದು ಆಕೆಯ ಹುಟ್ಟು ಹಬ್ಬವಿತ್ತು.
ಹುಟ್ಟು ಹಬ್ಬಕ್ಕಾಗಿ ಹೊಸ ಬಟ್ಟೆಬೇಕು ಎಂದು ಒಂದು ವಾರದಿಂದ ಪೋಷಕರಲ್ಲಿ ಒತ್ತಾಯಿಸುತ್ತಿದ್ದಳು. ಆಧರೆ ಪೋಷಕರು ಈ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಭಾನುವಾರ ಕೂಡಾ ಹೊಸ ಬಟ್ಟೆಗಾಗಿ ಪಟ್ಟು ಹಿಡಿದಿದ್ದಳು, ಪೋಷಕರು ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದರಿಂದ ಬೇಸರಗೊಂಡ ಈಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಈ ಬಗ್ಗೆ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Discussion about this post