ಮಂಗಳೂರು : ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಮುಡಿಪುವಿನಲ್ಲಿ ಚಿನ್ನದ ಅಂಗಡಿಯ ಗೋಡೆ ಕೊರೆದು ಒಳನುಗ್ಗಿದ ಕಳ್ಳರು ಬೆಳ್ಳಿ ಸಾಮಾಗ್ರಿ ದೋಚಿದ ಘಟನೆ ನಡೆದಿದೆ. ಆದರೆ ಮಾಲೀಕರು ಅಂಗಡಿ ರಕ್ಷಣೆಗೆ ತಂತ್ರಜ್ಞಾನದ ಮೊರೆ ಹೋಗಿದ್ದ ಕಾರಣ ಭಾರೀ ಅನಾಹುತವೊಂದು ತಪ್ಪಿದೆ.
ಮುಡಿಪುವಿನಲ್ಲಿರುವ ಗೋಲ್ಡ್ ಕಿಂಗ್ ಜ್ಯುವೆಲ್ಲರಿಯಲ್ಲಿ ಈ ಘಟನೆ ನಡೆದಿದ್ದು, ಗುರುವಾರ ರಾತ್ರಿ ಮಾಲೀಕ ಇಬ್ರಾಹಿಂ ಮಾಲೀಕತ್ವದ ಅಂಗಡಿ ಬೀಗ ಹಾಕಿ ಕುರ್ನಾಡುವಿನಲ್ಲಿರುವ ತಮ್ಮ ಮನೆಗೆ ತೆರಳಿದ್ದರು. ರಾತ್ರಿ ಕಳ್ಳರು ಗೋಡೆ ಕೊರೆದು ಒಳನುಗ್ಗುತ್ತಿದ್ದಂತೆ ಸೈರನ್ ಮೊಳಗಲಾರಂಭಿಸಿದೆ.

ಅಂಗಡಿಯಲ್ಲಿ ಸೈರನ್ ಆದರೆ ಅದು ಇಬ್ರಾಹಿಂ ಅವರ ಮೊಬೈಲ್ ನಲ್ಲಿ ಅಲರ್ಟ್ ಕೊಡುತ್ತಿತ್ತು. ಹೀಗಾಗಿ ಇಬ್ರಾಹಿಂ ಅವರ ಮೊಬೈಲ್ ಕೂಡಾ ಅಲರ್ಟ್ ಬರುತ್ತಿದ್ದಂತೆ 10 ನಿಮಿಷಗಳಲ್ಲಿ ಜ್ಯುವೆಲ್ಲರಿ ಮಾಲೀಕ ಇಬ್ರಾಹಿಂ ಅಂಗಡಿ ತಲುಪಿದ್ದರು.ಆದರೆ ಸೈರನ್ ಸದ್ದಿಗೆ ಬೆಚ್ಚಿ ಬಿದ್ದ ಖದೀಮರು ಬೆಳ್ಳಿ ಸರದೊಂದಿಗೆ ಪರಾರಿಯಾಗಿದ್ದಾರೆ.
ಇದೇ ವೇಳೆ ಘಟನಾ ಸ್ಥಳಕ್ಕೆ ಕೊಣಾಜೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Discussion about this post