ಕೊರೊನಾ ಲಾಕ್ಡೌನ್ನಿಂದಾಗಿ ಸ್ಥಗಿತಗೊಂಡಿದ್ದ ಧಾರಾವಾಹಿ ಶೂಟಿಂಗ್ ಮತ್ತೆ ಪ್ರಾರಂಭಿಸಲು ಸರ್ಕಾರ ಷರತ್ತು ಬದ್ಧ ಅನುಮತಿ ನೀಡಿದೆ. ಈ ಬಗ್ಗೆ ಮನವಿ ಮಾಡಿಕೊಳ್ಳಲು ಇತ್ತೀಚೆಗೆ ತಾರಾ ನೇತೃತ್ವದ ನಿಯೋಗ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಧಾರಾವಾಹಿ ಶೂಟಿಂಗ್ಗೆ ಅನುಮತಿ ನೀಡುವಂತೆ ಮನವಿ ಮಾಡಿಕೊಂಡಿದ್ದರು.
ಜೊತೆಗೆ ಆರ್ ಅಶೋಕ್ ಅವರನ್ನು ಭೇಟಿ ಮಾಡಿದ್ದ ಚಿತ್ರರಂಗದ ನಿಯೋಗ ಧಾರಾವಾಹಿ ಮತ್ತು ಸೀರಿಯಲ್ ಶೂಟಿಂಗ್ ಗೆ ಅನುಮತಿ ಕೇಳಿತ್ತು. ಇದೀಗ ಕೇವಲ ಧಾರಾವಾಹಿ ಶೂಟಿಂಗ್ ಗೆ ಅನುಮತಿ ಕೊಟ್ಟಿದೆ.
ಸಿಎಂ ಯಡಿಯೂರಪ್ಪ ಅವರು ಸೀರಿಯಲ್ ಶೂಟಿಂಗ್ ಗೆ ಗ್ರೀನ್ ಸಿಗ್ನಲ್ ಕೊಟ್ಟಿರುವುದರಿಂದ ಧಾರಾವಾಹಿ ಚಿತ್ರೀಕರಣ ಮರು ಪ್ರಾರಂಭಗೊಳ್ಳಲಿದೆ.
Discussion about this post